AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ

ಮೊದಲೆರಡು ಟೆಸ್ಟ್​ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದಲ್ಲಿ ನದೀಮ್ ಇರಲಿಲ್ಲ. ಅಕ್ಸರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್​ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್​ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ
ಕುಲ್ದೀಪ್ ಯಾದವ್
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 05, 2021 | 8:31 PM

Share

ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಚೆನೈಯಲ್ಲಿ ಶುರುವಾದ ಸರಣಿಯ ಮೊದಲ ಟೆಸ್ಟ್​ನಲ್ಲಿ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್​ರನ್ನು ಕಡೆಗಣಿಸಿ ಶಾಬಾಜ್ ನದೀಮ್​ರನ್ನು ಅಡಿಸುತ್ತಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ ಎಂದು ಭಾರತದ ಮಾಜಿ ಅರಂಭ ಆಟಗಾರ ಮತ್ತು ಸಕ್ರಿಯ ರಾಜಕಾರಣಿ ಗೌತಮ್ ಗಂಭೀರ ಅಭಿಪ್ರಾಯಪಟ್ಟಿದ್ದಾರೆ.

ಹಾಗೆ ನೋಡಿದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನದೀಮ್ ಮೊದಲೆರಡು ಟೆಸ್ಟ್​ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದ ಭಾಗವಾಗಿರಲಿಲ್ಲ. ರವೀಂದ್ರ ಜಡೇಜಾ ಗಾಯಗೊಂಡಿರುವುದರಿಂದ ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್​ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್​ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸಹ ಆಡುವ ಇಲೆವೆನ್​ನಲ್ಲಿ ಆರಿಸಲಾಗಿದೆ.

ನದೀಮ್ ಸ್ಥಾನದಲ್ಲಿ ಕುಲ್​ದೀಪ್​ರನ್ನು ಆಡಿಸಿದ್ದರೆ, ಅವರು ಸರಣಿಯ ಅರಂಭದಲ್ಲೇ ಇಂಗ್ಲೀಷ್ ಆಟಗಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂದು ಗಂಭೀರ್ ಒಂದು ಕ್ರೀಡಾ ವೆಬ್​ಸೈಟ್​ನೊಂದಿಗೆ ಮಾತಾಡುವಾಗ ಹೇಳಿದ್ದಾರೆ.

ಇದನ್ನೂ ಓದಿ: India vs England 1st Test, Day 1 LIVE Score

ಗೌತಮ್ ಗಂಭೀರ್

‘ಕುಲ್​ದೀಪ್ ನಿಜಕ್ಕೂ ದುರದೃಷ್ಟಶಾಲಿ, ಭಾರತದ ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಈ ಪಂದ್ಯದಲ್ಲಿ ಆಡಿಸಬೇಕಿತ್ತು. ಎಡಗೈ ರಿಸ್ಟ್ ಸ್ಪಿನ್ನರ್ ಅಪರೂಪಕ್ಕೊಮ್ಮೆ ಸಿಗುತ್ತಾರೆ, ಅವರ ಬೌಲಿಂಗ್ ಭಾರತಕ್ಕೆ ಬಹಳಷ್ಟು ನೆರವಾಗುತ್ತಿತ್ತು. ಕುಲ್​ದೀಪ್​ ಯಾವಾಗಲೂ ಟೀಮಿನ ಭಾಗವಾಗಿರುತ್ತಾರೆ ಆದರೆ ಅಡುವ ಇಲೆವೆನ್​ನಲ್ಲಿ ಮಾತ್ರ ಸ್ಥಾನ ಪಡೆಯುವುದಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

ಕುಲ್​ದೀಪ್ ಶೇಕಡಾ ನೂರರಷ್ಟು ಫಿಟ್ ಆಗಿದ್ದರೂ, ಕೇವಲ ಅವರು ಮಾತ್ರ ಆಸ್ಟ್ರೇಲಿಯಾದಲ್ಲಿ ಒಂದೂ ಟೆಸ್ಟ್ ಆಡದೆ ಸ್ವದೇಶಕ್ಕೆ ಮರಳಿದರು. ಅವರು ಕೊನೆಯ ಬಾರಿ ಟೆಸ್ಟ್​ವೊಂದರಲ್ಲಿ ಭಾರತದ ಪರ ಕಾಣಿಸಿಕೊಂಡಿದ್ದು 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ. ಓದುಗರಿಗೆ ನೆನಪಿರಬಹುದು, ಆ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದರು.

‘ಕುಲ್​ದೀಪ್​ರನ್ನು ಸರಣಿಯ ಆರಂಭದಲ್ಲೇ ಉಪಯೋಗಿಸಬೇಕಿತ್ತು, ಎರಡನೇ ಇಲ್ಲವೇ ಮೂರನೇ ಟೆಸ್ಟ್​ನಲ್ಲಿ ಅವರನ್ನು ಉಪಯೋಗಿಸಿದರಾಯಿತು ಅಂತ ಅಂದುಕೊಳ್ಳುವುದು ನಿರರ್ಥಕ. ಅವರು ರಿಸ್ಟ್ ಸ್ಪಿನ್ನರ್ ಆಗಿರುವುದರಿಂದ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಡಿಸದಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ’ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಪರಸ್ಪರ ಗೌರವ, ವಿಶ್ವಾಸವೇ ನಮ್ಮ ಸ್ನೇಹಕ್ಕೆ ಆಧಾರ: ರಹಾನೆ ಬಗ್ಗೆ ವಿರಾಟ್ ಕೊಹ್ಲಿ

ಶಾಬಾಜ್ ನದೀಮ್

‘ಇಬ್ಬರು ಆಫ್-ಸ್ಪಿನ್ನರ್​ಗಳನ್ನು ಆವರು ಆಡಿಸುತ್ತಿದ್ದಾರೆ. ನಾನಂದುಕೊಳ್ಳುವ ಹಾಗೆ, 7 ಮತ್ತು 8 ನೇ ಕ್ರಮಾಂಕದಲ್ಲಿ ಆಡುವವವರು ಆಲ್​ರೌಂಡರ್​ಗಳಾಗಿರಲಿ ಎನ್ನುವುದು ಅವರ ಉದ್ದೇಶವಾಗಿರಬಹುದು. ಆದರೆ, ಅವರ ನಡೆ ನನ್ನಲ್ಲಿ ಸೋಜಿಗ ಮೂಡಿಸಿದೆ. ನಾನು ನಾಯಕನಾಗಿದ್ದರೆ ಕುಲ್​ದೀಪ್​ರನ್ನು ಪ್ರತಿ ಟೆಸ್ಟ್​ನಲ್ಲಿಯೂ ಆಡಿಸುತ್ತಿದ್ದೆ. ಎದುರಾಳಿ ತಂಡದಲ್ಲಿ ಎಡಚರಿದ್ದಾರೆಯೇ, ಬಲಗೈ ಬ್ಯಾಟ್ಸ್​ಮನ್​ಗಳಿದ್ದಾರೆಯೇ ಎಂದು ನಾನು ಯೋಚಿಸುತ್ತಿರಲಿಲ್ಲ. ಯಾಕೆಂದರೆ, ಬ್ಯಾಟ್ಸ್​ಮನ್ ಆಡುವ ಶೈಲಿ ಯಾವುದೇ ಆಗಿದ್ದರೂ ಅವರನ್ನು ಔಟ್ ಮಾಡುವ ಸಾಮರ್ಥ್ಯ ಕುಲ್​ದೀಪ್​ ಅವರಲ್ಲಿರುವುದರಿಂದ ಮರುಯೋಚನೆಗೆ ಆಸ್ಪದ ನೀಡದೆ ಅವರನ್ನು ಆಡಿಸುತ್ತಿದ್ದೆ’ ಎಂದು ಗಂಭೀರ್ ಹೇಳಿದ್ದಾರೆ.

India vs England Test Series: ಅಕ್ಸರ್ ಪಟೇಲ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಹೆಚ್ಚು ಕಡಿಮೆ ಖಚಿತವಾಗಿದೆ

Published On - 5:03 pm, Fri, 5 February 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್