AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ. ‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ […]

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 02, 2020 | 6:27 PM

Share

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ.

‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ ಇನ್ನಿಂಗ್ಸ್ ಆರಂಭಿಸುವುದು ಸಮರ್ಪಕ ಅಂತ ನನಗನ್ನಿಸುತ್ತಿದೆ. ಹಾಗೆ ಮಾಡಿದರೆ, ಕಾರ್ತೀಕ್ ಪೂರ್ತಿ ಕೆಳ ಕ್ರಮಾಂಕದಲ್ಲಿ ಆಡುವುದು ತಪ್ಪುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಕೆಕೆಆರ್ ಟೀಮಿಗೆ ತಾನು ನಾಯಕನಾಗಿದ್ದರೆ ನರೈನ್​ರನ್ನು ಇನ್ನಿಂಗ್ಸ್ ಆರಂಭಿಸಲು ಸರ್ವಥಾ ಕಳಿಸುತ್ತಿರಲಿಲ್ಲವೆಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಹೇಳಿದ್ದಾರೆ.

‘‘ನಾನಾಗಿದ್ದರೆ, ನರೈನ್​ರನ್ನು ಓಪನರ್ ಆಗಿ ಆಡಿಸುತ್ತಲೇ ಇರಲಿಲ್ಲ. ಶುಭ್​ಮನ್ ಜೊತೆ ಓಪನ್ ಮಾಡಲು ಒಬ್ಬ ಪ್ರಾಪರ್ ಬ್ಯಾಟ್ಸ್​ಮನ್​ನನ್ನು ಕಳಿಸುತ್ತಿದ್ದೆ. ಮೊದಲ ಆರು ಓವರ್​ಗಳಲ್ಲಿ 50-60 ರನ್ ಬರಬೇಕಾದರೆ ಓಪನರ್​ಗಳಿಬ್ಬರು ಪರಿಣಿತ ಬ್ಯಾಟ್ಸ್​ಮನ್​ಗಳಾಗಿರಬೇಕು. ದಿನೇಶ್ ಓಪನ್ ಮಾಡದೆ ಹೋದರೆ ಮೋರ್ಗನ್ ಮತ್ತು ರಸ್ಸೆಲ್ ಅವರ ನಂತರ ಕ್ರೀಸಿಗೆ ಬರಬೇಕಾಗುತ್ತದೆ. ಇದು ಟೀಮಿನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಪಕ್ಷ ದಿನೇಶ್, ಮಿಡ್ಲ್ ಆರ್ಡರ್​ನಲ್ಲಿ ಮೊರ್ಗನ್ ಮತ್ತು ರಸ್ಸೆಲ್ ಅವರಿಗಿಂತ ಮೊದಲು ಆಡಲು ಬಂದರೂ ಟೀಮಿಗೆ ತೊಂದರೆಯಾಗುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್​ನಿಂದ ತಾನು ಬಹಳ ಇಂಪ್ರೆಸ್ ಆಗಿರುವುದಾಗಿಯೂ ಮದನ್ ಹೇಳಿದ್ದಾರೆ.

‘‘ಜೊಫ್ರಾ ಆರ್ಚರ್ ಎಸೆತಗಳನ್ನು ಗಿಲ್ ಫ್ರಂಟ್​ಫುಟ್​ನಲ್ಲಿ ಡ್ರೈವ್ ಮಾಡುತ್ತಿದ್ದ್ದಿದ್ದನ್ನು ಮೊನ್ನೆ ಗಮನಿಸುತ್ತಿದ್ದೆ. ಆರ್ಚರ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಷ್ಟು ವೇಗದಲ್ಲಿ ಎಸೆತ ತನ್ನೆಡೆ ಬರುವಾಗ ಬ್ಯಾಟ್ಸ್​ಮನ್ ಸಾಮಾನ್ಯವಾಗಿ ಬ್ಯಾಕ್​ಫುಟ್​ನಲ್ಲಿ ಆಡಲು ಪ್ರಯತ್ನಿಸುತ್ತಾನೆ. ಇದರರ್ಥ ಈ ಹುಡುಗ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ, ಭಾರತೀಯ ತಂಡಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಸಿಗಲಿದ್ದಾನೆ,’’ ಎಂದು ಮದನ್ ಲಾಲ್ ಹೇಳಿದ್ದಾರೆ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?