KPL ಕಳ್ಳಾಟದ ಫೋನ್ ಕೇಳಿದ್ರೆ ಹೊಸ ಮೊಬೈಲ್ ಕೊಟ್ಟ, CCB ಎದುರೇ ಕಣ್ಣಾಮುಚ್ಚಾಲೆಗಿಳಿದ ಜತಿನ್

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧಿಸಿ ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಸಾಕ್ಷ್ಯನಾಶ ಆರೋಪದಡಿ FIR ದಾಖಲಿಸಲು ಸಿಸಿಬಿ ಚಿಂತನೆ ನಡೆಸಿದೆ. ಸಿಸಿಬಿ ಪೊಲೀಸರು ಬುಕ್ಕಿ ಜತಿನ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ವೇಳೆ ಸಿಸಿಬಿ ಜತಿನ್ ಬಳಸುತ್ತಿದ್ದ ಫೋನ್ ಕೇಳಿದ್ದಾರೆ. ತಾನು ಬಳಸುತ್ತಿರುವ ಫೋನ್ ನೀಡಿದ್ದಾನೆ. ಅದನ್ನ ಪರಿಶೀಲಿಸಿದಾಗ ಮತ್ತೊಂದು ಫೋನ್ ಇರೋದು ಪತ್ತೆಯಾಗಿದೆ. ಅಧಿಕಾರಿಗಳಿಗೆ ಹೊಸ ಫೋನ್ ಮತ್ತು ಸಿಮ್ ನೀಡಿ ಜತಿನ್ ಸಿಸಿಬಿ […]

KPL ಕಳ್ಳಾಟದ ಫೋನ್ ಕೇಳಿದ್ರೆ ಹೊಸ ಮೊಬೈಲ್ ಕೊಟ್ಟ, CCB ಎದುರೇ ಕಣ್ಣಾಮುಚ್ಚಾಲೆಗಿಳಿದ ಜತಿನ್
ಸಾಧು ಶ್ರೀನಾಥ್​

Updated on: Jan 07, 2020 | 9:22 AM

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧಿಸಿ ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಸಾಕ್ಷ್ಯನಾಶ ಆರೋಪದಡಿ FIR ದಾಖಲಿಸಲು ಸಿಸಿಬಿ ಚಿಂತನೆ ನಡೆಸಿದೆ.

ಸಿಸಿಬಿ ಪೊಲೀಸರು ಬುಕ್ಕಿ ಜತಿನ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ವೇಳೆ ಸಿಸಿಬಿ ಜತಿನ್ ಬಳಸುತ್ತಿದ್ದ ಫೋನ್ ಕೇಳಿದ್ದಾರೆ. ತಾನು ಬಳಸುತ್ತಿರುವ ಫೋನ್ ನೀಡಿದ್ದಾನೆ. ಅದನ್ನ ಪರಿಶೀಲಿಸಿದಾಗ ಮತ್ತೊಂದು ಫೋನ್ ಇರೋದು ಪತ್ತೆಯಾಗಿದೆ. ಅಧಿಕಾರಿಗಳಿಗೆ ಹೊಸ ಫೋನ್ ಮತ್ತು ಸಿಮ್ ನೀಡಿ ಜತಿನ್ ಸಿಸಿಬಿ ಪೊಲೀಸರಿಗೆ ಗೋಬೆ ಕೂರಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಇದು ಹೊಸ ಫೋನ್ ಬೆರೆ ಫೋನ್ ಎಲ್ಲಿ ಎಂದು ವಿಚಾರಿಸಿದಾಗ ಬುಕ್ಕಿ ಜತಿನ್ ತಬ್ಬಿಬ್ಬಾಗಿದ್ದಾನೆ. ಹೀಗಾಗಿ ಜತಿನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಚಿಂತನೆ ನಡೆಸಲಾಗುತ್ತಿದೆ. ಈತ ಕೆಪಿಎಲ್ ಕ್ರಿಕೆಟ್‌ ಸೇರಿದಂತೆ ಹಲವು ಪಂದ್ಯಗಳಲ್ಲಿ ಫಿಕ್ಸಿಂಗ್ ಮಾಡುತ್ತಿದ್ದ ಎಂಬ ಶಂಕೆ ಹಿನ್ನೆಲೆ ವಿಚಾರಣೆ ನಡೆಸಲಾಗುತ್ತಿದೆ.

Published On - 9:19 am, Tue, 7 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us