AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: 2 ಜೀವದಾನ, ಶತಕದ ಜೊತೆಯಾಟ! ಸ್ಮರಣೀಯ ಇನ್ನಿಂಗ್ಸ್ ಆಡಿದ ರಹಾನೆ

WTC Final 2023: ರಹಾನೆ ಶತಕದಿಂದ ವಂಚಿತರಾಗಿರಬಹುದು. ಆದರೆ ರಹಾನೆ ಅವರ 89 ರನ್‌ಗಳ ಇನ್ನಿಂಗ್ಸ್‌ ಭಾರತವನ್ನು ಫಾಲೋ ಆನ್​ನಿಂದ ಪಾರು ಮಾಡಿತು.

WTC Final 2023: 2 ಜೀವದಾನ, ಶತಕದ ಜೊತೆಯಾಟ! ಸ್ಮರಣೀಯ ಇನ್ನಿಂಗ್ಸ್ ಆಡಿದ ರಹಾನೆ
ಅಜಿಂಕ್ಯ ರಹಾನೆ
ಪೃಥ್ವಿಶಂಕರ
|

Updated on:Jun 09, 2023 | 7:03 PM

Share

ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ನ ಮೂರನೇ ದಿನದಂದು ಅಜಿಂಕ್ಯ ರಹಾನೆ (Ajinkya Rahane) ಅದ್ಭುತ ಇನ್ನಿಂಗ್ಸ್ ಆಡಿದರು ಆದರೆ ಸ್ಮರಣೀಯ ಶತಕದಿಂದ ವಂಚಿತರಾದರು. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು (India vs Australia) ಮುಜುಗರದಿಂದ ಪಾರು ಮಾಡಿದ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡುವ ಮೂಲಕ ಭಾರತವನ್ನು ಪಂದ್ಯದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೆ ಆಲ್​ರೌಂಡರ್​ಗಳ ಜೊತೆ ಅರ್ಧಶತಕ ಹಾಗೂ ಶತಕದ ಜೊತೆಯಾಟ ಆಡುವುದರೊಂದಿಗೆ ಟೀಂ ಇಂಡಿಯಾವನ್ನು ಫಾಲೋ- ಆನ್ (follow on)​ ಭೀತಿಯಿಂದಲೂ ಪಾರು ಮಾಡಿದರು.

ಡಬ್ಲ್ಯುಟಿಸಿ ಫೈನಲ್‌ನ ಮೂರನೇ ದಿನದಂದು 30 ರನ್‌ಗಳಿಂದ ತಮ್ಮ ಇನ್ನಿಂಗ್ಸ್ ಮುಂದುವರೆಸಿದ ರಹಾನೆ ಮೊದಲ ಸೆಷನ್‌ನಲ್ಲಿಯೇ ಪ್ರತಿದಾಳಿ ಬ್ಯಾಟಿಂಗ್‌ನೊಂದಿಗೆ ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಮೊದಲು ಅರ್ಧಶತಕ ಪೂರೈಸಿದ ರಹಾನೆ ನಂತರ ರನ್​ಗಳ ವೇಗ ಹೆಚ್ಚಿಸಿದರು. ಹೀಗಾಗಿ ಮೊದಲ ಸೆಷನ್ ಅಂತ್ಯದ ವೇಳೆಗೆ ಅಂದರೆ, ಊಟದ ಹೊತ್ತಿಗೆ ರಹಾನೆ ಸ್ಕೋರ್ 89 ರನ್ ಆಗಿತ್ತು.

WTC Final 2023: 5000 ರನ್, 100 ಕ್ಯಾಚ್! ಫೈನಲ್​ನಲ್ಲಿ ರಹಾನೆ ಬರೆದ ದಾಖಲೆಗಳಿವು

ಶತಕ ವಂಚಿತ ರಹಾನೆ

ಎರಡನೇ ಸೆಷನ್​ನಲ್ಲಿ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್‌ಗೆ ಬಂದಾಗ ರಹಾನೆ ಶತಕ ಸಿಡಿಸುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬೌಂಡರಿ ಕದಿಯುವ ಯತ್ನದಲ್ಲಿ ರಹಾನೆ ಗ್ರೀನ್​ಗೆ ಕ್ಯಾಚಿತ್ತು ಔಟಾದರು. ಇನ್ನೊಂದು ಆಸಕ್ತಿಕರ ವಿಚಾರವೆಂದರೆ, ವಾಸ್ತವವಾಗಿ ರಹಾನೆ ಈ ಪಂದ್ಯದಲ್ಲಿ ಅರ್ಧಶತಕವನ್ನೂ ಸಿಡಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಆಸೀಸ್ ನಾಯಕ ಮಾಡಿದ ನೋ ಬಾಲ್ ರಹಾನೆಗೆ ಮೊದಲ ಜೀವದಾನ ನೀಡಿತು. ಭಾರತದ ಇನ್ನಿಂಗ್ಸ್​ನ ಮೊದಲ ದಿನದಂದೇ ರಹಾನೆ ಕ್ಯಾಚಿತ್ತು ಔಟಾಗಿದ್ದರು. ಆದರೆ ಬೌಲರ್​ ಮಾಡಿದ ನೋ ಬಾಲ್​ನಿಂದಾಗಿ ರಹಾನೆಗೆ ಜೀವದಾನ ಸಿಕ್ಕಿತ್ತು. ಅಲ್ಲದೆ ಮೂರನೇ ದಿನದ ಮೊದಲ ಸೆಷನ್​ನಲ್ಲಿ ರಹಾನೆ 72 ರನ್​ಗಳಿಸಿ ಆಡುತ್ತಿರುವಾಗ ಕ್ಯಾಚ್ ಕೈಚೆಲ್ಲಿದರು.

ಹೀಗಿರುವಾಗ ರಹಾನೆ ಶತಕ ಪೂರೈಸುತ್ತಾರೆ ಎನಿಸಿತು ಆದರೆ ಅದೃಷ್ಟ ಮೂರನೇ ಬಾರಿಗೆ ಬೆಂಬಲಿಸಲಿಲ್ಲ. ಎರಡನೇ ಸೆಷನ್​ನ ಮೂರನೇ ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಅಂತಿಮವಾಗಿ ರಹಾನೆ ವಿಕೆಟ್ ಒಪ್ಪಿಸಿದರು. 2 ಜೀವದಾನ ಪಡೆದ ರಹಾನೆ ಅಂತಿಮವಾಗಿ ಶತಕ ವಂಚಿತರಾದರೂ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.

ಇತಿಹಾಸ ರಚಿಸಿದ ರಹಾನೆ

ಶತಕ ವಂಚಿರಾದರೂ ರಹಾನೆ 89 ರನ್ ಬಾರಿಸುವುದರೊಂದಿಗೆ ತಮ್ಮ ಹೆಸರಿನಲ್ಲಿ ವಿನೂತನ ದಾಖಲೆಯನ್ನು ಬರೆದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಳೆದ ಫೈನಲ್‌ನಲ್ಲೂ ಭಾರತ ಫೈನಲ್ ಆಡಿತ್ತು. ಆದರೆ ಆ ಪಂದ್ಯದಲ್ಲಿ ಭಾರತದ ಪರ ಯಾರೂ ಅರ್ಧಶತಕ ಸಿಡಿಸಿರಲಿಲ್ಲ. ಆ ಫೈನಲ್‌ನಲ್ಲೂ ಭಾರತದ ಪರ 49 ರನ್‌ ಬಾರಿಸಿದ್ದ ರಹಾನೆ, ಈ ದಾಖಲೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.

ಶತಕದ ಜೊತೆಯಾಟವನ್ನಾಡಿದ ರಹಾನೆ

ರಹಾನೆ ಶತಕದಿಂದ ವಂಚಿತರಾಗಿರಬಹುದು. ಆದರೆ ರಹಾನೆ ಅವರ 89 ರನ್‌ಗಳ ಇನ್ನಿಂಗ್ಸ್‌ ಭಾರತವನ್ನು ಫಾಲೋ ಆನ್​ನಿಂದ ಪಾರು ಮಾಡಿತು. ಅಜಿಂಕ್ಯ ರಹಾನೆ ಕ್ರೀಸ್‌ಗೆ ಬಂದಾಗ ಭಾರತದ ಸ್ಕೋರ್ ಕೇವಲ 50 ರನ್ ಆಗಿದ್ದು, 3 ವಿಕೆಟ್ ಪತನವಾಗಿತ್ತು. ಬಳಿಕ ಜಡೇಜಾ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದ ರಹಾನೆ, ಶಾರ್ದೂಲ್ ಜೊತೆಯಲ್ಲೂ ಮರೆಯಲಾಗದ ಜೊತೆಯಾಟವನ್ನಾಡಿದರು.

ಆರಂಭಿಕ ತೊಂದರೆಗಳಿಂದ ಚೇತರಿಸಿಕೊಂಡ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರ್ದೂಲ್, ರಹಾನೆ ಜೊತೆಗೆ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಎದುರಿಸಿದರು. ಮೊದಲ ಸೆಷನ್‌ನಲ್ಲಿ ಕೆಎಸ್ ಭರತ್ ಅವರ ವಿಕೆಟ್ ಪತನದ ನಂತರ ಇಬ್ಬರೂ ಕ್ರೀಸ್​ನಲ್ಲಿ ಒಟ್ಟಾಗಿ ಶತಕದ ಜೊತೆಯಾಟ ನಡೆಸಿದರು. ಅಂತಿಮವಾಗಿ ಇಬ್ಬರೂ 109 ರನ್ ಸೇರಿಸುವ ಮೂಲಕ ಭಾರತ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 9 June 23

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!