AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಆ ಒಂದು ಐಪಿಎಲ್ ಪಂದ್ಯದ ಸೋಲಿನ ಆಘಾತದಿಂದ ನನಗೆ ಈಗಲೂ ಹೊರಬರಲಾಗುತ್ತಿಲ್ಲ; ಕೊಹ್ಲಿ

Virat Kohli: ಆ ಪಂದ್ಯದಲ್ಲಿ ಸೋಲು ನಿರಾಶಾದಾಯಕವಾಗಿತ್ತು. ನಮಗೆ ಗೆಲ್ಲುವ ಅವಕಾಶ ಸಿಕ್ಕಿತ್ತು. ಜೊತೆಗೆ ನಾವು ಗುರಿಯ ಹತ್ತಿರ ಇದ್ದೆವು. ಆದರೆ ಗೆಲುವು ನಮ್ಮ ಕೈ ಸೇರಲಿಲ್ಲ.

Virat Kohli: ಆ ಒಂದು ಐಪಿಎಲ್ ಪಂದ್ಯದ ಸೋಲಿನ ಆಘಾತದಿಂದ ನನಗೆ ಈಗಲೂ ಹೊರಬರಲಾಗುತ್ತಿಲ್ಲ; ಕೊಹ್ಲಿ
ಕೊಹ್ಲಿ
TV9 Web
| Edited By: |

Updated on: Feb 07, 2022 | 4:44 PM

Share

ವಿರಾಟ್ ಕೊಹ್ಲಿ (Virat Kohli) ಯ ಐಪಿಎಲ್ ವೃತ್ತಿಜೀವನವು ಇದುವರೆಗೆ 207 ಪಂದ್ಯಗಳಿಂದ ಕೂಡಿದೆ. ಈ ಪಂದ್ಯಾವಳಿಯಲ್ಲಿ ಅವರು ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಜೊತೆಗೆ ಅನೇಕ ಪಂದ್ಯಗಳು ಸಹ ಸ್ಮರಣೀಯವಾಗಿವೆ. ಅಂತಹ ಸ್ಮರಣೀಯ ಪಂದ್ಯದ ಬಗ್ಗೆ ಮಾಜಿ ಆರ್​ಸಿಬಿ ನಾಯಕ ಕೊಹ್ಲಿ ಮಾತನಾಡಿದ್ದಾರೆ. 207 ಐಪಿಎಲ್ ಪಂದ್ಯಗಳಲ್ಲಿ ಕೊಹ್ಲಿಗೆ ಈಗಲೂ ಕಾಡುತ್ತಿರುವ ಪಂದ್ಯದ ಬಗ್ಗೆ ವಿರಾಟ್ ಹೇಳಿಕೊಂಡಿದ್ದಾರೆ. ಆ ಪಂದ್ಯ ನಡೆದು ಹಲವು ವರ್ಷಗಳು ಕಳೆದಿದ್ದರು ಸಹ ಕೊಹ್ಲಿ ಆ ಒಂದು ಪಂದ್ಯದ ಸೋಲನ್ನು ಅರಗಿಸಿಕೊಳ್ಳಲಾಗದೆ ಕೊರಗುತ್ತಿದ್ದಾರೆ. ಆ ಪಂದ್ಯ ಯಾವುದು ಎಂಬುದನ್ನು ವಿರಾಟ್ ಕೊಹ್ಲಿ RCB ಪಾಡ್‌ಕಾಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಕಾರ, ಆ ಪಂದ್ಯ ಐಪಿಎಲ್ 2016 ರ ಫೈನಲ್ ಆಗಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ ನೋವು ಅನುಭವಿಸಲು ಕಾರಣವನ್ನೂ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅಥವಾ ಆರ್‌ಸಿಬಿ ಯಾವುದೇ ಐಪಿಎಲ್ ಕಪ್ ಗೆದ್ದಿಲ್ಲ. 2009 ಮತ್ತು 2011 ರ ನಂತರ 2016 ಸೇರಿದಂತೆ ಆರ್​ಸಿಬಿ ತಂಡ 3ನೇ ಬಾರಿಗೆ ಫೈನಲ್ ಆಡಿದೆ. ಅದರಲ್ಲೂ 2016 ರಂದು ನಡೆದ ಐಪಿಎಲ್ ಫೈನಲ್​ ಕೊಹ್ಲಿಗೆ ವಿಶೇಷವಾಗಿದೆ. ಈ ಪಂದ್ಯವು ರಾಯಲ್ ಚಾಲೆಂಜರ್ಸ್‌ನ ತವರು ಮೈದಾನವಾಗಿದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಕೆಎಲ್ ರಾಹುಲ್ ಅವರಂತಹ ಬಿಗ್ ಸ್ಟಾರ್‌ಗಳು ಆಡುತ್ತಿದ್ದರು. 209 ರನ್‌ಗಳ ಗುರಿ ಬೆನ್ನತ್ತಿದ ತಂಡ ಕೂಡ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿತು. ಆದರೆ, ಇದರ ಹೊರತಾಗಿಯೂ, ಆರ್​ಸಿಬಿ ಐಪಿಎಲ್ 2016 ರ ಫೈನಲ್‌ನಲ್ಲಿ 8 ರನ್‌ಗಳ ಸಣ್ಣ ಅಂತರದಿಂದ ಸೋತಿತ್ತು.

2016ರ ಐಪಿಎಲ್ ಫೈನಲ್‌ ಸೋಲಿನ ನೋವನ್ನು ಕೊಹ್ಲಿ ಇನ್ನೂ ಮರೆತಿಲ್ಲ ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಕೊಹ್ಲಿ, ನಾವು ಇಡೀ ಋತುವಿನಲ್ಲಿ ಆಡಿದ ರೀತಿ ಅದ್ಭುತವಾಗಿತ್ತು. ಅಲ್ಲದೆ ಫೈನಲ್​ ಕೂಡ ಬೆಂಗಳೂರಿನಲ್ಲಿ ಫಿಕ್ಸ್ ಆಗಿತ್ತು. ಹೀಗಾಗಿ ಈ ಪಂದ್ಯ ನಮ್ಮ ಹೆಸರಿಗೆ ಬರೆದಂತೆ ಎಂದು ಎಲ್ಲರೂ ಹೇಳುತ್ತಿದ್ದರು. ಆ ಪಂದ್ಯದಲ್ಲಿ ನಾವು ಉತ್ತಮ ಆರಂಭ ಮಾಡಿದ್ದೇವು. 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆವು. ಅಷ್ಟರಲ್ಲಾಗಲೇ ವಿಜಯದ ತಯಾರಿಯೂ ನಡೆದಿತ್ತು. ಆದರೆ ನಂತರ ನಾವು ಪಂದ್ಯವನ್ನು ಕಳೆದುಕೊಂಡ ರೀತಿ, ನನಗೆ ಇನ್ನೂ ನೋವುಂಟುಮಾಡುತ್ತಿದೆ ಎದು ಕೊಹ್ಲಿ ಹೇಳಿಕೊಂಡಿದ್ದಾರೆ.

ಆ ಪಂದ್ಯದಲ್ಲಿ ಸೋಲು ನಿರಾಶಾದಾಯಕವಾಗಿತ್ತು. ನಮಗೆ ಗೆಲ್ಲುವ ಅವಕಾಶ ಸಿಕ್ಕಿತ್ತು. ಜೊತೆಗೆ ನಾವು ಗುರಿಯ ಹತ್ತಿರ ಇದ್ದೆವು. ಆದರೆ ಗೆಲುವು ನಮ್ಮ ಕೈ ಸೇರಲಿಲ್ಲ. ಇದನ್ನು ಸನ್‌ರೈಸರ್ಸ್ ಹೈದರಾಬಾದ್‌ನ ಅದೃಷ್ಟ ಎಂದು ಕರೆಯಲು ಸಾಧ್ಯವಿಲ್ಲ, ಏಕೆಂದರೆ ಅವರು ಆ ದಿನವೂ ಉತ್ತಮವಾಗಿ ಆಡಿದ್ದರು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

IPL 2021 ರ ನಂತರ RCB ನಾಯಕತ್ವ ತೊರೆದ ಕೊಹ್ಲಿ ಒಟ್ಟಾರೆ ಆ ಸೀಸನ್ ನಂಬಲಸಾಧ್ಯವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಪರೂಪಕ್ಕೆ ಕಾಣಸಿಗುವ ಸೂಪರ್ ಫಾರ್ಮ್‌ನಲ್ಲಿ ನಮ್ಮ ತಂಡದ ಅಗ್ರ ಫಾರ್ಮ್ ಇತ್ತು ಎಂದಿದ್ದಾರೆ. IPL 2021 ರ ಅಂತ್ಯದ ನಂತರ ಕೊಹ್ಲಿ RCB ನಾಯಕತ್ವವನ್ನು ತೊರೆದಿದ್ದಾರೆ. ಅವರನ್ನು ಐಪಿಎಲ್ 2022 ಕ್ಕೆ ಫ್ರಾಂಚೈಸಿ ಉಳಿಸಿಕೊಂಡಿದೆ. ಮತ್ತು, ಈ ಬಾರಿ ಅವರು ಆಟಗಾರನಾಗಿ ಮಾತ್ರ ಆಡಲಿದ್ದಾರೆ. 8 ವರ್ಷಗಳ ಕಾಲ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ ಆಡಿದ ಏಕೈಕ ಕ್ರಿಕೆಟಿಗರಾಗಿದ್ದಾರೆ.

ಇದನ್ನೂ ಓದಿ:IND vs WI: ಕೈ ಬಿಟ್ಟ ಆರ್​ಸಿಬಿ! ಮುಂಬೈ ತಂಡ ಸೇರ್ತಾರಾ ಯಜುವೇಂದ್ರ ಚಹಲ್? ಸುಳಿವು ಕೊಟ್ರಾ ರೋಹಿತ್?

IND vs WI: ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಮಿಂಚಿಂಗ್; ಕೊಹ್ಲಿ- ಸೆಹ್ವಾಗ್ ದಾಖಲೆಯೂ ಉಡೀಸ್

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ