AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK 2022 Match Prediction: ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು; ಯಾರಿಗೆ ಸಿಗಲಿದೆ ಜಯ?

RCB vs CSK 2022 Match Prediction: ಇಲ್ಲಿಯವರೆಗೆ, ಹತ್ತು ಪಂದ್ಯಗಳಲ್ಲಿ RCB ಆಟಗಾರರು ಕೇವಲ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ, ಅದರಲ್ಲಿ ಎರಡು ಅರ್ಧಶತಕಗಳನ್ನು ನಾಯಕ ಫಾಫ್ ಡು ಪ್ಲೆಸಿಸ್ ಬಾರಿಸಿದ್ದಾರೆ. ಇದು ಅವರ ಬ್ಯಾಟಿಂಗ್ ಮಟ್ಟವನ್ನು ಸಾಬೀತುಪಡಿಸುತ್ತದೆ. ಅದೇ ಸಮಯದಲ್ಲಿ, ಚೆನ್ನೈ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದೆ. ಆದರೆ ತಂಡದ ಪ್ರತಿ ಬೌಲರ್‌ಗಳ ಎಕಾನಮಿ ರೇಟ್ ಪ್ರತಿ ಓವರ್‌ಗೆ 7.50 ಕ್ಕಿಂತ ಕಡಿಮೆಯಿಲ್ಲ.

RCB vs CSK 2022 Match Prediction: ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು; ಯಾರಿಗೆ ಸಿಗಲಿದೆ ಜಯ?
CSK vs RCB
TV9 Web
| Updated By: ಪೃಥ್ವಿಶಂಕರ|

Updated on: May 03, 2022 | 5:00 PM

Share

ಐಪಿಎಲ್ 2022 (IPL 2022)ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಎದುರಿಸಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ದುರ್ಬಲ ಬೌಲಿಂಗ್ ಅನ್ನು ಸುಧಾರಿಸಬೇಕಾಗಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಬೇಕಾದರೆ, ಅದು ತನ್ನ ಕಳಪೆ ಬ್ಯಾಟಿಂಗ್ ಅನ್ನು ಸುಧಾರಿಸಬೇಕಾಗಿದೆ. ಎರಡೂ ತಂಡಗಳು ಕಳಪೆ ಫಾರ್ಮ್‌ನಿಂದ ಪರದಾಡುತ್ತಿವೆ. ಚೆನ್ನೈನ ಪ್ಲೇಆಫ್ ಭರವಸೆ ಹೇಗೋ ಜೀವಂತವಾಗಿದೆ. ಅವರು ಟೂರ್ನಿಯಲ್ಲಿ ಉಳಿದುಕೊಳ್ಳಲು ಹೇಗಾದರೂ ಈ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಅದೇ ಸಮಯದಲ್ಲಿ, ಫಾಫ್ ಡು ಪ್ಲೆಸಿಸ್ ( Faf du Plessis) ನಾಯಕತ್ವದ ಆರ್‌ಸಿಬಿಗೆ ಈ ಪಂದ್ಯವು ತುಂಬಾ ಮುಖ್ಯವಾಗಿದೆ.

ಇಲ್ಲಿಯವರೆಗೆ, ಹತ್ತು ಪಂದ್ಯಗಳಲ್ಲಿ RCB ಆಟಗಾರರು ಕೇವಲ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ, ಅದರಲ್ಲಿ ಎರಡು ಅರ್ಧಶತಕಗಳನ್ನು ನಾಯಕ ಫಾಫ್ ಡು ಪ್ಲೆಸಿಸ್ ಬಾರಿಸಿದ್ದಾರೆ. ಇದು ಅವರ ಬ್ಯಾಟಿಂಗ್ ಮಟ್ಟವನ್ನು ಸಾಬೀತುಪಡಿಸುತ್ತದೆ. ಅದೇ ಸಮಯದಲ್ಲಿ, ಚೆನ್ನೈ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದೆ. ಆದರೆ ತಂಡದ ಪ್ರತಿ ಬೌಲರ್‌ಗಳ ಎಕಾನಮಿ ರೇಟ್ ಪ್ರತಿ ಓವರ್‌ಗೆ 7.50 ಕ್ಕಿಂತ ಕಡಿಮೆಯಿಲ್ಲ. ಮಹೇಶ್ ಟೀಕ್ಷಣ 7. 54 ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರೆ, ಡ್ವೇನ್ ಬ್ರಾವೋ ಮತ್ತು ಮುಖೇಶ್ ಚೌಧರಿ ಕ್ರಮವಾಗಿ 8.73 ಮತ್ತು 9.82 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಧೋನಿ ಮೇಲೆ ಕಣ್ಣು ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ ನಂತರ ಈ ಪಂದ್ಯ ರೋಚಕವಾಗಿದೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ಸಾರಥ್ಯ ವಹಿಸಿಕೊಂಡ ಬಳಿಕ ಗೆಲುವು ದಾಖಲಿಸಿದ್ದು, ಗೆಲುವಿನ ನಾಗಾಲೋಟವನ್ನು ಕಾಯ್ದುಕೊಳ್ಳಲು ಸಮರ್ಥರೇ ಎಂಬುದನ್ನು ಕೂಡ ಕಾದು ನೋಡಬೇಕಿದೆ. ಕಳಪೆ ಫಾರ್ಮ್‌ನೊಂದಿಗೆ ಹೋರಾಡಿದ ರವೀಂದ್ರ ಜಡೇಜಾ ಅವರ ನಾಯಕತ್ವವನ್ನು ತೊರೆದ ನಂತರ, ಧೋನಿಗೆ ಅಧಿಕಾರವನ್ನು ನೀಡಲಾಯಿತು. ನಂತರ CSK ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಚೆನ್ನೈ ಒಂಬತ್ತು ಪಂದ್ಯಗಳಿಂದ ಆರು ಅಂಕಗಳನ್ನು ಹೊಂದಿದೆ. ಆರ್‌ಸಿಬಿ ಒಂಬತ್ತು ಪಂದ್ಯಗಳಿಂದ ಹತ್ತು ಅಂಕಗಳನ್ನು ಹೊಂದಿದೆ ಮತ್ತು ಸತತ ಮೂರು ಸೋಲುಗಳನ್ನು ಅನುಭವಿಸಿದರೂ ಐದನೇ ಸ್ಥಾನದಲ್ಲಿದೆ. RCB ಈ ಆವೃತ್ತಿಯಲ್ಲಿ ಅತ್ಯಂತ ಕಡಿಮೆ ಸ್ಕೋರ್ 68 ರನ್ ಗಳಿಸಿದ್ದರೆ, ಇನ್ನೊಂದು ಪಂದ್ಯದಲ್ಲಿ 145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ಬ್ಯಾಟಿಂಗ್ ಸುಧಾರಿಸಬೇಕಿದೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ಕೊಹ್ಲಿ 53 ಎಸೆತಗಳಲ್ಲಿ 58 ರನ್ ಗಳಿಸಿದರು. ಆದರೆ ತಂಡವು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾದ ಪಿಚ್‌ನಲ್ಲಿ ಕಡಿಮೆ ಸ್ಕೋರ್ ಗಳಿಸಿದ್ದು ತಂಡದ ಸೋಲಿಗೆ ಕಾರಣವಾಯಿತು. ಕೊಹ್ಲಿ ಹತ್ತು ಪಂದ್ಯಗಳಲ್ಲಿ 186 ರನ್ ಗಳಿಸಿದ್ದಾರೆ ಮತ್ತು ಡು ಪ್ಲೆಸಿಸ್ ಒಂಬತ್ತು ಪಂದ್ಯಗಳಲ್ಲಿ 278 ರನ್ ಗಳಿಸಿದ್ದಾರೆ. ಆದರೆ ಕೊಹ್ಲಿ 58 ರನ್ ಗಳಿಸಲು ಸುಮಾರು ಒಂಬತ್ತು ಓವರ್‌ಗಳನ್ನು ತೆಗೆದುಕೊಂಡರು, ಜೊತೆಗೆ ತಂಡವನ್ನು ದೊಡ್ಡ ಸ್ಕೋರ್ ಕಡೆಗೆ ತಲುಪಿಸುವಲ್ಲಿ ವಿಫಲರಾದರು. ದಿನೇಶ್ ಕಾರ್ತಿಕ್ (ಹತ್ತು ಪಂದ್ಯಗಳಲ್ಲಿ 218 ರನ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (ಏಳು ಪಂದ್ಯಗಳಲ್ಲಿ 157 ರನ್) ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಲ್ಲದೆ ಈಗ ಆರ್​ಸಿಬಿ ದುರ್ಬಲ ಬೌಲಿಂಗ್ ದಾಳಿಯನ್ನು ಎದುರಿಸುತ್ತಿದ್ದು, ಚೆನ್ನೈನ ಚೌಧರಿ ಅಥವಾ ಸಿಮರ್‌ಜಿತ್ ಸಿಂಗ್ ಅನುಭವ ಹೊಂದಿಲ್ಲ, ಆದ್ದರಿಂದ ಆರ್​ಸಿಬಿಗೆ ಈ ಪಂದ್ಯವನ್ನು ಗೆಲ್ಲವುದಕ್ಕೆ ಸಹಾಯ ಮಾಡಲಿದೆ.

ಇದನ್ನೂ ಓದಿ:IPL 2022: ಮುಂಬೈನಲ್ಲಿ ಮನೆ ಖರೀದಿಗಾಗಿ ತನ್ನ 5 ವರ್ಷಗಳ ಸಂಪಾದನೆಯನ್ನೇಲ್ಲ ಖರ್ಚು ಮಾಡಿದ ಪೃಥ್ವಿ ಶಾ..!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ