AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Test Championship: ಮಳೆಯಿಂದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ; ತಲಾ 4 ಪಾಯಿಂಟ್ ಪಡೆದ ಉಭಯ ದೇಶಗಳು

ICC World Test Championship: ಹೊಸ ಚಾಂಪಿಯನ್‌ಶಿಪ್‌ಗಾಗಿ, ಪ್ರತಿ ಟೆಸ್ಟ್ ಗೆಲುವಿಗೆ 12 ಅಂಕಗಳನ್ನು ಇರಿಸಲಾಗಿದ್ದು, ಡ್ರಾ ಅಥವಾ ಟೈ ಸಂದರ್ಭದಲ್ಲಿ ಎರಡೂ ತಂಡಗಳಿಗೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ.

Test Championship: ಮಳೆಯಿಂದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ; ತಲಾ 4 ಪಾಯಿಂಟ್ ಪಡೆದ ಉಭಯ ದೇಶಗಳು
ವಿರಾಟ್ ಕೊಹ್ಲಿ- ಜೋ ರೂಟ್
TV9 Web
| Edited By: |

Updated on: Aug 09, 2021 | 6:39 AM

Share

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾ ಆಗಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಆಗಸ್ಟ್ 4 ರಂದು ಆರಂಭವಾದ ಈ ಪಂದ್ಯವು ಐದನೇ ಮತ್ತು ಕೊನೆಯ ದಿನದ ಮಳೆಯಿಂದಾಗಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಡ್ರಾದಲ್ಲಿ ಕೊನೆಗೊಂಡಿತು. ಗೆಲುವಿಗೆ 157 ರನ್ ಗಳ ಅಗತ್ಯವಿತ್ತು ಮತ್ತು 9 ವಿಕೆಟ್ ಬಾಕಿ ಉಳಿದಿದ್ದರಿಂದ ಭಾರತ ತಂಡವು ಕೊನೆಯ ದಿನ ಗೆಲುವನ್ನು ದಾಖಲಿಸುವ ಅವಕಾಶವನ್ನು ಹೊಂದಿತ್ತು, ಆದರೆ ಮಳೆ ಈ ಅವಕಾಶವನ್ನು ಕಸಿದುಕೊಂಡಿತು. ಈ ರೀತಿಯಾಗಿ, ಯಾವುದೇ ತಂಡವು ಸರಣಿಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಈ ಸರಣಿಯ ವಿಶೇಷವೆಂದರೆ ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿ ಪ್ರಾರಂಭವಾಯಿತು, ಆದ್ದರಿಂದ ಪ್ರತಿ ಟೆಸ್ಟ್ ಫಲಿತಾಂಶವು ತುಂಬಾ ಮೌಲ್ಯಯುತವಾಗಿದೆ. ಡಬ್ಲ್ಯುಟಿಸಿಯ ಪಾಯಿಂಟ್ಸ್ ವ್ಯವಸ್ಥೆಯಡಿ, ಪಂದ್ಯವು ಡ್ರಾ ಆಗಿದ್ದರಿಂದ ಎರಡೂ ತಂಡಗಳಿಗೆ 4 ಅಂಕಗಳನ್ನು ನೀಡಲಾಗಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ, ಮೊದಲ ಸ್ಥಾನದಲ್ಲಿದ್ದ ಟೀಂ ಇಂಡಿಯಾ, ಹೆಚ್ಚು ಅಂಕಗಳನ್ನು ಗಳಿಸಿ, ಫೈನಲ್‌ನಲ್ಲಿ ಆಡಿತು. ಅಲ್ಲಿ ಭಾರತವನ್ನು ನ್ಯೂಜಿಲೆಂಡ್ ಸೋಲಿಸಿತು. ಈ ಬಾರಿ ಆ ಸೋಲನ್ನು ಸರಿದೂಗಿಸಲು ಭಾರತೀಯ ತಂಡವು ಸಂಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಮೊದಲ ಟೆಸ್ಟ್‌ನಲ್ಲಿಯೇ ಮಳೆಯು ಭಾರತ ಪೂರ್ಣ ಅಂಕಗಳನ್ನು ಪಡೆಯುವ ಅವಕಾಶವನ್ನು ಕಸಿದುಕೊಂಡಿತು.

ಟೆಸ್ಟ್ ಗೆಲುವಿಗೆ 12 ಅಂಕಗಳು ಐಸಿಸಿ ಕಳೆದ ತಿಂಗಳು ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಪಾಯಿಂಟ್ಸ್ ವ್ಯವಸ್ಥೆಯನ್ನು ಘೋಷಿಸಿತ್ತು, ಇದು ಹಿಂದಿನ ಆವೃತ್ತಿಗಿಂತ ಭಿನ್ನವಾಗಿತ್ತು. ಹೊಸ ಚಾಂಪಿಯನ್‌ಶಿಪ್‌ಗಾಗಿ, ಪ್ರತಿ ಟೆಸ್ಟ್ ಗೆಲುವಿಗೆ 12 ಅಂಕಗಳನ್ನು ಇರಿಸಲಾಗಿದ್ದು, ಡ್ರಾ ಅಥವಾ ಟೈ ಸಂದರ್ಭದಲ್ಲಿ ಎರಡೂ ತಂಡಗಳಿಗೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ. ಅಂದರೆ, ಈ ಪಂದ್ಯದಲ್ಲಿ ಭಾರತೀಯ ತಂಡದ ಕೈಯಿಂದ 8 ಅಂಕಗಳು ಜಾರಿದವು. ಇಂಗ್ಲೆಂಡಿನಲ್ಲಿ, ಒಂದು ದಶಕಕ್ಕೂ ಹೆಚ್ಚು ಕಾಲ ಟೆಸ್ಟ್-ಗೆಲುವಿನ ಸರಣಿಯನ್ನು ಗೆಲ್ಲಲು ಭಾರತ ಹೆಣಗಾಡುತ್ತಿದೆ, ಈ ಅಂಕಗಳನ್ನು ಕೈಯಿಂದ ಕಳೆದುಕೊಳ್ಳುವುದು ತಂಡಕ್ಕೆ ಹೊರೆಯಾಗಬಹುದು. ಸರಣಿಯ ಮುಂದಿನ ಪಂದ್ಯ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಆಗಸ್ಟ್ 12 ರಿಂದ ನಡೆಯಲಿದೆ. ಲಾರ್ಡ್ಸ್‌ನಲ್ಲಿ ಟೀಂ ಇಂಡಿಯಾ ದಾಖಲೆ ಉತ್ತಮವಾಗಿಲ್ಲ, ಆದರೆ ಟೆಸ್ಟ್ ಚಾಂಪಿಯನ್‌ಶಿಪ್‌ ಧೃಷ್ಟಿಯಿಂದ ಟೀಮ್ ಇಂಡಿಯಾ ಗೆಲುವಿಗಾಗಿ ಆಡಲೇಬೇಕಾಗಿದೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?