AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಮೈದಾನದಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ: ಯಾಕೆ?, ವಿಡಿಯೋ ನೋಡಿ

India vs Australia 1st Test: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನ ಎರಡನೇ ದಿನದ 48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಆಗ ಏನಾಯಿತು ನೋಡಿ.

Rohit Sharma: ಮೈದಾನದಲ್ಲೇ ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ: ಯಾಕೆ?, ವಿಡಿಯೋ ನೋಡಿ
Rohit Sharma and Virat Kohli
Vinay Bhat
|

Updated on:Feb 11, 2023 | 8:31 AM

Share

ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಎರಡು ದಿನಗಳ ಆಟ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದಂತಿದೆ. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಸೀಸ್ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸುತ್ತ ಕ್ರೀಸ್​ನಲ್ಲಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿ 144 ರನ್​ಗಳ ಮುನ್ನಡೆಯಲ್ಲಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಶತಕ ತಂಡದ ಮೊತ್ತ ಹೆಚ್ಚಲು ಸಹಾಯ ಮಾಡಿತು. ಆದರೆ, ಇದಕ್ಕೂ ಮುನ್ನ ಹಿಟ್​ಮ್ಯಾನ್ ಔಟ್ ಆಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ (Virat Kohli).

48ನೇ ಓವರ್​ನ ನೇಥನ್ ಲ್ಯಾನ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಮಿಡ್ ವಿಕೆಟ್ ಕಡೆ ಹೊಡೆದು ಓಡಲು ಮುಂದಾದರು. ನಾನ್​ ಸ್ಟ್ರೈಕರ್​ನಲ್ಲಿದ್ದ ರೋಹಿತ್ ಶರ್ಮಾಗೆ ಓಡಿ ಬರುವಂತೆ ಕೊಹ್ಲಿ ಕರೆ ನೀಡಿದರು. ಆದರೆ, ಚೆಂಡು ದೂರ ತೆರಳದೆ ಅಲ್ಲೆ ಇದ್ದ ಫೀಲ್ಡರ್ ಕೈಗೆ ಸೇರಿತು. ಒಂದು ರನ್ ಕಲೆಹಾಕಲೂ ಅಲ್ಲಿ ಸಮಯವಿರಲಿಲ್ಲ. ಅತ್ತ ಕೊಹ್ಲಿ ಮಾತಿನಂತೆ ರೋಹಿತ್ ಅರ್ಧದ ವರೆಗೆ ಓಡಿ ಬಂದರು. ಚೆಂಡು ಅಲ್ಲೆ ಸರ್ಕಲ್​ನಲ್ಲಿ ಇದ್ದಿರುವುದನ್ನು ಗಮನಿಸಿದ ಕೊಹ್ಲಿ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿ ನೋ ಎಂಬ ಕರೆ ಕೊಟ್ಟರು. ವಿಕೆಟ್ ಬಿಟ್ಟು ರನ್​ಗೆಂದು ಅರ್ಧ ದಾರಿಯ ವರೆಗೆ ಬಂದಿದ್ದ ರೋಹಿತ್ ಕೂಡಲೇ ಹಿಂತಿರುಗಿ ನಾನ್​ ಸ್ಟ್ರೈಕರ್ ಕಡೆ ತಿರುಗಿ ಓಡಿದರು.

ಇದನ್ನೂ ಓದಿ
Image
IND vs AUS 1st Test: ಕುತೂಹಲದತ್ತ ಇಂಡೋ-ಆಸೀಸ್ ಪ್ರಥಮ ಟೆಸ್ಟ್: ಮೂರನೇ ದಿನದಾಟದತ್ತ ಎಲ್ಲರ ಚಿತ್ತ
Image
IND vs AUS: ಚೀಟರ್ ಎಂದ ಆಸೀಸ್ ಮೀಡಿಯಾಗಳಿಗೆ ಬ್ಯಾಟ್​ನಿಂದಲೇ ಉತ್ತರಿಸಿ, ವಿಶ್ವ ದಾಖಲೆ ಮುರಿದ ಜಡೇಜಾ!
Image
IND vs AUS: ಚೊಚ್ಚಲ ಪಂದ್ಯವನ್ನಾಡುವ ಬೌಲರೆಂದರೆ ಕೊಹ್ಲಿಗೆ ಭಯ! ಇದು ಅಂಕಿ- ಅಂಶ ಹೇಳಿದ ಸತ್ಯ
Image
IND vs AUS: ಮತ್ತೆ ಸ್ಪಿನ್ನರ್ ಎದುರು ಮಂಕಾದ ಕೊಹ್ಲಿ; ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ

Jasprit Bumrah: ಮೊದಲ ಟೆಸ್ಟ್ ನಡುವೆ ಟೀಮ್ ಇಂಡಿಯಾಕ್ಕೆ ದೊಡ್ಡ ಶಾಕ್: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್​ಪ್ರೀತ್ ಬುಮ್ರಾ ಔಟ್

ರೋಹಿತ್ ಶರ್ಮಾ ಡೈವ್ ಬಿದ್ದು ಕೂದಲೆಳೆಯ ಅಂತರದಿಂದ ರನೌಟ್​ನಿಂದ ಪಾರಾದರು. ತಪ್ಪು ಸಂಪೂರ್ಣವಾಗಿ ವಿರಾಟ್ ಮೇಲಿತ್ತು. ರನ್ ಗಳಿಸುವ ಅವಕಾಶ ಇಲ್ಲದಿದ್ದರೂ ಓಡಿ ಬರುವಂತೆ ರೋಹಿತ್​ಗೆ ಕರೆ ನೀಡಿದ್ದು ಕೊಹ್ಲಿಯ ತಪ್ಪಾಗಿತ್ತು. ಇದನ್ನು ಅರಿತ ಕೊಹ್ಲಿ ತಕ್ಷಣವೇ ರೋಹಿತ್ ಬಳಿ ಕೈಸನ್ನೆ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್​ನ ಇಂದಿನ ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗರೂ ಪಡೆಯನ್ನು 177 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಎರಡನೇ ದಿನದಾಟದಲ್ಲಿ ಭಾರತ ಪರ ಅಶ್ವಿನ್ 62 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಪೂಜಾರ (7), ವಿರಾಟ್ ಕೊಹ್ಲಿ 12, ಸೂರ್ಯಕುಮಾರ್ ಯಾದವ್ (8) ಬೇಗನೆ ಔಟಾದರು. 6ನೇ ವಿಕೆಟ್​ಗೆ ವೀಂದ್ರ ಜಡೇಜಾ- ರೋಹಿತ್ ಜೊತೆಯಾಗಿ ತಂಡದ ಮೊತ್ತವನ್ನು 200ರ ಗಡಿ ದಾಡಿಸಿದರು. 61 ರನ್​ಗಳ ಕಾಣಿಕೆ ನೀಡಿದರು.

ರೋಹಿತ್ 120 ರನ್ ಗಳಿಸಿ ಔಟಾದರೆ ಬಂದ ಬೆನ್ನಲ್ಲೇ ಶ್ರೀಕರ್ ಭರತ್ (8) ಮೋಡಿ ಮಾಡಲು ವಿಫಲರಾದರು. ಈ ವೇಳೆ ಜಡೇಜಾ ಜೊತೆಯಾದ ಅಕ್ಷರ್ ಪಟೇಲ್ ಆಸೀಸ್ ಬೌಲರ್​ಗಳನ್ನು ಧೈರ್ಯದಿಂದ ಎದುರಿಸಿ ಭರ್ಜರಿ ಆಟ ಪ್ರದರ್ಶಿಸಿದರು. ಜಡೇಜಾ 66 ರನ್ ಗಳಿಸಿ ಹಾಗೂ ಅಕ್ಷರ್ ಪಟೇಲ್ 52 ಬಾರಿಸಿ ಕ್ರೀಸ್​ನಲ್ಲಿದ್ದಾರೆ. ಭಾರತ 114 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Sat, 11 February 23

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ