AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿ ನಂತರ ಮುಂದೇನು ಅನ್ನೋ ಪ್ರಶ್ನೆ The Great Wall ದ್ರಾವಿಡ್​ಗೂ ಕಾಡಿತ್ತಂತೆ!

The Great Wall ರಾಹುಲ್ ದ್ರಾವಿಡ್​ಗೂ ನಿವೃತ್ತಿಯ ನಂತರ ಮುಂದೇನು ಅನ್ನೋ ಆತಂಕದ ಪ್ರಶ್ನೆ ಕಾಡಿತ್ತಂತೆ. ಈ ವಿಚಾರವನ್ನ ಈಗ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ. ಭಾರತ-A ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮುನ್ನ ನಿವೃತ್ತಿಯ ನಂತರ ಮುಂದೇನು ಮಾಡಬೇಕು ಎಂಬುದಕ್ಕೆ ಅವರ ಸ್ಪಷ್ಟ ಉತ್ತರ ಇರಲಿಲ್ಲ. ಈ ಅವಧಿಯಲ್ಲಿ IPL​ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್​ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನನ್ನ ಅದೃಷ್ಟ ಎಂದು ದ್ರಾವಿಡ್ ಹೇಳಿದ್ದಾರೆ. […]

ನಿವೃತ್ತಿ ನಂತರ ಮುಂದೇನು ಅನ್ನೋ ಪ್ರಶ್ನೆ The Great Wall ದ್ರಾವಿಡ್​ಗೂ ಕಾಡಿತ್ತಂತೆ!
KUSHAL V
|

Updated on: Jul 19, 2020 | 11:19 AM

Share

The Great Wall ರಾಹುಲ್ ದ್ರಾವಿಡ್​ಗೂ ನಿವೃತ್ತಿಯ ನಂತರ ಮುಂದೇನು ಅನ್ನೋ ಆತಂಕದ ಪ್ರಶ್ನೆ ಕಾಡಿತ್ತಂತೆ. ಈ ವಿಚಾರವನ್ನ ಈಗ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ. ಭಾರತ-A ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮುನ್ನ ನಿವೃತ್ತಿಯ ನಂತರ ಮುಂದೇನು ಮಾಡಬೇಕು ಎಂಬುದಕ್ಕೆ ಅವರ ಸ್ಪಷ್ಟ ಉತ್ತರ ಇರಲಿಲ್ಲ. ಈ ಅವಧಿಯಲ್ಲಿ IPL​ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್​ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನನ್ನ ಅದೃಷ್ಟ ಎಂದು ದ್ರಾವಿಡ್ ಹೇಳಿದ್ದಾರೆ.

ನಾನು ಆಟ ಮುಗಿಸಿದ ನಂತರ ನನ್ನ ಮುಂದೆ ಕೆಲವು ಆಯ್ಕೆಗಳಿದ್ದವು. ಆದ್ರೆ ಏನನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದ್ರ ಬಗ್ಗೆ ಖಚಿತ ನಿಲುವಿರಲಿಲ್ಲ. ಆದ್ರೆ ನನ್ನ ವೃತ್ತಿಜೀವನದ ಅಂತ್ಯಕ್ಕೆ ಬರುವಾಗ ಕಪಿಲ್ ದೇವ್ ನನಗೆ ಈ ಸಲಹೆಯನ್ನು ನೀಡಿದ್ದರು ಎಂದು ದ್ರಾವಿಡ್ ಹಂಚಿಕೊಂಡಿದ್ದಾರೆ.

ಕಪಿಲ್​ ದೇವ್​ ನೀಡಿದ ಸಲಹೆ ಏನೆಂದರೆ, ರಾಹುಲ್ ಯಾವುದೇ ಕೆಲಸಕ್ಕೆ ಮೊದಲು ನೇರವಾಗಿ ಧುಮುಕಬೇಡಿ. ಒಂದಷ್ಟು ವರ್ಷ ಬೇರೆ ಬೇರೆ ವಿಭಾಗಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ. ಆ ನಂತರ ನಿಮಗೇನು ಇಷ್ಟವಾಗುತ್ತೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ರು. ನಿಜಕ್ಕೂ ಕಪಿಲ್ ಪಾಜಿ ನೀಡಿದ ಸಲಹೆ ಒಳ್ಳೆಯದಾಗಿತ್ತು ಎಂದಿದ್ದಾರೆ Jammy.

ನನಗೆ ಹೆಚ್ಚು ತೃಪ್ತಿಯನ್ನು ನೀಡಿದ ವಿಷಯವೆಂದರೆ ನಿಜವಾಗಿಯೂ ನಾನು ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವುದು. ಆಟಗಾರರೊಂದಿಗೆ ಸಂಪರ್ಕದಲ್ಲಿರೋದು. ನಾನು ಕೋಚಿಂಗ್ ವಿಭಾಗವನ್ನ ನಿಜವಾಗಿಯೂ ಇಷ್ಟಪಟ್ಟೆ. ಹೀಗಾಗಿ, ಭಾರತ A ಮತ್ತು ಅಂಡರ್ 19 ತಂಡಕ್ಕೆ ಕೋಚ್ ಆಗೋ ಅವಕಾಶ ಬಂದಾಗ ಖುಷಿಯಿಂದ ಅದನ್ನ ಒಪ್ಪಿಕೊಂಡೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.

Follow Us
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್
180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್