AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮೊದಲ ಪಂದ್ಯಕ್ಕೂ ಮುನ್ನ ಧೋನಿ ತಂಡಕ್ಕೆ ಆಘಾತ! ತಂಡದ ಸ್ಟಾರ್ ಆಲ್​ರೌಂಡರ್​ ಮೊದಲ ಪಂದ್ಯಕ್ಕೆ ಅಲಭ್ಯ

IPL 2021: ತಂಡದ ಯುವ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕರನ್ ಯುಎಇಯನ್ನು ತಡವಾಗಿ ತಲುಪಿದ್ದರಿಂದ ಪ್ರಸ್ತುತ ಕ್ವಾರಂಟೈನ್​ನಲ್ಲಿದ್ದಾರೆ.

IPL 2021: ಮೊದಲ ಪಂದ್ಯಕ್ಕೂ ಮುನ್ನ ಧೋನಿ ತಂಡಕ್ಕೆ ಆಘಾತ! ತಂಡದ ಸ್ಟಾರ್ ಆಲ್​ರೌಂಡರ್​ ಮೊದಲ ಪಂದ್ಯಕ್ಕೆ ಅಲಭ್ಯ
ಚೆನ್ನೈ ಆಟಗಾರರು
ಪೃಥ್ವಿಶಂಕರ
|

Updated on: Sep 15, 2021 | 5:57 PM

Share

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ 2021 ರ ದ್ವಿತೀಯಾರ್ಧಕ್ಕಾಗಿ ಯುಎಇಯಲ್ಲಿದೆ. ಈ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಎದುರಿಸಬೇಕಿದೆ. ಐಪಿಎಲ್‌ನ ಈ ಎರಡು ಅತ್ಯಂತ ಯಶಸ್ವಿ ತಂಡಗಳು 19 ಸೆಪ್ಟೆಂಬರ್‌ನಲ್ಲಿ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ಆಘಾತ ಎದುರಾಗಿದೆ. ತಂಡದ ಯುವ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕರನ್ ಯುಎಇಯನ್ನು ತಡವಾಗಿ ತಲುಪಿದ್ದರಿಂದ ಪ್ರಸ್ತುತ ಕ್ವಾರಂಟೈನ್​ನಲ್ಲಿದ್ದಾರೆ. ಸ್ಯಾಮ್ ಸ್ಯಾಮ್ ಕರನ್ ಅವರ ಕ್ವಾರಂಟೈನ್ 20-21 ಕ್ಕಿಂತ ಮುಂಚೆ ಕೊನೆಗೊಳಿಸುವುದಿಲ್ಲ. ಈ ಕಾರಣದಿಂದಾಗಿ, ಅವರು ಸೆಪ್ಟೆಂಬರ್ 19 ರಂದು ನಡೆಯಲಿರುವ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಸ್ಯಾಮ್ ಕರನ್ ಇತ್ತೀಚೆಗೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿದ್ದರು ಆದರೆ ಈ ಸರಣಿಯನ್ನು ಬಯೋ ಬಬಲ್‌ನಲ್ಲಿ ಆಡಲಾಗಲಿಲ್ಲ. ಈ ಕಾರಣದಿಂದಾಗಿ, ಐಪಿಎಲ್ 2021 ರಲ್ಲಿ ಆಡುವ ಸರಣಿಯ ಭಾಗವಾಗಿರುವ ಎಲ್ಲಾ ಆಟಗಾರರು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕು.

ಐಪಿಎಲ್ 2020 ರಿಂದ ಸ್ಯಾಮ್ ಕರನ್ ಚೆನ್ನೈನಲ್ಲಿದ್ದಾರೆ. ಅಂದಿನಿಂದ ಅವರು ಈ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕಳೆದ ಋತುವಿನಲ್ಲಿ, ಧೋನಿಯ ನಾಯಕತ್ವದಲ್ಲಿ ತಂಡದ ಸ್ಥಿತಿ ಕೆಟ್ಟದಾಗಿದ್ದರೂ, ಸ್ಯಾಮ್ ಕರನ್ ತನ್ನ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತಗಳನ್ನು ಮಾಡಿದರು. ಐಪಿಎಲ್ 2020 ರಲ್ಲಿ, ಅವರು 14 ಪಂದ್ಯಗಳನ್ನು ಆಡಿದ್ದಾರೆ ಮತ್ತು 186 ರನ್ ಗಳಿಸುವುದರೊಂದಿಗೆ 13 ವಿಕೆಟ್ ಪಡೆದರು. ಇದರ ನಂತರ, ಐಪಿಎಲ್ 2021 ರ ಮೊದಲಾರ್ಧದಲ್ಲಿಯೂ ಸಹ, ಈ ಆಟಗಾರ ಉತ್ತಮ ಪ್ರದರ್ಶನ ತೋರಿದ್ದಾರೆ. ಒಟ್ಟು ಏಳು ಪಂದ್ಯಗಳಲ್ಲಿ 52 ರನ್ ಗಳಿಸಿದರು ಆದರೆ ಬ್ಯಾಟಿಂಗ್‌ಗೆ ಹೆಚ್ಚು ಸಮಯ ಸಿಗಲಿಲ್ಲ.

ಸ್ಯಾಮ್ ಕರನ್ 2019 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಸ್ಯಾಮ್ ಕರನ್ 2019 ಸೀಸನ್​ನಿಂದ ಐಪಿಎಲ್ ಪ್ರವೇಶಿಸಿದರು. ಪಂಜಾಬ್ ಕಿಂಗ್ಸ್ 7.2 ಕೋಟಿ ರೂಪಾಯಿಗಳ ಭಾರೀ ಬಿಡ್‌ನಲ್ಲಿ ಅವರನ್ನು ಖರೀದಿಸಿತು. ನಂತರ ಅವರ ಮೊದಲ ಸೀಸನ್​ನಲ್ಲಿ ಸ್ಯಾಮ್ ಕರನ್ ಹ್ಯಾಟ್ರಿಕ್ ಜೊತೆಗೆ ಒಟ್ಟು 10 ವಿಕೆಟ್ ಪಡೆದರು. ಆದರೆ ಪಂಜಾಬ್ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2020 ಹರಾಜಿನಲ್ಲಿ, ಚೆನ್ನೈ ಈ ಯುವಕನ ಮೇಲೆ 5.5 ಕೋಟಿ ರೂ. ಹಣ ಸುರಿದು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ