AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ. 1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ […]

24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!
KUSHAL V
| Updated By: ಸಾಧು ಶ್ರೀನಾಥ್​|

Updated on: Jul 18, 2020 | 3:15 PM

Share

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ.

1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮುಂಬೈ ಬೆಡಗಿ ವಿಶ್ವದ ಗಮನ ಸೆಳೆದಿದ್ದು 2018ರಲ್ಲಿ ನಡೆದ ICC ಮಹಿಳಾ T20 ಪಂದ್ಯಾವಳಿಯಲ್ಲಿ. ಕೇವಲ ಐದು ಮ್ಯಾಚ್​ನಲ್ಲಿ 178 ರನ್​ ಗಳಿಸಿ ಪಂದ್ಯಾವಳಿಯ ಮೂರನೇ ಅತ್ಯುತ್ತಮ ಬ್ಯಾಟ್ಸ್​ವುಮನ್ ಆಗಿ ಹೊರಹೊಮ್ಮಿದರು.

ಇದಲ್ಲದೆ, ಮಹಿಳಾ IPL ಟ್ರೇಲ್​ಬ್ಲೇಜರ್ಸ್​ ತಂಡದ ಕ್ಯಾಪ್ಟನ್​ ಆಗಿ ಮಿಂಚಿದ ಈ ಲೆಫ್ಟ್ ಹ್ಯಾಂಡ್​ ಬ್ಯಾಟ್ಸ್​ವುಮನ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಲೋಕದಲ್ಲಿ ಅಭೂತಪೂರ್ವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ BCCI ಸ್ಮೃತಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ಎಂದು ಹೆಸರಿಸಿ ಸನ್ಮಾಸಿತ್ತು.

2020ರ T20 ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯ ವಿರುದ್ಧ ಫೈನಲ್ ತಲುಪಿದ್ದ ಟೀಮ್​ ಇಂಡಿಯಾ ತಂಡದಲ್ಲಿ ಸ್ಮೃತಿ ಮಂದಾನ ಮಹತ್ತರ ಪಾತ್ರ ವಹಿಸಿದ್ದರು.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್