AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2024: ಆರ್​ಸಿಬಿ ಗೆಲುವಿಗೆ ಕಾರಣವಾಯ್ತು ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್.!

WPL 2024: ಪಂದ್ಯದುದ್ದಕ್ಕೂ ಗೆಲುವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಮುಂಬೈ ಕೊನೆಯ 3 ಓವರ್​ಗಳಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಪಂದ್ಯವನ್ನು ಸೋಲಬೇಕಾಯಿತು. ಇತ್ತ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಆರ್​ಸಿಬಿ ವನಿತಾ ಪಡೆ ಅರ್ಹ ಗೆಲುವು ಸಂಪಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿತು. ಅಷ್ಟಕ್ಕೂ ಗೆಲುವಿನ ಫೆವರೇಟ್ ಎನಿಸಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಎಡವಿದೆಲ್ಲಿ ಎಂಬ ಪ್ರಶ್ನೆಗೆ ಎಲ್ಲರು ನೀಡುವ ಉತ್ತರವೆಂದರೆ ಅದು ಮುಂಬೈ ಇನ್ನಿಂಗ್ಸ್​ನ ಕೊನೆಯ 3 ಓವರ್​ಗಳು ಎಂಬುದು.

WPL 2024: ಆರ್​ಸಿಬಿ ಗೆಲುವಿಗೆ ಕಾರಣವಾಯ್ತು ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್.!
ಆರ್​ಸಿಬಿ
ಪೃಥ್ವಿಶಂಕರ
|

Updated on: Mar 16, 2024 | 5:14 PM

Share

ಕೊನೆಗೂ ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಕನಸು ನನಸಾಗಿದೆ. ಊಹೆಗೂ ನಿಲುಕದ ಪ್ರದರ್ಶನ ನೀಡಿದ ಆರ್​ಸಿಬಿ ಮಹಿಳಾ ತಂಡ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಎಲಿಮಿನೇಟರ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯಾನ್ಸ್ (Mumbai Indians vs Royal Challengers Bangalore) ತಂಡವನ್ನು 5 ರನ್​ಗಳಿಂದ ಮಣಿಸಿ ಮೊದಲ ಬಾರಿಗೆ ಡಬ್ಲ್ಯುಪಿಎಲ್‌ ಫೈನಲ್​ಗೇರಿದೆ. ಪಂದ್ಯದುದ್ದಕ್ಕೂ ಗೆಲುವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಮುಂಬೈ ಕೊನೆಯ 3 ಓವರ್​ಗಳಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಪಂದ್ಯವನ್ನು ಸೋಲಬೇಕಾಯಿತು. ಇತ್ತ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಆರ್​ಸಿಬಿ ವನಿತಾ ಪಡೆ ಅರ್ಹ ಗೆಲುವು ಸಂಪಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿತು. ಅಷ್ಟಕ್ಕೂ ಗೆಲುವಿನ ಫೆವರೇಟ್ ಎನಿಸಿಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಎಡವಿದೆಲ್ಲಿ ಎಂಬ ಪ್ರಶ್ನೆಗೆ ಎಲ್ಲರು ನೀಡುವ ಉತ್ತರವೆಂದರೆ ಅದು ಮುಂಬೈ ಇನ್ನಿಂಗ್ಸ್​ನ ಕೊನೆಯ 3 ಓವರ್​ಗಳು ಎಂಬುದು. ಅಷ್ಟಕ್ಕೂ ಕೊನೆಯ ಓವರ್​ಗಳಲ್ಲಿ ನಡೆದಿದ್ದೇನು? ಆರ್​ಸಿಬಿ ಬೌಲರ್​ಗಳು ಮಾಡಿದ ಮ್ಯಾಜಿಕ್ ಏನು ಎಂಬುದನ್ನು ನೋಡುವುದಾದರೆ..

ಕೊನೆಯ 18 ಎಸೆತಗಳಲ್ಲಿ 20 ರನ್ ಗುರಿ

ವಾಸ್ತವವಾಗಿ 17 ಓವರ್ ಮುಕ್ತಾಯಕ್ಕೆ 125 ರನ್ ಕಲೆಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡದ್ದೇ ಗೆಲುವು ಎಂದು ಎಲ್ಲರು ಭಾವಿಸಿದ್ದರು. ಆದರೆ 18ನೇ ಓವರ್​ನಿಂದ ವಿಜಯಲಕ್ಷ್ಮಿ ಆರ್​ಸಿಬಿ ಪರ ವಾಲಿದಳು. ಕೊನೆಯ 18 ಎಸೆತಗಳಲ್ಲಿ 20 ರನ್ ಗುರಿ ಹೊಂದಿದ್ದ ಮುಂಬೈ ಪರ ನಾಯಕಿ ಹರ್ಮನ್‌ಪ್ರೀತ್ ಸ್ಟ್ರೈಕ್​ನಲ್ಲಿದ್ದರು. ಇತ್ತ 18ನೇ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ಆರ್​ಸಿಬಿ ನಾಯಕಿ ಅನಾನುಭವಿ ಶ್ರೇಯಾಂಕ ಪಾಟೀಲ್​ಗೆ ನೀಡಿದರು. ಇದಕ್ಕೂ ಮೊದಲು ಹರ್ಮನ್‌ಪ್ರೀತ್ ಹಾಗೂ ಅಮೆಲಿಯ ಕೇರ್ ನಡುವೆ 50 ರನ್​ಗಳ ಜೊತೆಯಾಟ ನಡೆದಿದ್ದರಿಂದ ಮುಂಬೈ ಈ ಓವರ್​ನಲ್ಲೇ ಪಂದ್ಯ ಮುಗಿಸುತ್ತದೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ 18ನೇ ಓವರ್​ನಲ್ಲಿ ಪಂದ್ಯದ ಗತಿಯೇ ಬದಲಾಯಿತು.

ಕೇವಲ 4 ರನ್ ನೀಡಿ 1 ವಿಕೆಟ್

18ನೇ ಓವರ್ ಬೌಲ್ ಮಾಡಿದ ಶ್ರೇಯಾಂಕ ಪಾಟೀಲ್, ಕೇವಲ 4 ರನ್ ನೀಡಿದಲ್ಲದೆ ಪ್ರಮುಖವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಪಡೆದರು. ವಾಸ್ತವವಾಗಿ ಓವರ್​ನ ಮೊದಲ ಎಸೆತದಲ್ಲೇ ನಾಯಕಿ ಹರ್ಮನ್‌ಪ್ರೀತ್​ರನ್ನು ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಕೀಪರ್ ರಿಚಾ ಘೋಷ್ ಕೈಚೆಲ್ಲಿದರು. ಇದು ತಂಡಕ್ಕೆ ದುಬಾರಿಯಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮುಂದಿನ 4 ಎಸೆತಗಳಲ್ಲಿ ಶ್ರೇಯಾಂಕ ಕೇವಲ 4 ರನ್​ ನೀಡಿ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಚಿಂತನೆಯಲ್ಲಿದ್ದ ಹರ್ಮನ್ ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಆದರೆ ಚೆಂಡು ಸಿಕ್ಸರ್​ಗೆ ಹೋಗುವ ಬದಲು ಅಲ್ಲೆ ನಿಂತಿದ್ದ ಸೋಫಿ ಡಿವೈನ್ ಕೈಸೇರಿತು. ಹೀಗಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದ ಹರ್ಮನ್ ಪೆವಿಲಿಯನತ್ತ ಹೆಜ್ಜೆಹಾಕಬೇಕಾಯಿತು. ಈ ಓವರ್​ನಲ್ಲಿ ಕೇವಲ 4 ರನ್ ಬಂದಿದ್ದರಿಂದ ಕೊನೆಯ 2 ಓವರ್​ಗಳಲ್ಲಿ ಮುಂಬೈ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು.

Breaking: ಮುಂಬೈ ಮಣಿಸಿ ಮೊದಲ ಬಾರಿಗೆ ಫೈನಲ್​ಗೇರಿದ ಆರ್​ಸಿಬಿ..!

2 ಓವರ್​ಗಳಲ್ಲಿ ಮುಂಬೈ ಗೆಲುವಿಗೆ 16 ರನ್

ಈ ವೇಳೆ 19ನೇ ಓವರ್ ಬೌಲ್ ಮಾಡುವ ಜವಬ್ದಾರಿ ಸೋಫಿ ಮೊಲಿನೆಕ್ಸ್‌ ಹೆಗಲೇರಿತು. ಈ ಓವರ್​ನ ಮೊದಲ ಎಸೆತದಲ್ಲಿ 1 ರನ್ ಬಂದರೆ, ಎರಡನೇ ಎಸೆತದಲ್ಲಿ 0, ಮೂರನೇ ಎಸೆತದಲ್ಲಿ 1 ಹಾಗೂ 4ನೇ ಎಸೆತದಲ್ಲೂ ಒಂದು ರನ್ ಬಂತು. ಐದನೆ ಎಸೆತದಲ್ಲಿ ಸಜೀವನ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಸ್ಟಂಪ್ ಔಟ್ ಆದರು. ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಈ ಓವರ್​ನಲ್ಲಿ ಕೇವಲ 4 ರನ್ ಬಂದರೆ ಒಂದು ವಿಕೆಟ್ ಕೂಡ ಪತನವಾಯಿತು. ಅಂತಿಮವಾಗಿ ಕೊನೆಯ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 12 ರನ್ ಬೇಕಿತ್ತು. ಕೊನೆಯ ಓವರ್ ಬೌಲ್ ಮಾಡಲು ಬಂದ ಆಶಾ ಶೋಭನಾ ಈ ಓವರ್‌ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು 1 ವಿಕೆಟ್ ಕೂಡ ಉರುಳಿಸಿದರು. ಅಂತಿಮವಾಗಿ ಮುಂಬೈ ತಂಡ 5 ರನ್​ಗಳಿಂದ ಸೋಲನುಭವಿಸಿತು.

ಪಂದ್ಯ ಹೀಗಿತ್ತು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ನಿಗದಿತ 20 ಓವರ್​ಗಳಲ್ಲಿ ಆರ್​ಸಿಬಿ ತಂಡ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಗೆಲುವಿಗೆ 136 ರನ್​ಗಳ ಸವಾಲನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಲಷ್ಟೇ ಶಕ್ತವಾಗಿ 5 ರನ್​ಗಳ ಸೋಲು ಅನುಭವಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ