AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ವಿಶೇಷ: ಕ್ರಿಕೆಟ್​ಗಾಗಿ ಮಾಲೀಕನ ಬಳಿ ಸುಳ್ಳು, ಹೆಸರು ಬದಲಿಸಿ ಮಸ್ತ್ ಬ್ಯಾಟಿಂಗ್; ಸತ್ಯ ತಿಳಿದ ಮಾಲೀಕ ಮಾಡಿದ್ದೇನು?

ಸಿಡ್ನಿ ತನ್ನ ಹೆಸರನ್ನು ಬದಲಾಯಿಸುವ ಟ್ರಿಕ್ ಯಶಸ್ವಿಯಾಗುತ್ತಿತ್ತು. ಆದರೆ ಆತ ಎರಡೂ ಇನ್ನಿಂಗ್ಸ್‌ಗಳಲ್ಲಿ 150 ರನ್ ಗಳಿಸಿದ. ಇದು ಎಲ್ಲಾ ಮಾಧ್ಯಮಗಳಿಗೆ ಹೊಸ ಆಟಗಾರನ ಬಗ್ಗೆ ಆಸಕ್ತಿ ಮೂಡಿಸಿತು.

ಕ್ರಿಕೆಟ್ ವಿಶೇಷ: ಕ್ರಿಕೆಟ್​ಗಾಗಿ ಮಾಲೀಕನ ಬಳಿ ಸುಳ್ಳು, ಹೆಸರು ಬದಲಿಸಿ ಮಸ್ತ್ ಬ್ಯಾಟಿಂಗ್; ಸತ್ಯ ತಿಳಿದ ಮಾಲೀಕ ಮಾಡಿದ್ದೇನು?
ಸಿಡ್ನಿ ರಿಪ್ಪನ್
Follow us
ಪೃಥ್ವಿಶಂಕರ
| Updated By: Skanda

Updated on: Jun 10, 2021 | 8:43 AM

ಕ್ರಿಕೆಟ್ ಇತಿಹಾಸದಲ್ಲಿ ಒಂದು ವಿಚಿತ್ರ ಘಟನೆಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಭಾರತೀಯ ತಂಡದ ಪ್ರಮುಖ ಆಟಗಾರನೊಬ್ಬ ತನ್ನ ಹೆಸರು ಬದಲಿಸಿ ಕ್ರಿಕೆಟ್ ಆಡಿದರೆ ನಿಮಗೆ ಹೇಗೆನಿಸುತ್ತದೆ. ಉದಾಹರಣೆಗೆ ರವೀಂದ್ರ ಜಡೇಜಾ ತನ್ನ ಹೆಸರು ಬದಲಿಸಿ ಮೈದಾನಕ್ಕೆ ಬಂದರೆ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತದೆ? ಅಂತಹ ಘಟನೆಯ ಬಗ್ಗೆ ಯೋಚಿಸುವುದು ಕೂಡ ಕೊಂಚ ಕಷ್ಟವಾಗುತ್ತದೆ. ಆದರೆ ಈ ರೀತಿಯ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿತ್ತು ಎಂಬುದನ್ನು ಕೇಳಿದರೆ ನಿಮ್ಮ ಕಿವಿ ಅರಳುವುದು ಸಹಜ. ಅಂತಹ ಘಟನೆಗೆ ನೈಜ ಸಾಕ್ಷಿಯೆಂಬಂತೆ ಇಲ್ಲಿದೆ ಉತ್ತರ.

ಇದು ಸಂಭವಿಸಿದ ದಿನ ಜೂನ್ 9, 1919. ಈ ಸ್ಥಳವು ಇಂಗ್ಲೆಂಡ್‌ನ ಪ್ರಸಿದ್ಧ ಟ್ಯಾಂಟನ್ ಮೈದಾನವಾಗಿತ್ತು ಮತ್ತು ಪಂದ್ಯವು ಸೋಮರ್‌ಸೆಟ್ ಮತ್ತು ಗ್ಲೌಸೆಸ್ಟರ್‌ಶೈರ್ ನಡುವೆ ನಡೆಯಿತು. ಸೋಮರ್‌ಸೆಟ್ ತಂಡದಿಂದ ಎಸ್. ಎಸ್. ಟ್ರಿಮ್ನೆಲ್ ಎಂಬ ಆಟಗಾರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಿದ್ದ. ಆದರೆ ಈ ಮೊದಲು ಯಾರೂ ಕೂಡ ಈ ಹೆಸರಿನ ಕ್ರಿಕೆಟಿಗನ ಬಗ್ಗೆ ಕೇಳಿರಲಿಲ್ಲ. ಆದರೆ ಆತ ಆಟವಾಡಲು ಪ್ರಾರಂಭಿಸಿದ ಮೊದಲ ಇನ್ನಿಂಗ್ಸ್‌ನಲ್ಲಿ 92 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 58 ರನ್ ಗಳಿಸಿದ. ಅಂತಹ ಅದ್ಭುತ ಆಟದಿಂದಾಗಿ, ಇದು ಎಲ್ಲೆಡೆ ಚರ್ಚೆಗೆ ಕಾರಣವಾಯಿತು. ನಂತರ, ಮಾಧ್ಯಮದೊಂದಿಗೆ ನಡೆಸಿದ ಚರ್ಚೆಯಲ್ಲಿ, ಈ ಆಟಗಾರ ಸಿಡ್ನಿ ರಿಪ್ಪನ್, ಸೋಮರ್‌ಸೆಟ್ ತಂಡದ ಅನುಭವಿ ಆಟಗಾರ ಎಂದು ತಿಳಿದುಬಂತ್ತು.

ರಜೆಗಾಗಿ ಯಜಮಾನನ ಬಳಿ ಸುಳ್ಳು ಸಿಡ್ನಿ ರಿಪ್ಪನ್ ಈ ರೀತಿಯಾಗಿ ಮಾಡಲು ಒಂದು ಬಲವಾದ ಕಾರಣವೂ ಇದೆ. ಈ ಸಿಡ್ನಿ ರಿಪ್ಪನ್ ಸೋಮರ್‌ಸೆಟ್ ತಂಡದ ಪ್ರಮುಖ ಆಟಗಾರ. ಸಿಡ್ನಿ ಹಾಗೂ ಆತನ ಸಹೋದರ ಡಡ್ಲಿ ರಿಪ್ಪನ್ ಇಬ್ಬರೂ ಸೋಮರ್‌ಸೆಟ್ ಪರ ಆಡಿದ್ದರು. ಸಿಡ್ನಿ ಒಳನಾಡಿನ ಆದಾಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರಜಾ ನೀಡಲು ಸಿಡ್ನಿ ಬಾಸ್ ಆತನನ್ನು ಹೆಚ್ಚು ತೊಂದರೆಗೊಳಿಸದಿದ್ದ. ಹೀಗಾಗಿ ನನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಸಿಡ್ನಿ ರಜೆ ತೆಗೆದುಕೊಂಡು ಟ್ಯಾಂಟನ್‌ಗೆ ಪಂದ್ಯವನ್ನು ಆಡಲು ಹೊಗಿದ್ದ.

ಸತ್ಯ ತಿಳಿದ ಯಜಮಾನ ಮಾಡಿದ್ದೇನು? ಸಿಡ್ನಿ ತನ್ನ ಹೆಸರನ್ನು ಬದಲಾಯಿಸುವ ಟ್ರಿಕ್ ಯಶಸ್ವಿಯಾಗುತ್ತಿತ್ತು. ಆದರೆ ಆತ ಎರಡೂ ಇನ್ನಿಂಗ್ಸ್‌ಗಳಲ್ಲಿ 150 ರನ್ ಗಳಿಸಿದ. ಇದು ಎಲ್ಲಾ ಮಾಧ್ಯಮಗಳಿಗೆ ಹೊಸ ಆಟಗಾರನ ಬಗ್ಗೆ ಆಸಕ್ತಿ ಮೂಡಿಸಿತು. ಅದರ ನಂತರ ವೆಸ್ಟರ್ನ್ ಡೈಲಿ ಪತ್ರಿಕೆ ನಡೆಸಿದ ತನಿಖೆಯಲ್ಲಿ ಎಸ್. ಟರ್ಮಿನಲ್ ಮುಖವು ಸಿಡ್ನಿ ರಿಪ್ಪನ್ ಅವರ ಮುಖಕ್ಕೆ ಹೊಂದಿಕೆಯಾಯಿತು ಮತ್ತು ಎಲ್ಲಾ ಸತ್ಯಗಳು ಹೊರಬಂದವು. ಅದೃಷ್ಟವಶಾತ್, ಸಿಡ್ನಿ ಕಂಪನಿಯ ಯಜಮಾನ ಈ ವಿಷಯವನ್ನು ಸಕಾರಾತ್ಮಕವಾಗಿ ತೆಗೆದುಕೊಂಡನು. ಅದು ಅವನ ಕೆಲಸ ಅಥವಾ ಅವನ ಕ್ರಿಕೆಟಿಂಗ್ ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳಲಿಲ್ಲ. ಸಿಡ್ನಿ ರಿಪ್ಪನ್ 104 ಪ್ರಥಮ ದರ್ಜೆ ಪಂದ್ಯಗಳಲ್ಲಿ 21.59 ಸರಾಸರಿಯಲ್ಲಿ 3,823 ರನ್ ಗಳಿಸಿದ್ದಾರೆ. 6 ಶತಕಗಳೊಂದಿಗೆ 15 ಅರ್ಧಶತಕಗಳು ಸಹ ಸೇರಿವೆ.

ಇದನ್ನೂ ಓದಿ: ನಾನಾಡುವ ದಿನಗಳಲ್ಲೂ ಇಂಟರ್ನೆಟ್​ ಲಭ್ಯವಿದ್ದರೆ ಕಿರಿವಯಸ್ಸಿನಲ್ಲೇ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುತ್ತಿದ್ದೆ: ಸೆಹ್ವಾಗ್ 

ಪಾಕ್​ ಪರ ಕ್ರಿಕೆಟ್ ಆಡಲು ಇಷ್ಟಪಡದ ಒಂದೇ ಒಂದು ಮಗು ಕೂಡ ಇಲ್ಲ; ಇಮ್ರಾನ್ ತಾಹಿರ್

ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ