AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ದಿಕ್​ ಮೇಲೆ ಸಿಟ್ಟಾದ ಕೊಹ್ಲಿ; ವಿರಾಟ್​ರನ್ನು ಕೂಲ್ ಮಾಡಿದ ಧವನ್​ಗೆ ಪಾಂಡ್ಯ ಮೈದಾನದಲ್ಲೇ ದೀರ್ಘದಂಡ ನಮಸ್ಕಾರ

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್​ ಗಳಿಸಿ ರೋಹಿತ್​-ಧವನ್​ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್​ ಆದರು.

ಹಾರ್ದಿಕ್​ ಮೇಲೆ ಸಿಟ್ಟಾದ ಕೊಹ್ಲಿ; ವಿರಾಟ್​ರನ್ನು ಕೂಲ್ ಮಾಡಿದ ಧವನ್​ಗೆ ಪಾಂಡ್ಯ ಮೈದಾನದಲ್ಲೇ ದೀರ್ಘದಂಡ ನಮಸ್ಕಾರ
ಹಾರ್ದಿಕ್​ ಪಾಂದ್ಯ
ರಾಜೇಶ್ ದುಗ್ಗುಮನೆ
|

Updated on:Mar 28, 2021 | 7:30 PM

Share

ಭಾರತ ಮತ್ತು ಇಂಗ್ಲೆಂಡ್​ ನಡುವಣ ಅಂತಿಮ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಾರ್ದಿಕ್​ ಪಾಂಡ್ಯ ಅವರು ಶಿಖರ್​ ಧವನ್​ಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದವರೆಲ್ಲ ನಕ್ಕಿದ್ದಾರೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್​ ಗಳಿಸಿ ರೋಹಿತ್​-ಧವನ್​ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್​ ಆದರೆ, ನಂತರ ಧವನ್ (67)​, ನಾಯಕ ವಿರಾಟ್​ ಕೊಹ್ಲಿ (7) ರಾಹುಲ್​ (7) ಕೂಡ ವಿಕೆಟ್​ ಒಪ್ಪಿಸಿದರು. ಟೀಂ ಇಂಡಿಯಾ ಸಂಕಷ್ಟದಲ್ಲಿರುವಾಗಲೇ ರಿಷಬ್​ ಪಂತ್​ ಹಾಗೂ ಹಾರ್ದಿಕ್​ ಪಾಂಡ್ಯ ಜಾಗರೂಕ ಜತೆಯಾಟ ಆಡಿದರು. ಅಂತಿಮವಾಗಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 329ರನ್​ ಗಳಿಸಿತು.

330ರನ್​ಗಳ ಬೃಹತ್ ಗುರಿ ಬೆನ್ನು ಹತ್ತಿದ ಆಂಗ್ಲ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಓವರ್​ನಲ್ಲೇ ದಾಳಿಗೆ ಇಳಿದಿದ್ದ ಜೇಸನ್​ ರಾಯ್​ 14 ರನ್​ಗೆ ಔಟ್​ ಆದರು. ನಂತರ ಜಾನಿ ಬೇರ್​ಸ್ಟೋ (1) ಕೂಡ ಪೆವಿಲಿಯನ್​ ಸೇರುವ ಮೂಲಕ ಟೀಂ ಇಂಡಿಯಾವನ್ನು ನಿರಾಳ ಮಾಡಿದರು. ಈ ವೇಳೆ ಹೊಡಿಬಡಿ ಆಟಕ್ಕೆ ಮುಂದಾಗಿದ್ದರು ಬೆನ್​ ಸ್ಟೋಕ್ಸ್​. ಆದರೆ, ಬೀಸುವ ಅಬ್ಬರದಲ್ಲಿ ಅವರು ಎಚ್ಚರ ತಪ್ಪಿದ್ದರು.

ಅವರು ಹೊಡೆದ ಶಾಟ್​ ನೇರವಾಗಿ ಹಾರ್ದಿಕ್​ ಪಾಂಡ್ಯ ಕೈ ಸೇರಿತ್ತು. ಆದರೆ, ಅವರು ಸುಲಭ ಕ್ಯಾಚನ್ನು ಕೈಚೆಲ್ಲಿದರು. ಅವರು ಕ್ಯಾಚ್​ ಬಿಡುತ್ತಿದ್ದಂತೆ ಸ್ಟೋಕ್ಸ್​ ನಿರಾಳರಾದರು. ರೋಹಿತ್​ ತಲೆಮೇಲೆ ಕೈ ಹೊತ್ತು ಕುಳಿತರೆ, ವಿರಾಟ್​ ಕೊಹ್ಲಿ ಸಿಟ್ಟಾದರು. ಮಾಡಿದ ತಪ್ಪಿಗೆ ಹಾರ್ದಿಕ್​ ದೊಡ್ಡದಾಗಿ ಕೈ ಮುಗಿದು ಕ್ಷಮೆ ಕೇಳಿದರು.

ಕೆಲ ಓವರ್​ಗಳ ನಂತರ ಬೆನ್​ ಸ್ಟೋಕ್ಸ್​ ಹೊಡೆದ ಶಾಟ್​ ನೇರವಾಗಿ ಧವನ್​ ಕೈ ಸೇರಿತ್ತು. ಇದನ್ನು ಧವನ್​ ಅದ್ಭುತವಾಗಿ ಹಿಡಿದು ತೊಡೆ ತಟ್ಟಿದರು. ಕೊಹ್ಲಿ ಕೂಡ ನಕ್ಕರು. ಈ ವೇಳೆ ಎಲ್ಲರಿಗಿಂತ ಹೆಚ್ಚು ಖುಷಿ ಆಗಿದ್ದು ಹಾರ್ದಿಕ್​. ಅವರು ತಾವಿದ್ದಲ್ಲಿಂದಲೇ ದೀರ್ಘ ದಂಡ ನಮಸ್ಕಾರ ಹಾಕಿ ಬಿಟ್ಟರು. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ:  India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ

Published On - 7:27 pm, Sun, 28 March 21

Follow Us
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ