AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕ IPL 2020: ಆಕಾಶದಿಂದ ಇಳಿಯಿತು ರಾಜಸ್ಥಾನ ರಾಯಲ್ಸ್ ಜೆರ್ಸಿ! ವಿಡಿಯೋ ನೋಡಿ

ಅರಬ್ ನಾಡಿನಲ್ಲಿ ನಡೆಯಲಿರೋ ಕಲರ್​ಫುಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ನೂತನ ಜೆರ್ಸಿಯನ್ನ ಬಿಡುಗಡೆ ಗೊಳಿಸಿತು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಈ ಬಾರಿ ರಾಯಲ್ಸ್ ಹೊಸ ಜೆರ್ಸಿ ಅನಾವರಣ ಮಾಡಿದ್ದು, ತುಂಬಾನೇ ಡಿಫರೆಂಟ್ ಆಗಿತ್ತು.. ಪ್ಯಾರಚೂಟ್​ನಿಂದ ಬಂತು ರಾಜಸ್ಥಾನದ ಜೆರ್ಸಿ! ರಾಜಸ್ಥಾನ ರಾಯಲ್ಸ್ ತಂಡದ ಹೊಸ ಜೆರ್ಸಿಯನ್ನ ವಿನೂತನವಾಗಿ ಸಮುದ್ರ ದಡದಲ್ಲೇ ಬಿಡುಗಡೆ ಮಾಡಲಾಯ್ತು. ಹೊಸ ಜೆರ್ಸಿ ಹೇಗಿರುತ್ತೆ ಅನ್ನೋ ಕುತೂಹಲದೊಂದಿಗೆ ರಾಜಸ್ಥಾನ್ ಆಟಗಾರರು, ಬೀಚ್​ಗೆ ಬಂದಿದ್ದರು. ಜೊತೆಗೆ ಹತ್ತು ಹಲವು […]

ರೋಚಕ IPL 2020: ಆಕಾಶದಿಂದ ಇಳಿಯಿತು ರಾಜಸ್ಥಾನ ರಾಯಲ್ಸ್ ಜೆರ್ಸಿ! ವಿಡಿಯೋ ನೋಡಿ
ಸಾಧು ಶ್ರೀನಾಥ್​
|

Updated on:Sep 17, 2020 | 1:58 PM

Share

ಅರಬ್ ನಾಡಿನಲ್ಲಿ ನಡೆಯಲಿರೋ ಕಲರ್​ಫುಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ನೂತನ ಜೆರ್ಸಿಯನ್ನ ಬಿಡುಗಡೆ ಗೊಳಿಸಿತು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಈ ಬಾರಿ ರಾಯಲ್ಸ್ ಹೊಸ ಜೆರ್ಸಿ ಅನಾವರಣ ಮಾಡಿದ್ದು, ತುಂಬಾನೇ ಡಿಫರೆಂಟ್ ಆಗಿತ್ತು..

ಪ್ಯಾರಚೂಟ್​ನಿಂದ ಬಂತು ರಾಜಸ್ಥಾನದ ಜೆರ್ಸಿ! ರಾಜಸ್ಥಾನ ರಾಯಲ್ಸ್ ತಂಡದ ಹೊಸ ಜೆರ್ಸಿಯನ್ನ ವಿನೂತನವಾಗಿ ಸಮುದ್ರ ದಡದಲ್ಲೇ ಬಿಡುಗಡೆ ಮಾಡಲಾಯ್ತು. ಹೊಸ ಜೆರ್ಸಿ ಹೇಗಿರುತ್ತೆ ಅನ್ನೋ ಕುತೂಹಲದೊಂದಿಗೆ ರಾಜಸ್ಥಾನ್ ಆಟಗಾರರು, ಬೀಚ್​ಗೆ ಬಂದಿದ್ದರು. ಜೊತೆಗೆ ಹತ್ತು ಹಲವು ಕುತೂಹಲಗಳೊಂದಿಗೆ ರಾಜಸ್ಥಾನ್ ಆಟಗಾರರು, ಜೆರ್ಸಿಯನ್ನ ಹೇಗೆ ರಿಲೀಸ್ ಮಾಡ್ತಾರೆ ಅಂತಾ ತಲೆಯಲ್ಲಿ ಹುಳ ಬಿಟ್ಕೊಂಡು ಕಾಯುತ್ತಿದ್ದರು.

ಹೀಗೆ ರಾಜಸ್ಥಾನ್ ಆಟಗಾರರು ತೀವ್ರ ಕುತೂಹಲದೊಂದಿಗೆ ಬೀಚ್​ನಲ್ಲಿ ಕಾಯುತ್ತಿದ್ದಾಗಲೇ, ಹೆಲಿಕಾಪ್ಟರ್​ವೊಂದು ಹಾರಿ ಬಂದಿತ್ತು. ನೋಡ ನೋಡ್ತಿದ್ದಂತೆ ಸ್ಪೇನ್​ನ ಸ್ಕೈ ಡ್ರೈವಿಂಗ್ ಅಥ್ಲೀಟ್ ಡನಿ ರೋಮನ್, ಬ್ಯಾಗ್​ನಲ್ಲಿ ಜೆರ್ಸಿಯನ್ನಿಟ್ಟುಕೊಂಡು ಪ್ಯಾರಚೂಟ್​ನಲ್ಲಿ ಹಾರಿದ್ದರು. ಸಾವಿರಾರು ಕಿ. ಮೀ.  ಮುಗಿಲೆತ್ತರಕ್ಕೆ ಹಕ್ಕಿಯಂತೆ ಹಾರಿದ್ದ ಡನಿ ರೋಮನ್, ಆಟಗಾರರಿಗೆ ಗೊತ್ತಾಗದ್ದಂತೆ ಜೆರ್ಸಿಯನ್ನ ಆಟಗಾರರ ಬಳಿಗೆ ತಂದರು.

ರಾಬಿನ್ ಉತ್ತಪ್ಪ ಬೀಚ್ ಬಳಿಯೇ ಜೆರ್ಸಿ ಹಾಕಿಕೊಂಡ್ರು!   ರೋಮನ್ ತಂದಿದ್ದ ಮೂರು ಜೆರ್ಸಿಗಳನ್ನ ಡೇವಿಡ್ ಮಿಲ್ಲರ್, ರಾಬಿನ್ ಉತ್ತಪ್ಪ ಹಾಗೂ ರಿಯಾನ್ ಪರಾಗ್, ಬೀಚ್ ಬಳಿಯೇ ಹಾಕಿಕೊಂಡು ಬಿಡುಗಡೆಗೊಳಿಸಿದರು. ಹೀಗೆ ಹತ್ತು ಹಲವು ವಿಶೇಷತೆಗಳಿಂದ ರಾಜಸ್ಥಾನ ರಾಯಲ್ಸ್ ಕಪ್​ ಗೆಲ್ಲುವ ಹಾಟ್​ ಫೇವರೆಟ್​ ತಂಡವಾಗಿ ರಣರಂಗಕ್ಕೆ ಸಿದ್ಧವಾಗುತ್ತಿದೆ.

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Published On - 10:34 am, Fri, 11 September 20

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು