AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ
ಕೇನ್ ವಿಲಿಯಮ್ಸನ್
TV9 Web
| Edited By: |

Updated on:Jun 10, 2021 | 4:31 PM

Share

ಮೊಣಕೈಗೆ ಅಗಿರುವ ಗಾಯ ನ್ಯೂಜಿಲೆಂಡ್​ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಗುರುವಾರದಿಂದ ಇಂಗ್ಲೆಂಡ್ ವಿರುದ್ಧ ಎಜ್​ಬ್ಯಾಸ್ಟನ್​ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್​ನಿಂದ ಹೊರಗಿರುವಂತೆ ಮಾಡಿದೆ. ಆದರೆ, ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಸಿಪ್​ಗೆ ಮೊದಲು ಅವರು ಗುಣಮುಖರಾಗವರೆಂಬ ಆಶಾಭಾವನೆಯನ್ನು ನ್ಯೂಜಿಲೆಂಡ್​ ಶಿಬಿರ ತಳೆದಿದೆ. ಅವರ ಸ್ಥಾನದಲ್ಲಿ ಎಡಗೈ ಆರಂಭ ಆಟಗಾರ ಟಾಮ್ ಲಾಥಮ್ ಅವರು ಪ್ರವಾಸಿ ಟೀಮಿನ ನಾಯಕತ್ವ ವಹಿಸಲಿದ್ದಾರೆ.

‘ಎರಡನೇ ಟೆಸ್ಟ್​ನಲ್ಲಿ ಆಡದಿರುವ ನಿರ್ಧಾರ ತೆಗೆದುಕೊಳ್ಳವುದು ಕೇನ್ ಸುಲಭವಾಗಿರಲಿಲ್ಲ, ಆದರೆ ಅದು ಒಳ್ಳೆಯ ನಿರ್ಧಾರವೆಂದು ಟೀಮು ಭಾವಿಸುತ್ತದೆ,’ ಎಂದು ನ್ಯೂಜಿಲೆಂಡ್​ ಕೋಚ್​ ಗ್ಯಾರಿ ಸ್ಟೆಡ್ ಬುಧವಾರ ಹೇಳಿದರು.

‘ಕಳೆದ ವಾರ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೊದ ಟೆಸ್ಟ್​ ಪಂದ್ಯದಲ್ಲಿ ಕಿವೀಸ್​ ತಂಡದ ನಾಯಕತ್ವ ವಹಿಸಿದ್ದ ವಿಲಿಯಮ್ಸನ್ ಅವರು ಮಾರ್ಚ್​ ತಿಂಗಳಿನಿಂದ ಮೊಣಕೈ ಬಾಧೆ ಅನುಭವಿಸುತ್ತಿದ್ದಾರೆ. ಎರಡನೆ ಟೆಸ್ಟ್ ಆರಂಭಕ್ಕೆ ಮುನ್ನಾ ದಿನವಾಗಿರುವ ಬುಧವಾರದಂದು ಅವರು ಟೆಸ್ಟ್​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು.

‘ಬ್ಯಾಟ್​ ಮಾಡುವಾಗ ಆಗುತ್ತಿದ್ದ ನೋವನ್ನು ನೀಗಿಸಿಕೊಳ್ಳಲು ಕೇನ್ ಮೊಣಕೈಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು. ಆದರೆ, ಅವರಿಗೆ ಈಗ ಸಿಗಲಿರುವ ವಿಶ್ರಾಂತಿ ಮತ್ತು ರಿಹ್ಯಾಬ್ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಲಿದೆ,’ ಎಂದು ಸ್ಟೆಡ್ ಹೇಳಿದರು.

‘ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಕೇನ್​ಗೆ ವಿಶ್ರಾಂತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಮಹತ್ವದ ಪಂದ್ಯಕ್ಕೆ ಮೊದಲು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆ ನಮಗಿದೆ,’ ಎಂದು ಸ್ಟೆಡ್ ಹೇಳಿದ್ದಾರೆ.

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಬೆರಳಿಗೆ ಗಾಯಮಾಡಿಕೊಂಡಿರುವ ನ್ಯೂಜಿಲೆಂಡ್​ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸಹ ಎರಡನೇ ಟೆಸ್ಟ್​ ಆಡುತ್ತಿಲ್ಲ. ಹೀಗಾಗಿ, ಟೀಮ್ ಮ್ಯಾನೇಜ್ಮೆಂಟ್​ಗೆ ಮೊದಲ ಟೆಸ್ಟ್​ ಆಡಿದ ತಂಡದಲ್ಲಿ ಕನಿಷ್ಟ ಎರಡು ಬದಲಾವಣೆಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ.

ಆದರೆ, ಇಂಡಿಯನ್ ಪ್ರಿಮೀಯರ್ ಲೀಗ್ ಅರ್ಧಕ್ಕೆ ಸ್ಥಗಿತಗೊಂಡ ನಂತರ ಸ್ವದೇಶಕ್ಕೆ ವಾಪಸ್ಸು ಹೋಗಿ ಕುಟುಂಬದ ಜೊತೆ ಸಮಯ ಕಳೆಯುಲು ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ಅನುಭವಿ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ತಂಡಕ್ಕೆ ವಾಪಸ್ಸಾಗುವುದು ಖಚಿತವಾಗಿದೆ.

ಇದನ್ನೂ ಓದಿ: WTC Final: ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾಕ್ಕೆ ಶಾಕ್; ಒಬ್ಬರನ್ನೊಬ್ಬರು ಭೇಟಿಯಾಗದಂತೆ ಸೂಚನೆ.. ಕಾರಣವೇನು?

Published On - 12:04 am, Thu, 10 June 21

Follow Us
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ