AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?

ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ.

ಧೋನಿ ಮನೆಗೆ ಬಂದ ಹೊಸ ಅತಿಥಿ; ಈ ಕಪ್ಪು ಸುಂದರನಿಗೆ ಸಾಕ್ಷಿ ಧೋನಿ ಇಟ್ಟ ಹೆಸರೇನು ಗೊತ್ತಾ?
ಧೋನಿ ಮನೆಗೆ ಬಂದ ಹೊಸ ಅತಿಥಿ
ಪೃಥ್ವಿಶಂಕರ
|

Updated on: May 09, 2021 | 5:52 PM

Share

ಕೊರೊನಾ ಅಟ್ಟಹಾಸಕ್ಕೆ ಐಪಿಎಲ್ ಮುಂದೂಡಿಕೆಯಾಗಿರೋದ್ರಿಂದ, ಆಟಗಾರರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಆದ್ರೀಗ ಧೋನಿ ಫಾರ್ಮ್ಹೌಸ್ಗೆ ಹೊಸ ಅತಿಥಿಯೊಂದು ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಮಾಜಿ ನಾಯಕ, ಸಿಎಸ್ಕೆ ತಂಡದ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಾಣಿ ಪ್ರಿಯ ಅನ್ನೋದು ನಿಮಗೆ ಗೊತ್ತಿರೋ ಸಂಗತಿ. ಅದ್ರಲ್ಲೂ ಶ್ವಾನಗಳೆಂದ್ರೆ ಧೋನಿಗೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಧೋನಿ ಫಾರ್ಮ್ ಹೌಸ್ನಲ್ಲಿ ಸ್ಯಾಮ್, ಲಿಲ್ಲಿ, ಗಬ್ಬರ್ ಹಾಗೂ ಜೋಯಾ ಎನ್ನುವ ನಾಯಿಗಳನ್ನ ಸಾಕಿದ್ದಾರೆ.

ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ ತಮ್ಮ ಮುದ್ದಿನ ನಾಯಿಗಳಿಗೆ ಸ್ವತಃ ಧೋನಿಯೇ ಪೊಲೀಸ್ ಡಾಗ್​ಗಳಿಗೆ ನೀಡುವ ಟ್ರೈನಿಂಗ್ ನೀಡ್ತಾರೆ. ಆದ್ರೀಗ ಐಪಿಎಲ್ ಮುಗಿಸಿ ರಾಂಚಿಗೆ ಬಂದಿರುವ ಧೋನಿ ಮನೆಗೆ, ಹೊಸ ಅತಿಥಿಯೊಂದು ಆಗಮಿಸಿದೆ. ಹಾಗಂತ ಧೋನಿ ಹೊಸ ತಳಿಯ ನಾಯಿಯೊಂದನ್ನ ಖರೀದಿಸಿದ್ದಾರೆ ಅಂದ್ಕೋಬೇಡಿ.. ಮಹೇಂದ್ರನ ಫಾರ್ಮ್ ಹೌಸ್ಗೆ ಬಂದಿರುವ ಹೊಸ ಅತಿಥಿ ಎಂದರೆ ಅದುವೆ ಕಪ್ಪು ಕುದುರೆ. ಈಗಾಗಲೇ ಧೋನಿಯ ಮುದ್ದಿನ ಮಡದಿ ಸಾಕ್ಷಿ ಈ ಕಪ್ಪು ಸುಂದರನಿಗೆ ಚೇತಕ್ ಎಂದು ಹೆಸರನ್ನಿಟ್ಟಿದ್ದಾರೆ. ಈ ಕುದುರೆಯನ್ನ ನೋಡಿ ಧೋನಿ ಮುದ್ದಿನ ನಾಯಿಗಳು, ಮೊದಲ ದಿನ ಆಶ್ಚರ್ಯದ ಕಣ್ಣಿನಿಂದ ನೋಡಿವೆ. ಆದ್ರೆ ಲಿಲ್ಲಿ ಎನ್ನುವ ಬಿಳಿ ನಾಯಿಯೊಂದು ಈ ಕಪ್ಪು ಸುಂದರನ ಸ್ನೇಹವನ್ನ ಸಂಪಾದಿಸಿದೆ.

ಚೇತಕ್​ಗೆ ಸ್ವಾಗತ ನಮ್ಮ ಮನೆಗೆ ಬಂದಿರುವ ಚೇತಕ್​ಗೆ ಸ್ವಾಗತ. ನೀನು ಲಿಲ್ಲಿಯನ್ನ ಭೇಟಿಯಾದ ನಿಜವಾದ ಜಂಟಲ್ಮೆನ್ ಎಸ್ಪಿ. ನಮ್ಮ ಕುಟುಂಬದಲ್ಲಿ ನಿಮ್ಮನ್ನ ಸಂತೋಷದಿಂದ ಸ್ವೀಕರಿಸಲಾಗಿದೆ. ಸಾಕ್ಷಿ ಧೋನಿ, ಧೋನಿ ಪತ್ನಿ

ಇಷ್ಟು ದಿನ ಶ್ವಾನ ಪ್ರಿಯನಾಗಿ ಗುರುತಿಸಿಕೊಂಡಿದ್ದ ಧೋನಿ, ಈಗ ಅಶ್ವ ಪ್ರಿಯನೂ ಆಗಿದ್ದಾರೆ. ಹೀಗಾಗಿ ಧೋನಿ ಅಭಿಮಾನಿಗಳು, ಧೊನಿ ಕುದುರೆ ಸವಾರಿ ಮಾಡೋದನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ