AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ. ‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ […]

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 02, 2020 | 6:27 PM

Share

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ.

‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ ಇನ್ನಿಂಗ್ಸ್ ಆರಂಭಿಸುವುದು ಸಮರ್ಪಕ ಅಂತ ನನಗನ್ನಿಸುತ್ತಿದೆ. ಹಾಗೆ ಮಾಡಿದರೆ, ಕಾರ್ತೀಕ್ ಪೂರ್ತಿ ಕೆಳ ಕ್ರಮಾಂಕದಲ್ಲಿ ಆಡುವುದು ತಪ್ಪುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಕೆಕೆಆರ್ ಟೀಮಿಗೆ ತಾನು ನಾಯಕನಾಗಿದ್ದರೆ ನರೈನ್​ರನ್ನು ಇನ್ನಿಂಗ್ಸ್ ಆರಂಭಿಸಲು ಸರ್ವಥಾ ಕಳಿಸುತ್ತಿರಲಿಲ್ಲವೆಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಹೇಳಿದ್ದಾರೆ.

‘‘ನಾನಾಗಿದ್ದರೆ, ನರೈನ್​ರನ್ನು ಓಪನರ್ ಆಗಿ ಆಡಿಸುತ್ತಲೇ ಇರಲಿಲ್ಲ. ಶುಭ್​ಮನ್ ಜೊತೆ ಓಪನ್ ಮಾಡಲು ಒಬ್ಬ ಪ್ರಾಪರ್ ಬ್ಯಾಟ್ಸ್​ಮನ್​ನನ್ನು ಕಳಿಸುತ್ತಿದ್ದೆ. ಮೊದಲ ಆರು ಓವರ್​ಗಳಲ್ಲಿ 50-60 ರನ್ ಬರಬೇಕಾದರೆ ಓಪನರ್​ಗಳಿಬ್ಬರು ಪರಿಣಿತ ಬ್ಯಾಟ್ಸ್​ಮನ್​ಗಳಾಗಿರಬೇಕು. ದಿನೇಶ್ ಓಪನ್ ಮಾಡದೆ ಹೋದರೆ ಮೋರ್ಗನ್ ಮತ್ತು ರಸ್ಸೆಲ್ ಅವರ ನಂತರ ಕ್ರೀಸಿಗೆ ಬರಬೇಕಾಗುತ್ತದೆ. ಇದು ಟೀಮಿನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಪಕ್ಷ ದಿನೇಶ್, ಮಿಡ್ಲ್ ಆರ್ಡರ್​ನಲ್ಲಿ ಮೊರ್ಗನ್ ಮತ್ತು ರಸ್ಸೆಲ್ ಅವರಿಗಿಂತ ಮೊದಲು ಆಡಲು ಬಂದರೂ ಟೀಮಿಗೆ ತೊಂದರೆಯಾಗುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್​ನಿಂದ ತಾನು ಬಹಳ ಇಂಪ್ರೆಸ್ ಆಗಿರುವುದಾಗಿಯೂ ಮದನ್ ಹೇಳಿದ್ದಾರೆ.

‘‘ಜೊಫ್ರಾ ಆರ್ಚರ್ ಎಸೆತಗಳನ್ನು ಗಿಲ್ ಫ್ರಂಟ್​ಫುಟ್​ನಲ್ಲಿ ಡ್ರೈವ್ ಮಾಡುತ್ತಿದ್ದ್ದಿದ್ದನ್ನು ಮೊನ್ನೆ ಗಮನಿಸುತ್ತಿದ್ದೆ. ಆರ್ಚರ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಷ್ಟು ವೇಗದಲ್ಲಿ ಎಸೆತ ತನ್ನೆಡೆ ಬರುವಾಗ ಬ್ಯಾಟ್ಸ್​ಮನ್ ಸಾಮಾನ್ಯವಾಗಿ ಬ್ಯಾಕ್​ಫುಟ್​ನಲ್ಲಿ ಆಡಲು ಪ್ರಯತ್ನಿಸುತ್ತಾನೆ. ಇದರರ್ಥ ಈ ಹುಡುಗ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ, ಭಾರತೀಯ ತಂಡಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಸಿಗಲಿದ್ದಾನೆ,’’ ಎಂದು ಮದನ್ ಲಾಲ್ ಹೇಳಿದ್ದಾರೆ.

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ