IPL 2020: ಕಪ್​ ಗೆಲ್ತಾರಾ ಕೊಲ್ಕತ್ತಾ ಹುಡುಗರು, ಹೇಗಿದೆ ಶಾರುಖ್ ತಂಡದ ಸಮರಾಭ್ಯಾಸ?

ಕೆರಿಬಿಯನ್​ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಹೀಗಾಗಿ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ತಂಡವು ಗೆಲುವಿನೊಂದಿಗೆ ತಮ್ಮ ಖಾತೆ ತೆರೆಯಲು ಪಣ ತೊಟ್ಟಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಭಾರಿ ಸಮರಾಭ್ಯಾಸ ಮಾಡುತ್ತಿದೆ. [yop_poll id=”1″] ಮೊದಲ ಬಾರಿಗೆ ಐಪಿಎಲ್‌ ರಣಾಂಗಣಕ್ಕೆ ಕಾಲಿಡುತ್ತಿರುವ ಅಮೆರಿಕದ ಮೊದಲ ಕ್ರಿಕೆಟ್​ ಆಟಗಾರ ಆಲಿ ಖಾನ್​ ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಹೀಗಾಗಿ ಆಲಿ ಖಾನ್ […]

IPL 2020: ಕಪ್​ ಗೆಲ್ತಾರಾ ಕೊಲ್ಕತ್ತಾ ಹುಡುಗರು, ಹೇಗಿದೆ ಶಾರುಖ್ ತಂಡದ ಸಮರಾಭ್ಯಾಸ?
ಸಾಧು ಶ್ರೀನಾಥ್​

Updated on: Sep 23, 2020 | 6:08 PM

ಕೆರಿಬಿಯನ್​ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಹೀಗಾಗಿ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ತಂಡವು ಗೆಲುವಿನೊಂದಿಗೆ ತಮ್ಮ ಖಾತೆ ತೆರೆಯಲು ಪಣ ತೊಟ್ಟಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಭಾರಿ ಸಮರಾಭ್ಯಾಸ ಮಾಡುತ್ತಿದೆ.
[yop_poll id=”1″]

ಮೊದಲ ಬಾರಿಗೆ ಐಪಿಎಲ್‌ ರಣಾಂಗಣಕ್ಕೆ ಕಾಲಿಡುತ್ತಿರುವ ಅಮೆರಿಕದ ಮೊದಲ ಕ್ರಿಕೆಟ್​ ಆಟಗಾರ ಆಲಿ ಖಾನ್​ ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಹೀಗಾಗಿ ಆಲಿ ಖಾನ್ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.


ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿ ವಿಕೆಟ್‌ ಕೀಪಿಂಗ್​ ವಿಭಾಗದಲ್ಲಿ ಮಿಂಚುತ್ತಿರುವ ದಿನೇಶ್​ ಕಾರ್ತಿಕ್ ಅತ್ಯುತ್ತಮ ದಾಂಡಿಗನೂ ಕೂಡ. ಹೀಗಾಗಿ ಡೆತ್​ ಓವರ್​ಗಳಲ್ಲಿ ದಿನೇಶ್​ ಕಾರ್ತಿಕ್ ತಂಡಕ್ಕೆ ಆಸರೆಯಾಗಬಲ್ಲರು.


ಮರಳುಗಾಡಿನ ಐಪಿಎಲ್​ಗೆ ರೆಡಿಯಾಗಿರುವ ಕೊಲ್ಕತ್ತಾ ಹುಡುಗರು ಅಭ್ಯಾಸದೊಂದಿಗೆ ಮೋಜುಮಸ್ತಿಯಲ್ಲೂ ಬಿಂದಾಸ್​ ಆಗಿ ಕಾಲ ಕಳೆಯುತ್ತಿದ್ದಾರೆ. ಅಭ್ಯಾಸದ ನಂತರ ಬಿಸಿಲ ಬೇಗೆಯಿಂದ ಬಸವಳಿದ ಕೊಲ್ಕತ್ತಾ ಹುಡುಗರು ಶರ್ಟ್​ ಕಳಚಿ ಪೋಸು ಕೊಟ್ಟಿದ್ದು ಹೀಗೆ.


ಚೈನಾ ಮ್ಯಾನ್​ ಖ್ಯಾತಿಯ ಕುಲ್​ದೀಪ್​ ಯಾದವ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ ಕ್ಯಾಮೆರಾ ಕಣ್ಣಿಗೆ ಯಾದವ್​ ಸಿಕ್ಕಿ ಬಿದಿದ್ದು ಹೀಗೆ.


ಕೆರಿಬಿಯನ್ ದೈತ್ಯ ಆಂಡ್ರೆ ರಸೆಲ್​ ಮೇಲೆ ಈ ಆವೃತ್ತಿಯಲ್ಲಿ ಭಾರಿ ನಿರೀಕ್ಷೆಗಳಿವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸುವ ಸಾಮರ್ಥ್ಯ ಹೊಂದಿರುವ ರಸೆಲ್​ ಯಾವುದೇ ಸಂದರ್ಭದಲ್ಲೂ ಪಂದ್ಯದ ದಿಕ್ಕನೇ ಬದಲಿಸಬಲ್ಲರು.


ತಂಡದಲ್ಲಿ ಯಾವ ಕ್ರಮಾಂಕದಲ್ಲೂ ಬ್ಯಾಟಿಂಗ್​ ಇಳಿದು ಘರ್ಜಿಸುವ ಸಾಮರ್ಥ್ಯ ಹೊಂದಿರುವ ನಿತಿಶ್ ರಾಣಾ ಅಭ್ಯಾಸದ ಸಮಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ.


ಕೆಕೆಆರ್​ ಆರಂಭಿಕ ಆಟಗಾರ ಶುಬ್ಮಾನ್ ಗಿಲ್​ಗೆ ಅಭ್ಯಾದ ಸಮಯದಲ್ಲಿ ತಂಡದ ಕೋಚ್​ ಮೇಕಲಂ ತಮ್ಮ ಅನುಭವವನ್ನು ಧಾರೆ ಎರೆದಿದ್ದು ಹೀಗೆ.

(Photo courtesy: KolkataKnightRiders Twitter)

Published On - 1:22 pm, Wed, 23 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us