AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಜೋ ರೂಟ್ ಪ್ರಸ್ತುತವಾಗಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ ಅಲ್ಲ: ಗಾವಸ್ಕರ್

ರೂಟ್ ನಿರರ್ಗಳವಾದ ಬ್ಯಾಟಿಂಗ್ ಮೂಲಕ ರನ್ ಗಳಿಸಿ ಟೀಮನ್ನು ಆದ್ಭುತವಾಗಿ ಲೀಡ್ ಮಾಡುತ್ತಾ ಸತತವಾಗಿ ಜಯಗಳನ್ನು ದೊರಕಿಸಿಕೊಡುತ್ತಿದ್ದರೂ  ವಿರಾಟ್ ಕೊಹ್ಲಿ,  ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್​ ಅವರಷ್ಟು ಶ್ರೇಷ್ಠರಲ್ಲ ಅಂತ ಗಾವಸ್ಕರ್ ಹೇಳಿದ್ದಾರೆ.

India vs England Test Series: ಜೋ ರೂಟ್ ಪ್ರಸ್ತುತವಾಗಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ ಅಲ್ಲ: ಗಾವಸ್ಕರ್
ಜೋ ರೂಟ್​
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 11, 2021 | 5:40 PM

Share

ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಟೀಮಿನ ಕ್ಯಾಪ್ಟನ್ ಜೋ ರೂಟ್ ನಿಸ್ಸಂದೇಹವಾಗಿ ತಮ್ಮ ಕ್ರಿಕೆಟ್ ಕರೀಯರ್​ನ ಉತ್ಕೃಷ್ಟ ಫಾರಂನಲ್ಲಿದ್ದಾರೆ. ಉಪಖಂಡದ ಪಿಚ್​​ಗಳಲ್ಲಿ ಸತತವಾಗಿ ಮೂರು ಶತಕಗಳನ್ನು ಬಾರಿಸುವುದು ಸುಲಭದ ಮಾತಲ್ಲ. ಆದರೆ ರೂಟ್, ಶ್ರೀಲಂಕಾದಲ್ಲಿ 228 ಮತ್ತು 186ರನ್​ಗಳ ಇನ್ನಿಂಗ್ಸ್​ಗಳನ್ನಾಡಿ ಭಾರತದ ವಿರುದ್ಧ ಚೆನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅಮೋಘ ದ್ವಿಶತಕ (218) ಬಾರಿಸಿದರು. ಅವರು ನಿಷ್ಕಂಳಕವಾಗಿ ಟನ್​ಗಟ್ಟಲೆ ರನ್ ಗಳಿಸುತ್ತಿರುವುದನ್ನು ನೋಡಿ ಕೆಲ ಕ್ರಿಕೆಟ್ ಪರಿಣಿತರು ಮತ್ತು ಕಾಮೆಂಟೇಟರ್​ಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಕಾಮೆಂಟೇಟರ್​ಗಳು ಅವರನ್ನು ಸಮಕಾಲೀನ ಕ್ರಿಕೆಟ್​ನ ಅತಿಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಬಣ್ಣಿಸುತ್ತಿದ್ದಾರೆ. ಆದರೆ ಭಾರತದ ಲೆಜಂಡರಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ಈ ವಾದವನ್ನು ಒಪ್ಪುತ್ತಿಲ್ಲ.

ರೂಟ್ ನಿರರ್ಗಳವಾದ ಬ್ಯಾಟಿಂಗ್ ಮೂಲಕ ರನ್ ಗಳಿಸಿ ಟೀಮನ್ನು ಆದ್ಭುತವಾಗಿ ಲೀಡ್ ಮಾಡುತ್ತಾ ಸತತವಾಗಿ ಜಯಗಳನ್ನು ದೊರಕಿಸಿಕೊಡುತ್ತಿದ್ದರೂ ಬಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​ ಅವರಷ್ಟು ಶ್ರೇಷ್ಠರಲ್ಲ ಎಂದು ಮೊದಲ ಟೆಸ್ಟ್​ನಲ್ಲಿ ಕಾಮೆಂಟರಿ ನೀಡುವಾಗ ಗಾವಸ್ಕರ್ ಹೇಳಿದರು.

‘ರೂಟ್ ಅತ್ಯುತ್ತಮ ಬ್ಯಾಟ್ಸ್​ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರೀಗ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ಅಂತ ನಾನು ಖಂಡಿತವಾಗಿಯೂ ಭಾವಿಸುವುದಿಲ್ಲ. ಆ ಪಟ್ಟಕ್ಕೆ ನಾಲ್ವರು ದಾವೆದಾರರಿದ್ದಾರೆ, ಅವರಲ್ಲಿ ರೂಟ್ ಕೂಡ ಒಬ್ಬರು. ಆದರೆ, ಉಳಿದ ಮೂವರಿಗಿಂತ ಅವರು ಒಂದಷ್ಟು ಕಡಿಮೆ ಎಂದೇ ನಾನು ಭಾವಿಸುತ್ತೇನೆ,’ ಎಂದು ಸನ್ನಿ ಹೇಳಿದರು.

Joe Root

ಸುನಿಲ್ ಗಾವಸ್ಕರ್

ಚೆನೈನಲ್ಲಿ ರೂಟ್ ಪ್ರದರ್ಶಿದ ಬ್ಯಾಟಿಂಗ್​ ಕಲೆಯನ್ನು ಅಪಾರವಾಗಿ ಪ್ರಶಂಸಿದ ಗಾವಸ್ಕರ್, ಅವರ ಡಬಲ್ ಶತಕ ಇಂಗ್ಲೆಂಡ್​ನ ಗೆಲುವಿಗೆ ಅಡಿಪಾಯವಾಯಿತು ಎಂದರು. ಚೆಂಡಿನ ತಿರುವನ್ನು ಹೊಸಕಿ ಹಾಕುವಲ್ಲಿ ಅವರು ಪ್ರದರ್ಶಿದ ಪುಟ್​ವರ್ಕ್​ ನಂಬಲಸದಳವಾಗಿತ್ತು ಎಂದು ಸನ್ನಿ ಹೇಳಿದರು.

ಇದನ್ನೂ ಓದಿ: India vs England Test Series: ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ: ಮಾಂಟಿ ಪನೆಸಾರ್

‘ರೂಟ್ ಚೆನೈನಲ್ಲಿ ಬಾರಿಸಿದ ಡಬಲ್ ಸೆಂಚುರಿಯ ಬಗ್ಗೆ ಮಾತಾಡುವುದಾದರೆ ಅವರಲ್ಲಿದ್ದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಧೋರಣೆ ಬಹಳ ಪ್ರಭಾವಕಾರಿಯಾಗಿತ್ತು. ತಾನೆದುರಿಸಿದ ಪ್ರಥಮ ಎಸೆತದಿಂದಲೇ ಅವರು ಆತ್ಮವಿಶ್ವಾಸದ ಮೂಟೆಯಾಗಿದ್ದರು. ಸ್ಪಿನ್ನರ್​ಗಳನ್ನು ಎದುರಿಸಿ ಅಡುವಾಗ ಅವರ ಫುಟ್​ವರ್ಕ್ ಅಪ್ರತಿಮವಾಗಿತ್ತು. ಫ್ರಂಟ್​ಫುಟ್​ನಲ್ಲಾಡುವಾಗ ಅವರು ಚೆಂಡಿನ ತಿರುವನ್ನು ಹೊಸಕಿ ಹಾಕಿದರು ಮತ್ತು ಹಿಂದೆ ಸರಿದು ಆಡುವಾಗ ಎಸೆತವನ್ನು ಕಟ್ ಮಾಡಲು ಇಲ್ಲವೇ ಪುಲ್ ಮಾಡಲು ಅವರಲ್ಲಿ ಸಾಕಷ್ಟು ಸಮಯವಿತ್ತು. ಇದು ಖಂಡಿತವಾಗಿಯೂ ವಿಶ್ವದರ್ಜೆಯ ಬ್ಯಾಟ್ಸ್​ಮನೊಬ್ಬನ ಲಕ್ಷಣ,’ ಎಂದು ಗಾವಸ್ಕರ್ ಹೇಳಿದರು.

Joe Root

ವಿಕೆಟ್​ ಪತನವನ್ನು ಸಂಭ್ರಮಿಸುತ್ತಿರುವ ಇಂಗ್ಲಿಷ್ ಆಟಗಾರರು

ಉಪಖಂಡದ ಪಿಚ್​ಗಳಲ್ಲಿ ಆಡುವಾಗ ಸ್ವೀಪ್ ಶಾಟ್ ಮುನ್ನೆಲೆಗೆ ಬರುತ್ತದೆ. ಈ ಹೊಡೆತದಿಂದಲೇ ಬ್ಯಾಟ್ಸ್​ಮನ್​ಗಳು ಬಹಳಷ್ಟು ರನ್ ಶೇಖರಿಸುತ್ತಾರೆ. ರೂಟ್ ಈ ಹೊಡೆತವನ್ನು ಪರಿಪೂರ್ಣತೆಯಿಂದಆಡಿದರು ಅಂತ ಗಾವಸ್ಕರ್ ಹೇಳಿದರು.

‘ಬಾರತೀಯ ಸ್ಪಿನ್ನರ್​ಗಲ ವಿರುದ್ಧ ರೂಟ್ ಸ್ವೀಪ್​ ಶಾಟ್​ ಅನ್ನು ಬಹಳ ಲೆಕ್ಕಾಚಾರದಿಂದ ಆಡಿದರು. ಯಾವ ಎಸೆತವನ್ನು ಈ ಹೊಡೆತಕ್ಕೆ ಆರಿಸಿಕೊಳ್ಳಬೇಕು ಎನ್ನುವ ಬಗ್ಗೆ ಅವರ ಮನಸ್ಸಿನಲ್ಲಿ ಸ್ಪಷ್ಟತೆಯಿತ್ತೇ ವಿನಃ ಗೊಂದಲವಿರಲಿಲ್ಲ. ಅವರ ಲೆಕ್ಕಾಚಾರ ಅತ್ಯಂತ ಸಮಂಜಸವಾಗಿತ್ತು. ಹಾಗಾಗೇ ಅವರು ಉಪಖಂಡದಲ್ಲಿ ಆಡಿದ ಮೂರು ಟೆಸ್ಟ್​ಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ,’ ಎಂದು ಗಾವಸ್ಕರ್ ಹೇಳಿದರು.

Published On - 5:05 pm, Thu, 11 February 21

ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು