AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ

ಮೊದಲೆರಡು ಟೆಸ್ಟ್​ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದಲ್ಲಿ ನದೀಮ್ ಇರಲಿಲ್ಲ. ಅಕ್ಸರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್​ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್​ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ
ಕುಲ್ದೀಪ್ ಯಾದವ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Feb 05, 2021 | 8:31 PM

Share

ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಚೆನೈಯಲ್ಲಿ ಶುರುವಾದ ಸರಣಿಯ ಮೊದಲ ಟೆಸ್ಟ್​ನಲ್ಲಿ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್​ರನ್ನು ಕಡೆಗಣಿಸಿ ಶಾಬಾಜ್ ನದೀಮ್​ರನ್ನು ಅಡಿಸುತ್ತಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ ಎಂದು ಭಾರತದ ಮಾಜಿ ಅರಂಭ ಆಟಗಾರ ಮತ್ತು ಸಕ್ರಿಯ ರಾಜಕಾರಣಿ ಗೌತಮ್ ಗಂಭೀರ ಅಭಿಪ್ರಾಯಪಟ್ಟಿದ್ದಾರೆ.

ಹಾಗೆ ನೋಡಿದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನದೀಮ್ ಮೊದಲೆರಡು ಟೆಸ್ಟ್​ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದ ಭಾಗವಾಗಿರಲಿಲ್ಲ. ರವೀಂದ್ರ ಜಡೇಜಾ ಗಾಯಗೊಂಡಿರುವುದರಿಂದ ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್​ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್​ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸಹ ಆಡುವ ಇಲೆವೆನ್​ನಲ್ಲಿ ಆರಿಸಲಾಗಿದೆ.

ನದೀಮ್ ಸ್ಥಾನದಲ್ಲಿ ಕುಲ್​ದೀಪ್​ರನ್ನು ಆಡಿಸಿದ್ದರೆ, ಅವರು ಸರಣಿಯ ಅರಂಭದಲ್ಲೇ ಇಂಗ್ಲೀಷ್ ಆಟಗಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂದು ಗಂಭೀರ್ ಒಂದು ಕ್ರೀಡಾ ವೆಬ್​ಸೈಟ್​ನೊಂದಿಗೆ ಮಾತಾಡುವಾಗ ಹೇಳಿದ್ದಾರೆ.

ಇದನ್ನೂ ಓದಿ: India vs England 1st Test, Day 1 LIVE Score

ಗೌತಮ್ ಗಂಭೀರ್

‘ಕುಲ್​ದೀಪ್ ನಿಜಕ್ಕೂ ದುರದೃಷ್ಟಶಾಲಿ, ಭಾರತದ ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಈ ಪಂದ್ಯದಲ್ಲಿ ಆಡಿಸಬೇಕಿತ್ತು. ಎಡಗೈ ರಿಸ್ಟ್ ಸ್ಪಿನ್ನರ್ ಅಪರೂಪಕ್ಕೊಮ್ಮೆ ಸಿಗುತ್ತಾರೆ, ಅವರ ಬೌಲಿಂಗ್ ಭಾರತಕ್ಕೆ ಬಹಳಷ್ಟು ನೆರವಾಗುತ್ತಿತ್ತು. ಕುಲ್​ದೀಪ್​ ಯಾವಾಗಲೂ ಟೀಮಿನ ಭಾಗವಾಗಿರುತ್ತಾರೆ ಆದರೆ ಅಡುವ ಇಲೆವೆನ್​ನಲ್ಲಿ ಮಾತ್ರ ಸ್ಥಾನ ಪಡೆಯುವುದಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

ಕುಲ್​ದೀಪ್ ಶೇಕಡಾ ನೂರರಷ್ಟು ಫಿಟ್ ಆಗಿದ್ದರೂ, ಕೇವಲ ಅವರು ಮಾತ್ರ ಆಸ್ಟ್ರೇಲಿಯಾದಲ್ಲಿ ಒಂದೂ ಟೆಸ್ಟ್ ಆಡದೆ ಸ್ವದೇಶಕ್ಕೆ ಮರಳಿದರು. ಅವರು ಕೊನೆಯ ಬಾರಿ ಟೆಸ್ಟ್​ವೊಂದರಲ್ಲಿ ಭಾರತದ ಪರ ಕಾಣಿಸಿಕೊಂಡಿದ್ದು 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ. ಓದುಗರಿಗೆ ನೆನಪಿರಬಹುದು, ಆ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದರು.

‘ಕುಲ್​ದೀಪ್​ರನ್ನು ಸರಣಿಯ ಆರಂಭದಲ್ಲೇ ಉಪಯೋಗಿಸಬೇಕಿತ್ತು, ಎರಡನೇ ಇಲ್ಲವೇ ಮೂರನೇ ಟೆಸ್ಟ್​ನಲ್ಲಿ ಅವರನ್ನು ಉಪಯೋಗಿಸಿದರಾಯಿತು ಅಂತ ಅಂದುಕೊಳ್ಳುವುದು ನಿರರ್ಥಕ. ಅವರು ರಿಸ್ಟ್ ಸ್ಪಿನ್ನರ್ ಆಗಿರುವುದರಿಂದ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಡಿಸದಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ’ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಪರಸ್ಪರ ಗೌರವ, ವಿಶ್ವಾಸವೇ ನಮ್ಮ ಸ್ನೇಹಕ್ಕೆ ಆಧಾರ: ರಹಾನೆ ಬಗ್ಗೆ ವಿರಾಟ್ ಕೊಹ್ಲಿ

ಶಾಬಾಜ್ ನದೀಮ್

‘ಇಬ್ಬರು ಆಫ್-ಸ್ಪಿನ್ನರ್​ಗಳನ್ನು ಆವರು ಆಡಿಸುತ್ತಿದ್ದಾರೆ. ನಾನಂದುಕೊಳ್ಳುವ ಹಾಗೆ, 7 ಮತ್ತು 8 ನೇ ಕ್ರಮಾಂಕದಲ್ಲಿ ಆಡುವವವರು ಆಲ್​ರೌಂಡರ್​ಗಳಾಗಿರಲಿ ಎನ್ನುವುದು ಅವರ ಉದ್ದೇಶವಾಗಿರಬಹುದು. ಆದರೆ, ಅವರ ನಡೆ ನನ್ನಲ್ಲಿ ಸೋಜಿಗ ಮೂಡಿಸಿದೆ. ನಾನು ನಾಯಕನಾಗಿದ್ದರೆ ಕುಲ್​ದೀಪ್​ರನ್ನು ಪ್ರತಿ ಟೆಸ್ಟ್​ನಲ್ಲಿಯೂ ಆಡಿಸುತ್ತಿದ್ದೆ. ಎದುರಾಳಿ ತಂಡದಲ್ಲಿ ಎಡಚರಿದ್ದಾರೆಯೇ, ಬಲಗೈ ಬ್ಯಾಟ್ಸ್​ಮನ್​ಗಳಿದ್ದಾರೆಯೇ ಎಂದು ನಾನು ಯೋಚಿಸುತ್ತಿರಲಿಲ್ಲ. ಯಾಕೆಂದರೆ, ಬ್ಯಾಟ್ಸ್​ಮನ್ ಆಡುವ ಶೈಲಿ ಯಾವುದೇ ಆಗಿದ್ದರೂ ಅವರನ್ನು ಔಟ್ ಮಾಡುವ ಸಾಮರ್ಥ್ಯ ಕುಲ್​ದೀಪ್​ ಅವರಲ್ಲಿರುವುದರಿಂದ ಮರುಯೋಚನೆಗೆ ಆಸ್ಪದ ನೀಡದೆ ಅವರನ್ನು ಆಡಿಸುತ್ತಿದ್ದೆ’ ಎಂದು ಗಂಭೀರ್ ಹೇಳಿದ್ದಾರೆ.

India vs England Test Series: ಅಕ್ಸರ್ ಪಟೇಲ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಹೆಚ್ಚು ಕಡಿಮೆ ಖಚಿತವಾಗಿದೆ

Published On - 5:03 pm, Fri, 5 February 21

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?