AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ರೋಹಿತ್ ಆಡದಿರುವುದು ಬ್ರೇಕಿಂಗ್ ನ್ಯೂಸ್ ಎಂದ ಪಾರ್ಥೀವ್ ಪಟೇಲ್

ಶಿಖರ್ ಮೂರನೇ ಆಪ್ಷನ್ ಎಂದು ಖುದ್ದು ಕೊಹ್ಲಿಯೇ ಗುರುವಾರದಂದು ಹೇಳಿದ್ದರು. ಕೊಹ್ಲಿಯ ನಿರ್ಧಾರವನ್ನು ಭಾರತದ ಮಾಜಿ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್ ಬ್ರೇಕಿಂಗ್ ನ್ಯೂಸ್ ಎಂದು ಬಣ್ಣಿಸಿದ್ದಾರೆ.

India vs England: ರೋಹಿತ್ ಆಡದಿರುವುದು ಬ್ರೇಕಿಂಗ್ ನ್ಯೂಸ್ ಎಂದ ಪಾರ್ಥೀವ್ ಪಟೇಲ್
ರೋಹಿತ್ ಶರ್ಮ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 12, 2021 | 9:41 PM

Share

ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅಹಮದಾಬಾದನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್​ ಸೋತ ನಂತರ ಆಡಲಿರುವ ಆಟಗಾರರ ಹೆಸರನ್ನು ಪ್ರಕಟಿಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಅರಂಭ ಅಟಗಾರ ರೋಹಿತ್ ಶರ್ಮ ಅವರನ್ನು ಮೊದಲಿನ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ ಅಂತ ಅವರು ಹೇಳಿದಾಗ ಮನೆಗಳಲ್ಲಿ ಕೂತು ಟಿವಿ ವೀಕ್ಷಿಸುತ್ತಿದ್ದ ಕ್ರಿಕೆಟ್​ ಪ್ರೇಮಿಗಳಿಗೂ ಶಾಕ್​ ಆಯಿತು. ಯಾಕೆಂದರೆ, ಕಳೆದೆರಡು ದಿಗಳಿಂದ ಅವರು ಭಾರತದ ಇನ್ನಿಂಗ್ಸ್ ರೋಹಿತ್ ಮತ್ತು ಕರ್ನಾಟಕದ ಕೆ ಎಲ್ ರಾಹುಲ್ ಆರಂಭಿಸಲಿದ್ದಾರೆ ಅಂತ ಹೇಳುತ್ತಲೇ ಬಂದಿದ್ದರು. ಆದರೆ ಏಕಾಏಕಿ ಅವರು ವಿಶ್ರಾಂತಿ ಅಂತ ಘೋಷಿಸಿದಾಗ ಏನೋ ಎಡಟವಟ್ಟಾಗಿದೆ ಎಂಬ ಭಾವನೆ ಕ್ರಿಕೆಟ್​ ಪ್ರೇಮಿಗಳ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ರೋಹಿತ್ ಅವರ ಸ್ಥಾನದಲ್ಲಿ ಎಡಚ ಶಿಖರ್ ಧವನ್, ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರು.

ಶಿಖರ್ ಮೂರನೇ ಆಪ್ಷನ್ ಎಂದು ಖುದ್ದು ಕೊಹ್ಲಿಯೇ ಗುರುವಾರದಂದು ಹೇಳಿದ್ದರು. ಕೊಹ್ಲಿಯ ನಿರ್ಧಾರವನ್ನು ಭಾರತದ ಮಾಜಿ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್ ಬ್ರೇಕಿಂಗ್ ನ್ಯೂಸ್ ಎಂದು ಬಣ್ಣಿಸಿದ್ದಾರೆ. ‘ಇಂದಿನ ಪಂದ್ಯದಲ್ಲಿ ರೋಹಿತ್ ಆಡದಿರುವುದು ನಿಜಕ್ಕೂ ಬ್ರೇಕಿಂಗ್ ನ್ಯೂಸ್. ಆದರೆ ಅದು ಶಿಖರ್ ಧವನ್​ಗೆ ಆಡುವ ಅವಕಾಶ ಕಲ್ಪಿಸಿದೆ. ದೇಶೀಯ ಕ್ರಿಕೆಟ್​ನಲ್ಲಿ ಅವರು ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ,’ ಎಂದು ಕ್ರೀಡಾ ಚ್ಯಾನೆಲೊಂದರ ಜೊತೆ ಮಾತಾಡುತ್ತಾ ಪಟೇಲ್ ಹೇಳಿದರು.

ತಂಡಕ್ಕೆ ರಿಷಬ್ ಪಂತ್ ವಾಪಸ್ಸಾಗಿರುವುದರಿಂದ ರಾಹುಲ್ ಮೇಲೆ ಹೊಣೆಗಾರಿಕೆ ಕಮ್ಮಿಯಾಗಿದೆ. ಅವರು ನಿರಾತಂಕವಾಗಿ ಬ್ಯಾಟ್​ ಮಾಡಬಹುದು ಅಂತ ಮೊನ್ನೆಯಷ್ಟೇ ಎಲ್ಲ ಬಗೆಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಪಟೇಲ್ ಹೇಳಿದರು.

Parthiv Patel

ಪಾರ್ಥೀವ್ ಪಟೇಲ್

‘ಕಳೆದ ಎರಡು ವರ್ಷಗಳಿಂದ ರಾಹುಲ್ ವಿಕೆಟ್​ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಪಂತ್ ಟೀಮಿಗೆ ವಾಪಸ್ಸು ಬಂದಿರುವುದರಿಂದ ರಾಹುಲ್ ಕೇವಲ ಬ್ಯಾಟಿಂಗ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಮುಕ್ತವಾಗಿ ಆಡಬಹುದು’ ಎಂದು ಪಟೇಲ್ ಹೇಳಿದರು.

ಟಾಪ್ ಆರ್ಡರ್​ನಲ್ಲಿ ಮಾಡಿದ ಬದಲಾವಣೆಯೊಂದನ್ನು ಬಿಟ್ಟರೆ ಟೀಮ್ ಇಂಡಿಯಾದಲ್ಲಿ ಆಶ್ಚರ್ಯಕರ ಬೆಳವಣಿಗೆಗಳೇನೂ ಇರಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್​ರನ್ನು ಪ್ರಯೋಗಿಸುವ ಬದಲು ಶ್ರೇಯಸ್​ ಅಯ್ಯರ್​ ಅವರನ್ನೇ ಆಡಿಸಲು ನಿರ್ಧರಿಸಲಾಯಿತು.

ಬೌಲಿಂಗ್ ವಿಭಾಗದಲ್ಲಿ ಭಾರತ ಮೂವರು ಸ್ಪಿನ್ನರ್​ಗಳೊಂದಿಗೆ-ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ಅವರೊಂದಿಗೆ ಕಣಕ್ಕಿಳಿಯಲು ಟೀಮ್ ಇಂಡಿಯಾ ನಿರ್ಧರಿಸಿತು. ವೇಗದ ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮತ್ತು ಶಾರ್ದುಲ್ ಠಾಕೂರ್ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ:India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್​ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ