AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರ್ಜಾದಲ್ಲಿಂದು RCBಗೆ ಪಂಜಾಬ್ ಕನ್ನಡಿಗರ ಸವಾಲ್! ಸೇಡಿನ ಸಮರಕ್ಕೆ ಕೊಹ್ಲಿ ಪಡೆ ಸಜ್ಜು

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಆರ್ಭಟ ಪಂದ್ಯದಿಂದ ಪಂದ್ಯಕ್ಕೆ ಜೋರಾಗ್ತಿದೆ. ಆರ್​ಸಿಬಿ ಅಭಿಮಾನಿಗಳಂತೂ  ಈ ಸಲ್ ಕಪ್ ನಮ್ದೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅನ್ನೋ ವಿಶ್ವಾಸದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನ ಹೀನಾಯವಾಗಿ ಬಗ್ಗು ಬಡಿದಿರುವ ಕೊಹ್ಲಿ ಬಾಯ್ಸ್, ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧದ ಸೇಡಿನ ಸಮರಕ್ಕೆ ಸಜ್ಜಾಗಿದ್ದಾರೆ. ಯಾಕಂದ್ರೆ ಆರ್​ಸಿಬಿ ತನ್ನ ಎರಡನೇ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಮುಗ್ಗರಿಸಿತ್ತು. ಬ್ಯಾಟಿಂಗ್ ಕೋಟೆಯಲ್ಲಿ ಕೊಹ್ಲಿ ಗ್ಯಾಂಗ್ ಹರಿಸಲಿದೆ ರನ್ ಮಳೆ! ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಶಾರ್ಜಾದಲ್ಲಿ ಈಗಾಗಲೇ ಆರ್​ಸಿಬಿ […]

ಶಾರ್ಜಾದಲ್ಲಿಂದು RCBಗೆ ಪಂಜಾಬ್ ಕನ್ನಡಿಗರ ಸವಾಲ್! ಸೇಡಿನ ಸಮರಕ್ಕೆ ಕೊಹ್ಲಿ ಪಡೆ ಸಜ್ಜು
ಆಯೇಷಾ ಬಾನು
| Edited By: |

Updated on:Oct 15, 2020 | 12:15 PM

Share

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಆರ್ಭಟ ಪಂದ್ಯದಿಂದ ಪಂದ್ಯಕ್ಕೆ ಜೋರಾಗ್ತಿದೆ. ಆರ್​ಸಿಬಿ ಅಭಿಮಾನಿಗಳಂತೂ  ಈ ಸಲ್ ಕಪ್ ನಮ್ದೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಅನ್ನೋ ವಿಶ್ವಾಸದಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನ ಹೀನಾಯವಾಗಿ ಬಗ್ಗು ಬಡಿದಿರುವ ಕೊಹ್ಲಿ ಬಾಯ್ಸ್, ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧದ ಸೇಡಿನ ಸಮರಕ್ಕೆ ಸಜ್ಜಾಗಿದ್ದಾರೆ. ಯಾಕಂದ್ರೆ ಆರ್​ಸಿಬಿ ತನ್ನ ಎರಡನೇ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಮುಗ್ಗರಿಸಿತ್ತು.

ಬ್ಯಾಟಿಂಗ್ ಕೋಟೆಯಲ್ಲಿ ಕೊಹ್ಲಿ ಗ್ಯಾಂಗ್ ಹರಿಸಲಿದೆ ರನ್ ಮಳೆ! ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಶಾರ್ಜಾದಲ್ಲಿ ಈಗಾಗಲೇ ಆರ್​ಸಿಬಿ ತಂಡ ಕೊಲ್ಕತ್ತಾ ವಿರುದ್ಧ, 82 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇವತ್ತು ಅದೇ ಶಾರ್ಜಾ ಮೈದಾನದಲ್ಲಿ ಕಣಕ್ಕಿಳಿಯುತ್ತಿರೋ ಕೊಹ್ಲಿ ಗ್ಯಾಂಗ್, ಪಂಜಾಬ್ ಮಣಿಸೋಕೆ 200ಕ್ಕೂ ಅಧಿಕ ರನ್ ಟಾರ್ಗೆಟ್ ನೀಡೋ ಗುರಿ ಇಟ್ಕೊಂಡಿದೆ.

ಶಾರ್ಜಾದಲ್ಲಿ ಪಂಜಾಬ್​ಗೆ ಸೋಲು.. ಆರ್​ಸಿಬಿಗೆ ಗೆಲುವು! ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಶಾರ್ಜಾ ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಂದ್ರೆ, ಕಳೆದ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 82 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಅದೇ ಪಂಜಾಬ್ ರಾಜಸ್ಥಾನ್ ವಿರುದ್ಧ ಶಾರ್ಜಾದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಶಾರ್ಜಾ ಪಿಚ್ ಅನ್ನ ಆರ್​ಸಿಬಿ ಹುಡುಗರು ಸದ್ಬಳಕೆ ಮಾಡಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. [yop_poll id=”13″]

ಆರ್​ಸಿಬಿ ಬಲ ಹೆಚ್ಚಿಸಿದ ಫಿಂಚ್, ಸುಂದರ್, ಮಾರಿಸ್! ಸದ್ಯ ಟೂರ್ನಿಯಲ್ಲಿ ಆರ್​ಸಿಬಿ ರೆಡ್ ಹಾಟ್ ಫಾರ್ಮ್​ನಲ್ಲಿದೆ. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಌರೋನ್ ಫಿಂಚ್ ಸಿಡಿದಿದ್ರೆ, ಬ್ಯಾಟಿಂಗ್ ಫ್ರೆಂಡ್ಲಿ ಪಿಚ್​ನಲ್ಲಿ ವಾಷಿಂಗ್ಟನ್ ಸುಂದರ್ ಕೈ ಚಳಕ ಆರ್​ಸಿಬಿ ಯಶಸ್ಸಿಗೆ ಕಾರಣವಾಗ್ತಿದೆ. ಇನ್ನು ಡೆತ್ ಓವರ್​ನಲ್ಲಿ ಸಾಲಿಡ್ ಸ್ಪೆಲ್ ಮಾಡ್ತೀರೋ ಕ್ರಿಸ್ ಮಾರಿಸ್, ಕೊಹ್ಲಿ ತಂಡದ ಬಲ ಹೆಚ್ಚಿಸಿದ್ದಾರೆ.

ಪಂಜಾಬ್ ಪರ ಕಣಕ್ಕಿಳಿಯಲಿದ್ದಾನೆ ಕೆರಿಬಿಯನ್ ಕಿಂಗ್! ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿರೋ ಪಂಜಾಬ್, ಪ್ಲೇ ಆಫ್​ಗೆ ಎಂಟ್ರಿ ಕೊಡ್ಬೇಕು ಅಂದ್ರೆ ಉಳಿದ ಎಲ್ಲಾ ಪಂದ್ಯಗಳನ್ನ ಗೆಲ್ಲಲೇಬೇಕು. ಹೀಗಾಗಿ ಬಲಿಷ್ಟ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್, ಕಳಪೆ ಫಾರ್ಮ್​ನಲ್ಲಿರೋ ಗ್ಲೇನ್ ಮ್ಯಾಕ್ಸ್​ವೆಲ್ ಬದಲು ಕ್ರಿಸ್ ಗೇಲ್​ರನ್ನ ಕಣಕ್ಕಿಳಿಸೋದಕ್ಕೆ ಮುಂದಾಗಿದೆ. ಹೀಗಾಗಿ ನಾಯಕ ರಾಹುಲ್ ಜತೆಗೆ ಕ್ರಿಸ್ ಗೇಲ್ ಆರಂಭಿಕನಾಗಿ ಇನಿಂಗ್ಸ್ ಆರಂಭಿಸೋ ಸಾಧ್ಯತೆಯಿದೆ.

ಟೂರ್ನಿಯಲ್ಲಿ ಪಂಜಾಬ್ ಕನ್ನಡಿಗರು ಆರ್​ಸಿಬಿ ತಂಡವನ್ನ ಮಣಿಸಿದ್ದಾರೆ ನಿಜ. ಆದ್ರೆ ಆರ್​ಸಿಬಿ ಸ್ಟ್ರೆಂತ್ ಈಗ ಚೇಂಜ್ ಆಗಿದೆ. ಪ್ಲೇ ಆಫ್ ರೇಸ್​ನಲ್ಲಿ ಪಂಜಾಬ್​ಗಿಂತ ಮುಂಚೂಣಿಯಲ್ಲಿರೋ ಕೊಹ್ಲಿ ಗ್ಯಾಂಗ್, ಸೇಡಿನ ಸಮರದಲ್ಲಿ ಪಂಜಾಬ್ ತಂಡವನ್ನ ಶಾರ್ಜಾದಲ್ಲಿ ಪಂಚರ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

Published On - 12:09 pm, Thu, 15 October 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!