AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ
ಕೇನ್ ವಿಲಿಯಮ್ಸನ್
TV9 Web
| Edited By: |

Updated on:Jun 10, 2021 | 4:31 PM

Share

ಮೊಣಕೈಗೆ ಅಗಿರುವ ಗಾಯ ನ್ಯೂಜಿಲೆಂಡ್​ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಗುರುವಾರದಿಂದ ಇಂಗ್ಲೆಂಡ್ ವಿರುದ್ಧ ಎಜ್​ಬ್ಯಾಸ್ಟನ್​ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್​ನಿಂದ ಹೊರಗಿರುವಂತೆ ಮಾಡಿದೆ. ಆದರೆ, ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಸಿಪ್​ಗೆ ಮೊದಲು ಅವರು ಗುಣಮುಖರಾಗವರೆಂಬ ಆಶಾಭಾವನೆಯನ್ನು ನ್ಯೂಜಿಲೆಂಡ್​ ಶಿಬಿರ ತಳೆದಿದೆ. ಅವರ ಸ್ಥಾನದಲ್ಲಿ ಎಡಗೈ ಆರಂಭ ಆಟಗಾರ ಟಾಮ್ ಲಾಥಮ್ ಅವರು ಪ್ರವಾಸಿ ಟೀಮಿನ ನಾಯಕತ್ವ ವಹಿಸಲಿದ್ದಾರೆ.

‘ಎರಡನೇ ಟೆಸ್ಟ್​ನಲ್ಲಿ ಆಡದಿರುವ ನಿರ್ಧಾರ ತೆಗೆದುಕೊಳ್ಳವುದು ಕೇನ್ ಸುಲಭವಾಗಿರಲಿಲ್ಲ, ಆದರೆ ಅದು ಒಳ್ಳೆಯ ನಿರ್ಧಾರವೆಂದು ಟೀಮು ಭಾವಿಸುತ್ತದೆ,’ ಎಂದು ನ್ಯೂಜಿಲೆಂಡ್​ ಕೋಚ್​ ಗ್ಯಾರಿ ಸ್ಟೆಡ್ ಬುಧವಾರ ಹೇಳಿದರು.

‘ಕಳೆದ ವಾರ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೊದ ಟೆಸ್ಟ್​ ಪಂದ್ಯದಲ್ಲಿ ಕಿವೀಸ್​ ತಂಡದ ನಾಯಕತ್ವ ವಹಿಸಿದ್ದ ವಿಲಿಯಮ್ಸನ್ ಅವರು ಮಾರ್ಚ್​ ತಿಂಗಳಿನಿಂದ ಮೊಣಕೈ ಬಾಧೆ ಅನುಭವಿಸುತ್ತಿದ್ದಾರೆ. ಎರಡನೆ ಟೆಸ್ಟ್ ಆರಂಭಕ್ಕೆ ಮುನ್ನಾ ದಿನವಾಗಿರುವ ಬುಧವಾರದಂದು ಅವರು ಟೆಸ್ಟ್​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು.

‘ಬ್ಯಾಟ್​ ಮಾಡುವಾಗ ಆಗುತ್ತಿದ್ದ ನೋವನ್ನು ನೀಗಿಸಿಕೊಳ್ಳಲು ಕೇನ್ ಮೊಣಕೈಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು. ಆದರೆ, ಅವರಿಗೆ ಈಗ ಸಿಗಲಿರುವ ವಿಶ್ರಾಂತಿ ಮತ್ತು ರಿಹ್ಯಾಬ್ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಲಿದೆ,’ ಎಂದು ಸ್ಟೆಡ್ ಹೇಳಿದರು.

‘ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಕೇನ್​ಗೆ ವಿಶ್ರಾಂತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಮಹತ್ವದ ಪಂದ್ಯಕ್ಕೆ ಮೊದಲು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆ ನಮಗಿದೆ,’ ಎಂದು ಸ್ಟೆಡ್ ಹೇಳಿದ್ದಾರೆ.

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಬೆರಳಿಗೆ ಗಾಯಮಾಡಿಕೊಂಡಿರುವ ನ್ಯೂಜಿಲೆಂಡ್​ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸಹ ಎರಡನೇ ಟೆಸ್ಟ್​ ಆಡುತ್ತಿಲ್ಲ. ಹೀಗಾಗಿ, ಟೀಮ್ ಮ್ಯಾನೇಜ್ಮೆಂಟ್​ಗೆ ಮೊದಲ ಟೆಸ್ಟ್​ ಆಡಿದ ತಂಡದಲ್ಲಿ ಕನಿಷ್ಟ ಎರಡು ಬದಲಾವಣೆಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ.

ಆದರೆ, ಇಂಡಿಯನ್ ಪ್ರಿಮೀಯರ್ ಲೀಗ್ ಅರ್ಧಕ್ಕೆ ಸ್ಥಗಿತಗೊಂಡ ನಂತರ ಸ್ವದೇಶಕ್ಕೆ ವಾಪಸ್ಸು ಹೋಗಿ ಕುಟುಂಬದ ಜೊತೆ ಸಮಯ ಕಳೆಯುಲು ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ಅನುಭವಿ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ತಂಡಕ್ಕೆ ವಾಪಸ್ಸಾಗುವುದು ಖಚಿತವಾಗಿದೆ.

ಇದನ್ನೂ ಓದಿ: WTC Final: ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾಕ್ಕೆ ಶಾಕ್; ಒಬ್ಬರನ್ನೊಬ್ಬರು ಭೇಟಿಯಾಗದಂತೆ ಸೂಚನೆ.. ಕಾರಣವೇನು?

Published On - 12:04 am, Thu, 10 June 21

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?