AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಪ್ಲೇ ಆಫ್​ ಸಾಧಿಸಲು ಇಂದಿನ ಪಂದ್ಯ ಎಷ್ಟು ಮುಖ್ಯ? ದೊಡ್ಡ ಗಣೇಶ್ ವಿಶ್ಲೇಷಣೆ..

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಸದ್ಯ ಪ್ಲೇ ಆಫ್​ನ ಎರಡು ಅವಕಾಶಗಳನ್ನ ಕೈ ಚೆಲ್ಲಿದೆ. ಒಂದು ಮುಂಬೈ ವಿರುದ್ಧ.. ಮತ್ತೊಂದು ಹೈದರಾಬಾದ್ ವಿರುದ್ಧ.. ಎರಡೂ ಪಂದ್ಯಗಳಲ್ಲಿ ಸೋತು, ಸುಲಭವಾಗಿ ಪ್ಲೇ ಆಫ್ ಅವಕಾಶವನ್ನ ಕೈ ಚೆಲ್ಲಿದೆ. ಹೀಗಾಗಿ ಇಂದು ಆರ್​ಸಿಬಿ ಪ್ಲೇ ಆಫ್ ಏರಲು ಡೆಲ್ಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸತತ 3 ಪಂದ್ಯಗಳಲ್ಲಿ ಸೋಲು.. ಇಂದು ಸಿಡಿದೇಳಬೇಕು ಆರ್ಸಿಬಿ! ಲೀಗ್​ನ ಆರಂಭದಿಂದ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದ ಆರ್​ಸಿಬಿ ಪ್ಲೇ ಆಫ್​ಗೆ […]

RCB ಪ್ಲೇ ಆಫ್​ ಸಾಧಿಸಲು ಇಂದಿನ ಪಂದ್ಯ ಎಷ್ಟು ಮುಖ್ಯ? ದೊಡ್ಡ ಗಣೇಶ್ ವಿಶ್ಲೇಷಣೆ..
ಆರ್​ಸಿಬಿ ತಂಡ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Nov 02, 2020 | 10:32 AM

Share

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಸದ್ಯ ಪ್ಲೇ ಆಫ್​ನ ಎರಡು ಅವಕಾಶಗಳನ್ನ ಕೈ ಚೆಲ್ಲಿದೆ. ಒಂದು ಮುಂಬೈ ವಿರುದ್ಧ.. ಮತ್ತೊಂದು ಹೈದರಾಬಾದ್ ವಿರುದ್ಧ.. ಎರಡೂ ಪಂದ್ಯಗಳಲ್ಲಿ ಸೋತು, ಸುಲಭವಾಗಿ ಪ್ಲೇ ಆಫ್ ಅವಕಾಶವನ್ನ ಕೈ ಚೆಲ್ಲಿದೆ. ಹೀಗಾಗಿ ಇಂದು ಆರ್​ಸಿಬಿ ಪ್ಲೇ ಆಫ್ ಏರಲು ಡೆಲ್ಲಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಸತತ 3 ಪಂದ್ಯಗಳಲ್ಲಿ ಸೋಲು.. ಇಂದು ಸಿಡಿದೇಳಬೇಕು ಆರ್ಸಿಬಿ! ಲೀಗ್​ನ ಆರಂಭದಿಂದ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡೋ ಮಹತ್ವದ ಮೂರು ಪಂದ್ಯಗಳಲ್ಲೇ ಮುಗ್ಗರಿಸಿದೆ. ಅದ್ರಲ್ಲೂ ಕಳೆದ ಸತತ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರೋದು ಆರ್​ಸಿಬಿ ಆತ್ಮವಿಶ್ವಾಸಕ್ಕೆ ಧಕ್ಕೆಯಾಗೋ ಹಾಗೇ ಮಾಡಿದೆ.

ಸತತ 4 ಪಂದ್ಯಗಳಲ್ಲಿ ಸೋತು ಕಂಗಾಲಾಗಿದೆ ಡೆಲ್ಲಿ! ಆರ್​ಸಿಬಿ ಕಳೆದ ಮೂರು ಪಂದ್ಯಗಳನ್ನ ಸೋತ್ರೆ, ಡೆಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತಿದೆ. ಸಹಜವಾಗೇ ಡೆಲ್ಲಿ ಆರ್​ಸಿಬಿಗಿಂತ ಹೆಚ್ಚಿನ ಒತ್ತಡದಲ್ಲಿದೆ. ಹೀಗಾಗಿ ಆರಂಭದಲ್ಲೇ ಡೆಲ್ಲಿ ಆಟಗಾರರ ಮೇಲೆ ಒತ್ತಡ ಹೇರಿದ್ರೆ, ಆರ್​ಸಿಬಿ ಸುಲಭವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸೋದಕ್ಕೆ ನೆರವಾಗುತ್ತೆ.

ಗೆಲುವು ನಿರ್ಧರಿಸಬೇಕು ಕ್ಯಾಪ್ಟನ್ ಕೊಹ್ಲಿ, ಎಬಿಡಿ! ಕಳೆದ ಮೂರ ಪಂದ್ಯಗಳಲ್ಲಿ ಆರ್​ಸಿಬಿ ಸೋಲಿಗೆ ಕಾರಣವಾಗಿರೋದೇ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ಸ್ಲೋ ಬ್ಯಾಟಿಂಗ್. ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ, ಕ್ಯಾಪ್ಟನ್ ಕೊಹ್ಲಿ ಮತ್ತು ಎಬಿಡಿ ಬ್ಯಾಟಿಂಗ್​ನಲ್ಲಿ ಆರ್​ಸಿಬಿ ಗೆಲುವನ್ನು ನಿರ್ಧರಿಸಬೇಕಿದೆ.

ಡೆಲ್ಲಿ ವಿರುದ್ಧ ಸೋತ್ರೆ ಆರ್​ಸಿಬಿ ಮುಂದಿರೋ ಮಾರ್ಗವೇನು? ಈಗಾಗಲೇ RCB ಡೆಲ್ಲಿ ಪಾಲಿಗೆ ಕಂಟಕವಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್​ನಿಂದ ಹೊರ ನಡೆದಿವೆ. ಒಂದು ವೇಳೆ ಬ್ಯಾಡ್ ಲಕ್​ನಿಂದ RCBಡೆಲ್ಲಿ ವಿರುದ್ಧ ಸೋತ್ರೆ ಮುಂದಾಗೋದು ಮಿರಾಕಲ್. ಕೊಲ್ಕತ್ತಾ ಈಗಾಗಲೇ 14 ಪಾಯಿಂಟ್ ಪಡೆದು ಪಾಯಿಂಟ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ. 12 ಪಾಯಿಂಟ್ ಪಡೆದಿರೋ ಹೈದರಾಬಾದ್ ನಾಳೆ ಮುಂಬೈ ವಿರುದ್ಧ ಸೋತ್ರೆ, RCBಡೆಲ್ಲಿ ವಿರುದ್ಧ ಸೋತ್ರೂ ಪ್ಲೇ ಆಫ್​ಗೆ ಸುಲಭವಾಗಿ ಎಂಟ್ರಿ ಕೊಡಲಿದೆ.

ಸದ್ಯ RCBಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲ್ಲೋದನ್ನೇ ಟಾರ್ಗೆಟ್ ಮಾಡಬೇಕಿದೆ. ಒಂದು ವೇಳೆ ಮುಂಬೈ ವಿರುದ್ಧ ಹೈದರಾಬಾದ್ ಗೆದ್ರೆ, RCB ಕತೆ ಮುಗಿದಂತೆ. ಹೀಗಾಗಿ ಕೊಹ್ಲಿ ಹುಡುಗರು ಹೈದರಾಬಾದ್ ಫಲಿತಾಂಶವನ್ನ ಎದುರು ನೋಡದೇ ಇಂದೇ, ಡೆಲ್ಲಿ ಮಣಿಸಿ ಪ್ಲೇ ಆಫ್​ಗೆ ಎಂಟ್ರಿ ಕೊಡೋದು ಉತ್ತಮ.

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ