ಅರುಣ್ ಜೇಟ್ಲಿ ಮೈದಾನ ಉದಯ, ಭಾವುಕ ಪತ್ನಿ ಕಣ್ಣೀರು

|

Updated on: Sep 13, 2019 | 12:52 PM

ದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (DDCA) ವಿಶ್ವ ಪ್ರಸಿದ್ಧ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ದಿವಂಗತ ಹಿರಿಯ ರಾಜಕಾರಣಿ, ಅರುಣ್ ಜೇಟ್ಲಿಯವರ ಹೆಸರನ್ನ ಮರುನಾಮಕರಣ ಮಾಡಿತು. ಈ ಔಪಚಾರಿಕ ಸಮಾರಂಭವನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜವಾಹರ್ ಲಾಲ್ ನೆಹರು ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಅದ್ದೂರಿ ವೇದಿಕೆಯಲ್ಲಿ ಈ ಕಾರ್ಯಕ್ರಮ ನೆರವೇರಿದ್ದು,  ಹಲವಾರು ರಾಜಕಾರಣಿಗಳು ಮತ್ತು ಕ್ರಿಕೆಟ್ ದಿಗ್ಗಜರು ಇದಕ್ಕೆ ಸಾಕ್ಷಿಯಾದರು. ಇಷ್ಟೆ ಅಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿರುವ DDCA, […]

ಅರುಣ್ ಜೇಟ್ಲಿ ಮೈದಾನ ಉದಯ, ಭಾವುಕ ಪತ್ನಿ ಕಣ್ಣೀರು
Follow us on

ದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (DDCA) ವಿಶ್ವ ಪ್ರಸಿದ್ಧ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ದಿವಂಗತ ಹಿರಿಯ ರಾಜಕಾರಣಿ, ಅರುಣ್ ಜೇಟ್ಲಿಯವರ ಹೆಸರನ್ನ ಮರುನಾಮಕರಣ ಮಾಡಿತು. ಈ ಔಪಚಾರಿಕ ಸಮಾರಂಭವನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜವಾಹರ್ ಲಾಲ್ ನೆಹರು ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಅದ್ದೂರಿ ವೇದಿಕೆಯಲ್ಲಿ ಈ ಕಾರ್ಯಕ್ರಮ ನೆರವೇರಿದ್ದು,  ಹಲವಾರು ರಾಜಕಾರಣಿಗಳು ಮತ್ತು ಕ್ರಿಕೆಟ್ ದಿಗ್ಗಜರು ಇದಕ್ಕೆ ಸಾಕ್ಷಿಯಾದರು.

ಇಷ್ಟೆ ಅಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿರುವ DDCA, ಈ ಹಿಂದೆ ನಿರ್ಣಯಿಸಿದಂತೆ,  ಅದೇ ಮೈದಾನದ ಪೆವಿಲಿಯನ್​ವೊಂದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಹೆಸರಿಟ್ಡಟಿದೆ. ಇದು ಕೊಹ್ಲಿಅಭಿಮಾನಿಗಳಿಗೆ ಭಾರೀ ಸಂತೋಷ ತಂದಿದೆ.

Published On - 12:47 pm, Fri, 13 September 19