Sign In

By signing in or creating an account, you agree with Associated Broadcasting Company's Terms & Conditions and Privacy Policy.

Yusuf Pathan: 26 ಎಸೆತಗಳಲ್ಲಿ 80 ರನ್! ಪಾಕ್ ವೇಗಿ ವಿರುದ್ಧ ಅಬ್ಬರಿಸಿದ ಯೂಸುಫ್ ಪಠಾಣ್..! ವಿಡಿಯೋ ನೋಡಿ

Zim Afro T10: ಪಾಕ್ ವೇಗಿ ಮೊಹಮ್ಮದ್ ಅಮೀರ್ ವಿರುದ್ಧ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ಪಠಾಣ್, ಒಂದೇ ಓವರ್​ನಲ್ಲಿ 3 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 25 ರನ್‌ ದೋಚಿದರು.

Yusuf Pathan: 26 ಎಸೆತಗಳಲ್ಲಿ 80 ರನ್! ಪಾಕ್ ವೇಗಿ ವಿರುದ್ಧ ಅಬ್ಬರಿಸಿದ ಯೂಸುಫ್ ಪಠಾಣ್..! ವಿಡಿಯೋ ನೋಡಿ
ಯೂಸುಫ್ ಪಠಾಣ್
Follow us
ಪೃಥ್ವಿಶಂಕರ
|

Updated on: Jul 29, 2023 | 7:17 AM

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಝಿಮ್ ಆಫ್ರೋ ಟಿ10 (Zim Afro T10) ಲೀಗ್​ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡರ್ಬನ್ ಖಲಂದರ್ಸ್​ ತಂಡವನ್ನು 6 ವಿಕೆಟ್​​ಗಳಿಂದ ಮಣಿಸಿದ ಜೋಬರ್ಗ್ ಬಫಲೋಸ್ ತಂಡ (Joburg Buffaloes vs Durban Qalandars) ಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಜೋಬರ್ಗ್ ಬಫಲೋಸ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ (Yusuf Pathan) ಕೇವಲ 26 ಎಸೆತಗಳಲ್ಲಿ ಅಜೇಯ 80 ರನ್ ಸಿಡಿಸಿ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಬನ್ ಖಲಂದರ್ಸ್​ ತಂಡ ನಿಗಧಿತ 10 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ದಾಖಲೆಯ 140 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಜೋಬರ್ಗ್ ಬಫಲೋಸ್ ತಂಡ ಇನ್ನೊಂದು ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಬಫಲೋಸ್ ತಂಡ, ಡರ್ಬನ್ ಖಲಂದರ್ಸ್​ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡರ್ಬನ್ ಖಲಂದರ್ಸ್​ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಸೀಫರ್ಟ್ 11 ರನ್​ಗಳಿಗೆ ಸುಸ್ತಾದರೆ, ಮತ್ತೊಬ್ಬ ಆರಂಭಿಕ ಮಿರ್ಜಾ ಬೇಗ್ 20 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ಆಂಡ್ರೆ ಫ್ಲೆಚರ್ 14 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 39 ರನ್ ಸಿಡಿಸಿದರು.

60 ಎಸೆತಗಳಲ್ಲಿ 140 ರನ್​ಗಳ ಟಾರ್ಗೆಟ್

ಹಾಗೆಯೇ 5ನೇ ಕ್ರಮಾಂಕದಲ್ಲಿ ಬಂದ ಆಸೀಪ್ ಅಲಿ ಕೂಡ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸಿದರು. ಕೊನೆಯಲ್ಲಿ ನಿಕ್ ವೆಲ್ಚ್ ಕೂಡ 9 ಎಸೆತಗಳಲ್ಲಿ 24 ರನ್​ಗಳ ಕೊಡುಗೆ ನೀಡಿದರು. ಅಂತಿಮವಾಗಿ ಡರ್ಬನ್ ಖಲಂದರ್ಸ್​ ತಂಡ 60 ಎಸೆತಗಳಲ್ಲಿ 140 ರನ್​ಗಳ ಟಾರ್ಗೆಟ್ ಸೆಟ್ ಮಾಡಿತು.

ಈ ಬೃಹತ್ ಗುರಿ ಬೆನ್ನಟ್ಟಿದ ಜೋಬರ್ಗ್ ಬಫಲೋಸ್ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದ ಆರಂಭಿಕರಾದ ಮೊಹಮ್ಮದ್ ಅಫೀಜ್ 17 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಟಾಮ್ ಬಾಂಟನ್ 4 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬಂದ ವಿಲ್ ಸ್ಮಿದ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ 16 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

26 ಎಸೆತಗಳಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್

ಹೀಗಾಗಿ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ಯೂಸುಫ್ ಪಠಾಣ್, ಡರ್ಬನ್ ಖಲಂದರ್ಸ್​ ತಂಡದ ಬೌಲರ್​ಗಳ ಬೆಂಡೆತ್ತಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 26 ಎಸೆತಗಳನ್ನು ಎದುರಿಸಿದ ಯೂಸುಫ್ 4 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 80 ರನ್ ಬಾರಿಸಿದರು. ಕೊನೆಯಲ್ಲಿ ಯೂಸುಫ್​ಗೆ ಸಾಥ್ ನೀಡಿದ ಮುಶ್ಫಿಕರ್ ರಹೀಮ್ 10 ಎಸೆತಗಳಲ್ಲಿ ಅಜೇಯ 14 ರನ್ ಬಾರಿಸಿದರು.

ಪಾಕ್ ವೇಗಿ ಬೆವರಿಳಿಸಿದ ಯೂಸುಫ್

ವಾಸ್ತವವಾಗಿ 8ನೇ ಓವರ್​ನಲ್ಲಿ ಪಾಕ್ ವೇಗಿ ಮೊಹಮ್ಮದ್ ಅಮೀರ್ ವಿರುದ್ಧ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ ಪಠಾಣ್, ಒಂದೇ ಓವರ್​ನಲ್ಲಿ 3 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 25 ರನ್‌ ದೋಚಿದರು. ಈ ಮೂಲಕ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಹೀಗಾಗಿ ಅಂತಿಮ ಎರಡು ಓವರ್‌ಗಳಲ್ಲಿ ಬಫಲೋಸ್‌ಗೆ ಗೆಲ್ಲಲು 39 ರನ್‌ಗಳು ಅಗತ್ಯವಿತ್ತು.

ಇನ್ನಿಂಗ್ಸ್​ನ 9ನೇ ಓವರ್‌ನಲ್ಲಿ ತಮ್ಮ ಅರ್ಧಶತಕ ಪೂರೈಸಿದ ಯೂಸುಫ್, ಅಂತಿಮ ಓವರ್‌ನಲ್ಲಿ ಗೆಲ್ಲಲು 20 ರನ್‌ಗಳು ಬೇಕಾಗಿದ್ದಾಗ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ: ಕುಮಾರಸ್ವಾಮಿ
ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ: ಕುಮಾರಸ್ವಾಮಿ
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಮೋದಿ
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಮೋದಿ
‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್
‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್
ತೆಲಂಗಾಣ ಸುರಂಗ ಕುಸಿತ; ದುರಂತದಲ್ಲಿ ಸಿಲುಕಿದ್ದ 8 ಜನ ಬದುಕುಳಿಯುವ ಸಾಧ್ಯತೆ
ತೆಲಂಗಾಣ ಸುರಂಗ ಕುಸಿತ; ದುರಂತದಲ್ಲಿ ಸಿಲುಕಿದ್ದ 8 ಜನ ಬದುಕುಳಿಯುವ ಸಾಧ್ಯತೆ
ಪಕ್ಷದ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ: ಶಿವಲಿಂಗೇಗೌಡ
ಪಕ್ಷದ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ: ಶಿವಲಿಂಗೇಗೌಡ
ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ!
ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ!
ಪಕ್ಷದ ಯಾವ ವಿಷಯವನ್ನೂ ಸಾರ್ವಜನಿಕವಾಗಿ ಮಾತಾಡಲ್ಲ: ಪರಮೇಶ್ವರ್
ಪಕ್ಷದ ಯಾವ ವಿಷಯವನ್ನೂ ಸಾರ್ವಜನಿಕವಾಗಿ ಮಾತಾಡಲ್ಲ: ಪರಮೇಶ್ವರ್
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು
ಅನುದಾನ ಸಿಗದಿರುವುದೂ ಸುರೇಶ್ ಗೌಡರ ಕೋಪಕ್ಕೆ ಒಂದು ಕಾರಣವೇ?
ಅನುದಾನ ಸಿಗದಿರುವುದೂ ಸುರೇಶ್ ಗೌಡರ ಕೋಪಕ್ಕೆ ಒಂದು ಕಾರಣವೇ?
ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ ಶಿವರಾಜ್​ಕುಮಾರ್-ಗೀತಾ
ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ ಶಿವರಾಜ್​ಕುಮಾರ್-ಗೀತಾ