AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?

Ravichandran Ashwin Centuary | ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಹಾಕುವ ಬೌಲ್​ ಯಾವ ರೀತಿ ಬೀಳುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ.

Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?
ಶತಕ ಬಾರಿಸಿದ ಆರ್​ ಅಶ್ವಿನ್​
ರಾಜೇಶ್ ದುಗ್ಗುಮನೆ
| Edited By: |

Updated on: Feb 15, 2021 | 5:43 PM

Share

ಟೀಂ ಇಂಡಿಯಾದ ಆಲ್​ ರೌಂಡರ್​ ಅಶ್ವಿನ್​ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ನ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದಾರೆ. ಕೇವಲ 135 ಬಾಲ್​ಗಳಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಜೊತೆಗೆ, ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾದರೆ, ಅಶ್ವಿನ್​ ಶತಕದ ಹಿಂದಿನ ರಹಸ್ಯವೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್​ ಸ್ಪಿನ್ನರ್​​ಗಳು ಮೋಡಿ ಮಾಡಿದ್ದಾರೆ. ಜಾಕ್​ ಲೀಚ್​ ಹಾಗೂ ಮೋಯಿನ್​ ಅಲಿ ತಲಾ ನಾಲ್ಕು ವಿಕೆಟ್​ ಕಿತ್ತಿದ್ದಾರೆ. ಸ್ಪಿನ್ನರ್​ ದಾಳಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅವರಂತಹ ಅನುಭವಿ ಆಟಗಾರರು ತತ್ತರಿಸಿ, ವಿಕೆಟ್​ ಒಪ್ಪಿಸಿ ಶರಣಾಗಿದ್ದಾರೆ. ಆದರೆ, ಅಶ್ವಿನ್​ ಮಾತ್ರ ಇವರ ಬೌಲಿಂಗ್​ ದಾಳಿಗೆ ತತ್ತರಿಸದೆ ಆಟವಾಡಿದ್ದಾರೆ. ಅಶ್ವಿನ್​ ಈ ಸಾಧನೆ ಮಾಡಿರುವುದಕ್ಕೂ ಒಂದು ಕಾರಣವಿದೆ.

ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಮಾಡುವ ಬೌಲಿಂಗ್​ ಯಾವ ರೀತಿ ಟರ್ನ್​ ಆಗುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್​ ಸ್ಪಿನ್ನರ್​ಗಳ ಲಯವನ್ನು ಕರಾರುವಕ್ಕಾಗಿ ಗಮನಿಸಿ, ಆ ಲಯಕ್ಕೆ ತಕ್ಕಂತೆ ಆಡಿದ್ದರು ಅಶ್ವಿನ್​. ಅವರು ಸೆಂಚುರಿ ಬಾರಿಸಿದ ಹಿಂದಿನ ಕಾರಣ ಇದುವೇ ಎನ್ನಲಾಗುತ್ತಿದೆ.

ಇದನ್ನೂ ಓದಿ:  ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ

ಇನ್ನು, ಚೆನ್ನೈ ಮೈದಾನ ಅಶ್ವಿನ್​ಗೆ ಹೋಂ ಪಿಚ್​. ಹೋಂ ಪಿಚ್​ನಲ್ಲಿ ಸಾಮಾನ್ಯವಾಗಿ ಎಲ್ಲಾ ಆಟಗಾರರು ಅದ್ಭುತವಾಗಿ ಆಡುತ್ತಾರೆ. ಪಿಚ್​ ಹೇಗೆ ವರ್ತಿಸುತ್ತದೆ ಎಂಬುದು ಅವರಿಗೆ ಕರಗತವಾಗಿರುತ್ತದೆ. ಇದೇ ಕಾರಣಕ್ಕೆ ಅಶ್ವಿನ್​ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!