AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ. ‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ […]

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 02, 2020 | 6:27 PM

Share

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ.

‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ ಇನ್ನಿಂಗ್ಸ್ ಆರಂಭಿಸುವುದು ಸಮರ್ಪಕ ಅಂತ ನನಗನ್ನಿಸುತ್ತಿದೆ. ಹಾಗೆ ಮಾಡಿದರೆ, ಕಾರ್ತೀಕ್ ಪೂರ್ತಿ ಕೆಳ ಕ್ರಮಾಂಕದಲ್ಲಿ ಆಡುವುದು ತಪ್ಪುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಕೆಕೆಆರ್ ಟೀಮಿಗೆ ತಾನು ನಾಯಕನಾಗಿದ್ದರೆ ನರೈನ್​ರನ್ನು ಇನ್ನಿಂಗ್ಸ್ ಆರಂಭಿಸಲು ಸರ್ವಥಾ ಕಳಿಸುತ್ತಿರಲಿಲ್ಲವೆಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಹೇಳಿದ್ದಾರೆ.

‘‘ನಾನಾಗಿದ್ದರೆ, ನರೈನ್​ರನ್ನು ಓಪನರ್ ಆಗಿ ಆಡಿಸುತ್ತಲೇ ಇರಲಿಲ್ಲ. ಶುಭ್​ಮನ್ ಜೊತೆ ಓಪನ್ ಮಾಡಲು ಒಬ್ಬ ಪ್ರಾಪರ್ ಬ್ಯಾಟ್ಸ್​ಮನ್​ನನ್ನು ಕಳಿಸುತ್ತಿದ್ದೆ. ಮೊದಲ ಆರು ಓವರ್​ಗಳಲ್ಲಿ 50-60 ರನ್ ಬರಬೇಕಾದರೆ ಓಪನರ್​ಗಳಿಬ್ಬರು ಪರಿಣಿತ ಬ್ಯಾಟ್ಸ್​ಮನ್​ಗಳಾಗಿರಬೇಕು. ದಿನೇಶ್ ಓಪನ್ ಮಾಡದೆ ಹೋದರೆ ಮೋರ್ಗನ್ ಮತ್ತು ರಸ್ಸೆಲ್ ಅವರ ನಂತರ ಕ್ರೀಸಿಗೆ ಬರಬೇಕಾಗುತ್ತದೆ. ಇದು ಟೀಮಿನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಪಕ್ಷ ದಿನೇಶ್, ಮಿಡ್ಲ್ ಆರ್ಡರ್​ನಲ್ಲಿ ಮೊರ್ಗನ್ ಮತ್ತು ರಸ್ಸೆಲ್ ಅವರಿಗಿಂತ ಮೊದಲು ಆಡಲು ಬಂದರೂ ಟೀಮಿಗೆ ತೊಂದರೆಯಾಗುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್​ನಿಂದ ತಾನು ಬಹಳ ಇಂಪ್ರೆಸ್ ಆಗಿರುವುದಾಗಿಯೂ ಮದನ್ ಹೇಳಿದ್ದಾರೆ.

‘‘ಜೊಫ್ರಾ ಆರ್ಚರ್ ಎಸೆತಗಳನ್ನು ಗಿಲ್ ಫ್ರಂಟ್​ಫುಟ್​ನಲ್ಲಿ ಡ್ರೈವ್ ಮಾಡುತ್ತಿದ್ದ್ದಿದ್ದನ್ನು ಮೊನ್ನೆ ಗಮನಿಸುತ್ತಿದ್ದೆ. ಆರ್ಚರ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಷ್ಟು ವೇಗದಲ್ಲಿ ಎಸೆತ ತನ್ನೆಡೆ ಬರುವಾಗ ಬ್ಯಾಟ್ಸ್​ಮನ್ ಸಾಮಾನ್ಯವಾಗಿ ಬ್ಯಾಕ್​ಫುಟ್​ನಲ್ಲಿ ಆಡಲು ಪ್ರಯತ್ನಿಸುತ್ತಾನೆ. ಇದರರ್ಥ ಈ ಹುಡುಗ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ, ಭಾರತೀಯ ತಂಡಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಸಿಗಲಿದ್ದಾನೆ,’’ ಎಂದು ಮದನ್ ಲಾಲ್ ಹೇಳಿದ್ದಾರೆ.

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್