AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

ದೈಹಿಕವಾಗಿ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕವಾಗಿ ಆ ಕಷ್ಟಕೋಟಲೆಯಿಂದ ಹೊರಬರುವುದು ಕಷ್ಟಕಷ್ಟ. 5 ರಿಂದ 8ನೆಯ ದಿನಗಳಂದು ನಾನು ತುಂಬಾನೇ ಅನುಭವಿಸಿಬಿಟ್ಟೆ. ಎಲ್ಲರೂ ಕಣ್ಣಳತೆಯಲ್ಲೇ ಇದ್ದರೂ ಯಾರೂ ಏನೂ ಮಾಡುವುದಕ್ಕೆ ಆಗಲಿಲ್ಲ. ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ - ಪ್ರೀತಿ ಅಶ್ವಿನ್

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ
ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವಗಳನ್ನು ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ ಎಂದ ಕ್ರಿಕೆಟರ್ ಅಶ್ವಿನ್ ಅವರ ಪತ್ನಿ
ಸಾಧು ಶ್ರೀನಾಥ್​
|

Updated on:May 01, 2021 | 3:36 PM

Share

ಕೊರೊನಾ ಎಂಬ ಬ್ರಹ್ಮ ರಾಕ್ಷಸ ಕೆಚ್ಚೆದೆಯ ಕ್ರಿಕೆಟರ್ ರವಿಚಂದ್ರನ್​ ಅಶ್ವಿನ್​ ಅವರ ಕುಟುಂಬವನ್ನು ಹೈರಾಣಗೊಳಿಸಿದೆ. ಅಶ್ವಿನ್​ ಅವರ ಪತ್ನಿ ಪ್ರೀತಿ ನಾರಾಯಣ್ ತಮ್ಮ ಕುಟುಂಬ ಅನುಭವಿಸುತ್ತಿರುವ ದುರ್ಭರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್​ ಅಶ್ವಿನ್ ಅವರು ತಮ್ಮ ಕುಟುಬದ ಪ್ರೀತಿ ಪಾತ್ರರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ತೊರೆದು ಪ್ರಸಕ್ತ ಐಪಿಎಲ್ 2021 ನಿಂದ ದೂರವಾಗಿದ್ದರು. ​

ತಮ್ಮ ಕುಟುಂಬಸ್ಥರ ಪೈಕಿ ಒಟ್ಟು 10 ಮಂದಿ ಈ ಕೊರೊನಾ ಮಹಾಮಾರಿಯ ವಿರುದ್ಧ ರುದ್ರಭೀಕರವಾಗಿ ಸೆಣೆಸಾಟ ನಡೆಸಿದ್ದೇವೆ. ಹಾಗಾಗಿಯೇ ಅಶ್ವಿನ್ ಅನಿವಾರ್ಯವಾಗಿ ಐಪಿಎಲ್ 2021 ಟೂರ್ನಿಯನ್ನು ಅರ್ಧಕ್ಕೇ ಬಿಟ್ಟುಬಂದರು ಎಂದು ಪ್ರೀತಿ ಅಶ್ವಿನ್ ಅವರು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕೊರೊನಾ ಮಹಾಮಾರಿ ಈಗಾಗಲೇ ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಅದೇ ರೀತಿ ವಿಶ್ವದ ಇತರೆಡೆ 30 ಲಕ್ಷ ಮಂದಿ ಪ್ರಾಣ ತೆತ್ತಿದ್ದಾರೆ.

ನಮ್ಮ ಕುಟುಂಬದಲ್ಲಿಯೇ ಆರು ಮಂದಿ ದೊಡ್ಡವರು ಮತ್ತು 4 ಚಿಕ್ಕ ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಇಬ್ಬೊಬ್ಬರೂ ಒಂದೊಂದು ನಗರದಲ್ಲಿ ಒಂದೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆವು. ಈ ಚಿಕ್ಕ ಚಿಕ್ಕ ಮಕ್ಕಳ ಮೂಲಕ ಮನೆ ಮಂದಿಗೆಲ್ಲ ಕೊರೊನಾ ಮೆತ್ತಿಕೊಂಡಿತು ಎಂದು ಪ್ರೀತಿ ಅಶ್ವಿನ್ ತಿಳಿಸಿದ್ದಾರೆ.

ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ:

ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ. ಇದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ಕೊರೊನಾ ವಿರುದ್ಧ ಹೋರಾಡುವುದಕ್ಕೆ ಒಳ್ಳೆಯ ಅವಕಾಶ ದೊರಕುತ್ತದೆ ಎಂದು ಅವರು ಉಚಿತ ಸಲಹೆ ನೀಡಿದ್ದಾರೆ.

ದೈಹಿಕವಾಗಿ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕವಾಗಿ ಆ ಕಷ್ಟಕೋಟಲೆಯಿಂದ ಹೊರಬರುವುದು ಕಷ್ಟಕಷ್ಟ. 5 ರಿಂದ 8ನೆಯ ದಿನಗಳಂದು ನಾನು ತುಂಬಾನೇ ಅನುಭವಿಸಿಬಿಟ್ಟೆ. ಎಲ್ಲರೂ ಕಣ್ಣಳತೆಯಲ್ಲೇ ಇದ್ದರೂ ಯಾರೂ ಏನೂ ಮಾಡುವುದಕ್ಕೆ ಆಗಲಿಲ್ಲ. ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ. ದಯವಿಟ್ಟು ಎಲ್ಲ ರೀತಿಯ ಸಹಾಯ ಪಡೆಯಿರಿ ಎಂದು ಟ್ವೀಟ್​ ಮಾಡಿ ಪ್ರೀತಿ ಅಶ್ವಿನ್ ಹೇಳಿದ್ದಾರೆ.

(Ravichandran Ashwin Wife Prithi Shares how 10 of her Family members struggled With Covid 19) Also Read: ಕೊರೊನಾ ಕಾಟ: ​ಐಪಿಎಲ್ ಟೂರ್ನಿಯಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್, ಆರ್​ಸಿಬಿ ತಂಡಕ್ಕೂ ಬರೆ; ಇಬ್ಬರು ಸ್ವದೇಶಕ್ಕೆ ವಾಪಸ್​

Published On - 3:29 pm, Sat, 1 May 21

ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ