Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?

Pro Kabaddi League 2021-22: ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಜೈಪುರ್‌ 31-26 ಅಂತರದಿಂದ ಪುಣೇರಿಯನ್ನು ಕೆಡವಿತು

PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?
Pro Kabaddi League
Follow us
TV9 Web
| Updated By: Vinay Bhat

Updated on: Jan 08, 2022 | 7:32 AM

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಶುಕ್ರವಾರ ಅಂಕಪಟ್ಟಿಯಲ್ಲಿ ತಳದಲ್ಲಿರುವ ನಾಲ್ಕು ತಂಡಗಳ ಮಧ್ಯೆ ನಡೆದ ಪಂದ್ಯ ಕೂಡ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಈ ಪಂದ್ಯದಲ್ಲಿ  ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ವಿಜಯಶಾಲಿಗಳಾದರೆ ಪುಣೇರಿ ಪಲ್ಟಾನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ನಿರಾಸೆ ಅನುಭವಿಸಿದವು. ಜೈಪುರ್‌ 31-26 ಅಂತರದಿಂದ ಪುಣೇರಿಯನ್ನು ಕೆಡವಿತು (Jaipur Pink Panthers vs Puneri Paltan). ರೈಡರ್‌ ಅರ್ಜುನ್‌ ದೇಶ್ವಾಲ್‌ 11 ಅಂಕಗಳೊಂದಿಗೆ ಜೈಪುರ್‌ ತಂಡದ ಹೀರೋ ಎನಿಸಿದರು. ಇತ್ತ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ (Bengal Warriors vs Haryana Steelers and) 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು.

ಪ್ಯಾಂಥರ್ಸ್‌ ಏಳು ಟಚ್‌ ಪಾಯಿಂಟ್‌ಗಳೊಂದಿಗೆ ಅರ್ಜುನ್ ಒಟ್ಟು 11 ಪಾಯಿಂಟ್ ಗಳಿಸಿ ಮಿಂಚಿದರು. ಆಲ್‌ರೌಂಡರ್ ಸಾಹುಲ್ ಕುಮಾರ್ ಮತ್ತು ಡಿಫೆಂಡರ್ ಸಂದೀಪ್ ಧುಲ್ ತಲಾ 4 ಪಾಯಿಂಟ್ ಕಲೆ ಹಾಕಿದರೆ ದೀಪಕ್ ಹೂಡಾ 3 ಪಾಯಿಂಟ್ ಗಳಿಸಿದರು. ಪುಣೇರಿ ಪರವಾಗಿ ಅಸ್ಲಮ್ ಇನಾಮ್ದಾರ್ ಆಲ್​ರೌಂಡ್ ಪ್ರದರ್ಶನ ತೋರಿ 6 ಅಂಕ ಗಳಿಸಿದರು. ಸಬ್​ಸ್ಟಿಟ್ಯೂಟ್ ಆಗಿ ಬಂದ ನಿತಿನ್ ತೋಮರ್ 8 ರೇಡ್ ಮಾಡಿ 4 ಅಂಕ ಗಳಿಸಿದರು. ಆದರೆ, ಎರಡೂ ತಂಡಗಳ ಮಧ್ಯೆ ವ್ಯತ್ಯಾಸ ಇದ್ದದ್ದು ಅರ್ಜುನ್ ದೇಶವಾಲ್ ಅವರ ಅಮೋಘ ಆಟ.

ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಕರ್ನಾಟಕದ ಬಿ.ಸಿ. ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯದ ಮೊದಲಾರ್ಧದವರೆಗೂ ಹಿಡಿತ ಸಾಧಿಸಿತ್ತು. ಆದರೆ, ನಂತರದ ಸಮಯದಲ್ಲಿ ಸ್ಟೀಲರ್ಸ್ ತಂಡ ಭರ್ಜರಿ ಆಲ್​ರೌಂಡ್ ಪ್ರದರ್ಶನದ ಮೂಲಕ ವಾರಿಯರ್ಸ್ ತಂಡಕ್ಕೆ ಗೆಲುವಿನ ಅವಕಾಶ ನೀಡಲಿಲ್ಲ.

ಜಿದ್ದಾಜಿದ್ದಿಯ ಹೋರಾಟದಲ್ಲಿ ಆರಂಭದಲ್ಲಿ ಅಮೋಘ ಆಟವಾಡಿದ ಬೆಂಗಾಲ್ ಎದುರಾಳಿಗಳನ್ನು ಆಲ್‌ಔಟ್ ಮಾಡಿ ಮುನ್ನಡೆ ಸಾಧಿಸಿತ್ತು. ಆದರೆ ಮೀತು ಮತ್ತು ವಿಕಾಸ್ ಖಂಡೋಲ ಭರ್ಜರಿ ರೇಡಿಂಗ್ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಮೀತು 10 ಟಚ್ ಪಾಯಿಂಟ್‌ಗಳೊಂದಿಗೆ ಮಿಂಚಿದರೆ ವಿಕಾಸ್ ಒಂದು ಬೋನಸ್ ಪಾಯಿಂಟ್‌ನೊಂದಿಗೆ 9 ಪಾಯಿಂಟ್ ಗಳಿಸಿದರು. 9 ಬೋನಸ್ ಪಾಯಿಂಟ್‌ ಸೇರಿದಂತೆ 14 ಪಾಯಿಂಟ್‌ಗಳನ್ನು ಕಲೆ ಹಾಕಿದ ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ ನಡೆಸಿದ ಹೋರಾಟಕ್ಕೆ ಮೊಹಮ್ಮದ್ ನಬಿಭಕ್ಷ್ ಆಲ್‌ರೌಂಡ್ ಆಟದ ಮೂಲಕ ಸಹಕಾರ ನೀಡಿದರು.

ತಲಾ ಮೂರು ಟಚ್‌ ಪಾಯಿಂಟ್‌, ಬೋನಸ್ ಪಾಯಿಂಟ್ ಮತ್ತು ಟ್ಯಾಕ್ಲಿಂಗ್ ಪಾಯಿಂಟ್‌ಗಳನ್ನು ಅವರು ಗಳಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 18-15ರ ಮುನ್ನಡೆ ಸಾಧಿಸಿದ್ದ ವಾರಿಯರ್ಸ್‌ ನಂತರ ಮುಗ್ಗರಿಸಿತು. ದ್ವಿತೀಯಾರ್ಧದ ಆರಂಭದಲ್ಲೇ ವಾರಿಯರ್ಸ್ ತಂಡವನ್ನು ಆಲ್‌ಔಟ್ ಮಾಡಿದ ಹರಿಯಾಣ ಸಮಬಲ ಸಾಧಿಸಿತು. ನಂತರ ಜಯದತ್ತ ಮುನ್ನಡೆಯಿತು.

ಪ್ರೊ ಕಬಡ್ಡಿ ಲೀಗ್ 2022 ಅಂಕಪಟ್ಟಿ:

  • ಬೆಂಗಳೂರು ಬುಲ್ಸ್: 28 ಅಂಕ
  • ದಬಂಗ್ ಡೆಲ್ಲಿ: 26 ಅಂಕ
  • ಪಟ್ನಾ ಪೈರೇಟ್ಸ್: 24 ಅಂಕ
  • ತಮಿಳ್ ತಲೈವಾಸ್: 22 ಅಂಕ
  • ಯು ಮುಂಬಾ: 20 ಅಂಕ
  • ಹರ್ಯಾಣ ಸ್ಟೀಲರ್ಸ್: 20 ಅಂಕ
  • ಜೈಪುರ್ ಪಿಂಕ್ ಪ್ಯಾಂಥರ್ಸ್: 18 ಅಂಕ
  • ಬೆಂಗಾಲ್ ವಾರಿಯರ್ಸ್: 17 ಅಂಕ
  • ಗುಜರಾತ್ ಜೈಂಟ್ಸ್: 14 ಅಂಕ
  • ಯು ಪಿ ಯೋದ್ಧಾ: 14 ಅಂಕ
  • ಪುಣೇರಿ ಪಲ್ಟನ್: 11 ಅಂಕ
  • ತೆಲುಗು ಟೈಟಾನ್ಸ್: 10 ಅಂಕ

6 ಪಂದ್ಯಗಳಲ್ಲಿ 73ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿ; ಆದರೂ ಈ ಆಟಗಾರ್ತಿಗೆ ವಿಶ್ವಕಪ್ ತಂಡದಲಿಲ್ಲ ಸ್ಥಾನ

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್