AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ. 1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ […]

24ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್​ ಕುವರಿ ಸ್ಮೃತಿ ಮಂದಾನ!
KUSHAL V
| Edited By: |

Updated on: Jul 18, 2020 | 3:15 PM

Share

ಮುಂಬೈ: ದೇಶದ ಖ್ಯಾತ ಮಹಿಳಾ ಕ್ರಿಕೆಟ್​ ಆಟಗಾರ್ತಿ ಹಾಗೂ ಟೀಮ್​ ಇಂಡಿಯಾದ ಓಪನರ್​ ಸ್ಮೃತಿ ಮಂದಾನ ಇಂದು ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹೀಗಾಗಿ, ದೇಶದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ರಿಂದ ಹಿಡಿದು ಇವರ ಇಡೀ ಅಭಿಮಾನಿ ಬಳಗವೇ ಸೋಷಿಯಲ್​ ಮೀಡಿಯಾ ಮುಖಾಂತರ ತಮ್ಮ ಬರ್ತ್​ ಡೇ ವಿಶಸ್​ ಹಂಚಿಕೊಂಡಿದ್ದಾರೆ.

1996ರಲ್ಲಿ ಜನಿಸಿದ ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ODI ಶ್ರೇಣಿಯಲ್ಲಿ 4ನೇ ಅತ್ಯುತ್ತಮ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮುಂಬೈ ಬೆಡಗಿ ವಿಶ್ವದ ಗಮನ ಸೆಳೆದಿದ್ದು 2018ರಲ್ಲಿ ನಡೆದ ICC ಮಹಿಳಾ T20 ಪಂದ್ಯಾವಳಿಯಲ್ಲಿ. ಕೇವಲ ಐದು ಮ್ಯಾಚ್​ನಲ್ಲಿ 178 ರನ್​ ಗಳಿಸಿ ಪಂದ್ಯಾವಳಿಯ ಮೂರನೇ ಅತ್ಯುತ್ತಮ ಬ್ಯಾಟ್ಸ್​ವುಮನ್ ಆಗಿ ಹೊರಹೊಮ್ಮಿದರು.

ಇದಲ್ಲದೆ, ಮಹಿಳಾ IPL ಟ್ರೇಲ್​ಬ್ಲೇಜರ್ಸ್​ ತಂಡದ ಕ್ಯಾಪ್ಟನ್​ ಆಗಿ ಮಿಂಚಿದ ಈ ಲೆಫ್ಟ್ ಹ್ಯಾಂಡ್​ ಬ್ಯಾಟ್ಸ್​ವುಮನ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಲೋಕದಲ್ಲಿ ಅಭೂತಪೂರ್ವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ BCCI ಸ್ಮೃತಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ಎಂದು ಹೆಸರಿಸಿ ಸನ್ಮಾಸಿತ್ತು.

2020ರ T20 ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯ ವಿರುದ್ಧ ಫೈನಲ್ ತಲುಪಿದ್ದ ಟೀಮ್​ ಇಂಡಿಯಾ ತಂಡದಲ್ಲಿ ಸ್ಮೃತಿ ಮಂದಾನ ಮಹತ್ತರ ಪಾತ್ರ ವಹಿಸಿದ್ದರು.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​