AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತಕ್ಕೆ ಒಂದು ಮೂರು-ದಿನಗಳ ಅಭ್ಯಾಸ ಪಂದ್ಯ ಏರ್ಪಾಟು ಮಾಡಲು ಈಸಿಬಿ ನಿರ್ಧಾರ: ಮೂಲಗಳು

ಪಿಟಿಐ ಜೊತೆ ಮಾತಾಡಿರುವ ಈಸಿಬಿಯ ವಕ್ತಾರರೊಬ್ಬರು, ‘ಐದು-ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಮೂರು-ದಿನಗಳ ಅಭ್ಯಾಸ ಪಂದ್ಯವೊಂದನ್ನು ಸೆಲೆಕ್ಟ್ ಕೌಂಟಿ ಇಲೆವೆನ್ ವಿರುದ್ಧ ಅಯೋಜಿಸುವಂತೆ ಬಿಸಿಸಿಐ ಮಾಡಿರುವ ಮನವಿ ನಮ್ಮ ಗಮನದಲ್ಲಿದೆ,’ ಎಂದು ಹೇಳಿದ್ದಾರೆ.

ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತಕ್ಕೆ ಒಂದು ಮೂರು-ದಿನಗಳ ಅಭ್ಯಾಸ ಪಂದ್ಯ ಏರ್ಪಾಟು ಮಾಡಲು ಈಸಿಬಿ ನಿರ್ಧಾರ: ಮೂಲಗಳು
ಟೀಮ್ ಇಂಡಿಯಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 02, 2021 | 9:48 PM

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಗಸ್ಟ್ 4 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಮೊದಲು ಕನಿಷ್ಟ ಎರಡು ಟೂರ್ ಗೇಮ್ಗಳನ್ನು ಅಯೋಜಿಸಬೇಕೆಂದು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿಗೆ (ಈಸಿಬಿ) ಮಾಡಿದ ಮನವಿ ಅರ್ಧ ನೆರವೇರಿದೆ. ಶುಕ್ರವಾರದಂದು ಪಿಟಿಐ ವರದಿ ಮಾಡಿರುವ ಪ್ರಕಾರ ಈಸಿಬಿ, ‘ಸೆಲೆಕ್ಟ್ ಕೌಂಟಿ ಇಲೆವೆನ್’ ಮೂರು ದಿನಗಳ ಒಂದು ಪಂದ್ಯವನ್ನು ಏರ್ಪಾಡು ಮಾಡಲು ನಿರ್ಧರಿಸಿದೆ. ಈ ಪಂದ್ಯಕ್ಕೆ ಪ್ರಥಮ ದರ್ಜೆ ಪಂದ್ಯದ ಸ್ಥಾನಮಾನ ನೀಡಲಾಗುವುದು ಅಂತ ಅದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ. ಪಂದ್ಯವನ್ನು ಪ್ರಾಯಶಃ ಜುಲೈ ತಿಂಗಳ ಮೂರನೇ ವಾರದಲ್ಲಿ ಆಡಿಸಲಾಗುವುದು. ಇಂಗ್ಲಿಷ್ ಕೌಂಟಿಗಳಲ್ಲಾಡುವ ಕ್ಲಬ್​ಗಳಿಂದ ಆಟಗಾರರನ್ನು ಅರಿಸಿ ಸೆಲೆಕ್ಟ್ ಕೌಂಟಿ ಇಲೆವೆನ್ ತಂಡ ರಚಿಸಿ ಟೆಸ್ಟ್ ಸರಣಿ ಅರಂಭವಾಗುವ ಮೊದಲು ಇಂಡಿಯಾ ಟೀಮಿನ ವಿರುದ್ಧ ಆಡಿಸಲಾಗುವುದೆಂದು ಈಸಿಬಿ ಹೇಳಿದೆ.

ಪಂದ್ಯ ನಡೆಯುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲವಾದರೂ ಜುಲೈ 20 ರಿಂದ 22 ರವರೆಗೆ ಆಯೋಜಿಸುವ ಸಾಧ್ಯತೆ ಇದೆ.

ಪಿಟಿಐ ಜೊತೆ ಮಾತಾಡಿರುವ ಈಸಿಬಿಯ ವಕ್ತಾರರೊಬ್ಬರು, ‘ಐದು-ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಮೂರು-ದಿನಗಳ ಅಭ್ಯಾಸ ಪಂದ್ಯವೊಂದನ್ನು ಸೆಲೆಕ್ಟ್ ಕೌಂಟಿ ಇಲೆವೆನ್ ವಿರುದ್ಧ ಅಯೋಜಿಸುವಂತೆ ಬಿಸಿಸಿಐ ಮಾಡಿರುವ ಮನವಿ ನಮ್ಮ ಗಮನದಲ್ಲಿದೆ,’ ಎಂದು ಹೇಳಿದ್ದಾರೆ.

‘ಪಂದ್ಯ ಆಯೋಜಿಸುವುದನ್ನು ಕುರಿತಂತೆ, ಕೋವಿಡ್-19 ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಯೋಜನೆ ರೂಪಿಸುತ್ತಿದ್ದೇವೆ. ಅದನ್ನು ಯಶಸ್ವೀಯಾಗಿ ಅಯೋಜಿಸುವ ಭರವಸೆ ನಮಗಿದೆ ಮತ್ತು ಆದಷ್ಟು ಬೇಗ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ,’ ಎಂದು ಅವರು ಹೇಳಿದ್ದಾರೆ.

’ಭಾರತದ ತಂಡ ಟೆಸ್ಟ್-ಪೂರ್ವ ತರಬೇತಿಗಾಗಿ ಜುಲೈ 15 ರಂದು ಡುರ್ಹಮ್ನ ಎಮಿರೇಟ್ಸ್ ರಿವರ್ಸೈಡ್ಗೆ ಬಂದು ಸೇರಲಿದೆ. ಅಲ್ಲಿ ಆಗಸ್ಟ್ 1 ರವರಗೆ ತಯಾರಿ ನಡೆಸಿದ ನಂತರ ಟ್ರೆಂಟ್ ಬ್ರಿಜ್ ನಾಟಿಂಗ್ಹ್ಯಾಮ್​ಗೆ ತೆರಳಲಿದೆ. ಇದೇ ಸ್ಥಳದಲ್ಲಿ ಮೊದಲ ಟೆಸ್ಟ್ ಆಗಸ್ಟ್ 4 ರಿಂದ ನಡೆಯಲಿದೆ,’ ಎಂದು ಬಾತ್ಮೀದಾರ ಹೇಳಿದರು.

ಜುಲೈ 23 ರಿಂದ ‘ದಿ ಹಂಡ್ರೆಡ್’ ಟೂರ್ನಿ ಆರಂಭವಾಗಲಿರುವುದರಿಂದ ಸೆಲೆಕ್ಟ್ ಕೌಂಟಿ ಇಲೆವೆನ್ ತಂಡದ ಕ್ವಾಲಿಟಿ ಹೇಗಿರಲಿದೆ ಎಂದು ಕೇಳಿದ ಪ್ರಶ್ನೆಗೆ ಅವರು, ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಭಾಗವಹಿಸದ ಆಟಗಾರರರನ್ನು ನಾವು ಆರಿಸಲಿದ್ದೇವೆ ಮತ್ತು ಒಂದು ಪ್ರಬಲ ತಂಡವನ್ನು ಆಯ್ಕೆ ಮಾಡುವ ಪ್ರಯತ್ನ ನಮ್ಮದಾಗಿರುತ್ತದೆ,’ ಎಂದು ಅವರು ಹೇಳಿದರು.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ದಯನೀಯ ಸೋಲು ಅನುಭವಿಸಿದ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಸರಣಿಗೆ ಮೊದಲು ಅಭ್ಯಾಸ ಪಂದ್ಯವನ್ನು ಅಯೋಜಿಸಬೇಕೆನ್ನುವ ಬೇಡಿಕೆ ಮುಂದಿಟ್ಟಿದ್ದರು.

ಡಬ್ಲ್ಯುಟಿಸಿ ಫೈನಲ್ಗೆ ಮೊದಲು ಭಾರತ ಯಾವುದೇ ಅಭ್ಯಾಸ ಪಂದ್ಯ ಆಡದೆ ನೇರವಾಗಿ ಕಣಕ್ಕಿಳಿದಿತ್ತು. ಆದರೆ ಇಂಗ್ಲೆಂಡ್ ವಿರುದ್ಧ 2-ಪಂದ್ಯಗಳ ಸರಣಿ ಅಡಿದ ನ್ಯೂಜೆಲೆಂಡ್ ಭರ್ಜರಿ ತಯಾರಿಯೊಂದಿಗೆ ರಂಗ ಪ್ರವೇಶಿಸಿತ್ತು. ಹಾಗಾಗಿ ವಿಶ್ವದ ನಂಬರ್ ವನ್ ಟೀಮನ್ನು ಸೋಲಿಸಲು ಅದು ಹೆಚ್ಚು ಶ್ರಮಿಸುವ ಅಗತ್ಯ ಬೀಳಲಿಲ್ಲ.

ಇದನ್ನೂ ಓದಿ: Virat Kohli: ಕೊಹ್ಲಿ ಒಬ್ಬ ನತದೃಷ್ಟ ನಾಯಕ! ಕೇವಲ ಆತನೊಬ್ಬನನ್ನು ಮಾತ್ರ ಏಕೆ ದೂಷಿಸುತ್ತಾರೆ? ವಿರಾಟ್ ಪರ ನಿಂತ ಅರುಣ್ ಲಾಲ್

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು