AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಹಾರ್ದಿಕ್ ಪಾಂಡ್ಯ ಹೊಡೆತ ಕಂಡು ಬೆರಗಾಗಿರುವ ಐಸಿಸಿ ಅದಕ್ಕೊಂದು ಹೆಸರು ಕೊಡಿ ಅಂತ ಕೇಳಿದೆ!

ಆದರೆ, ಪಾಂಡ್ಯ ಆಡಿದ ಶಾಟ್ ಮಾತ್ರ ಬಣ್ಣನೆಗೆ ಸಿಗದಂಥಧ್ದು. ಆ ಸನ್ನಿವೇಶ ಸೃಷ್ಟಿಯಾಗಿದ್ದು 15ನೇ ಓವರ್​ನಲ್ಲಿ ಮತ್ತು ಅದನ್ನು ಬೌಲ್ ಮಾಡಿದ್ದು ಇಂಗ್ಲೆಂಡ್​ನ ಆಲ್​​ರೌಂಡರ್ ಬೆನ್ ಸ್ಟೋಕ್ಸ್. ಆ ವಿಚಿತ್ರವಾದ ಶಾಟ್​ ಆಡುವುದಕ್ಕಿಂತ ಮೊದಲಿನ ಎಸೆತವನ್ನು ಪಾಂಡ್ಯ ಸಿಕ್ಸರ್​ಗೆ ಎತ್ತಿದ್ದರು

India vs England: ಹಾರ್ದಿಕ್ ಪಾಂಡ್ಯ ಹೊಡೆತ ಕಂಡು ಬೆರಗಾಗಿರುವ ಐಸಿಸಿ ಅದಕ್ಕೊಂದು ಹೆಸರು ಕೊಡಿ ಅಂತ ಕೇಳಿದೆ!
ಹಾರ್ದಿಕ್ ಪಾಂಡ್ಯ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on:Mar 13, 2021 | 10:37 AM

Share

ಇಂಗ್ಲೆಂಡ್​ ವಿರುದ್ಧ ಇಂದು ಅಹಮದಾಬಾದಿನಲ್ಲಿ ಶುರುವಾದ ಟಿ20 ಕ್ರಿಕೆಟ್​ ಸರಣಿಯಲ್ಲಿ ಭಾರತ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಿಜ. ಆದರೆ, ಮಿಡ್ಲ್ ಆರ್ಡರ್ ಬ್ಯಾಟ್ಸಮನ್ ಹಾರ್ದಿಕ್ ಪಾಂಡ್ಯ ಅವರು ಆಡಿದ ಒಂದು ಹೊಡೆತ ಕ್ರಿಕೆಟ್​ ಪ್ರೇಮಿಗಳಿಗೆ ದಿಗಿಲು ಮೂಡಿಸುವ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ ಸಹ ಪ್ರತಿಕ್ರಿಯಿಸುವಂಥ ಸಂದರ್ಭ ಸೃಷ್ಟಿಸಿದೆ. ಭಾರತದ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ರಿಷಭ್ ಪಂತ್ ವೇಗದ ಬೌಲರ್​ ಜೊಫ್ರಾ ಆರ್ಚರ್​ಗೆ ರಿವರ್ಸ್ ಸ್ಕೂಪ್ ಹೊಡೆತದ ಮೂಲಕ ಸಿಕ್ಸರ್​ ಬಾರಿಸಿ ದಿಟ್ಟತನ ಪ್ರದರ್ಶಿಸಿದರು.

ಆದರೆ, ಪಾಂಡ್ಯ ಆಡಿದ ಶಾಟ್ ಮಾತ್ರ ಬಣ್ಣನೆಗೆ ಸಿಗದಂಥಧ್ದು. ಆ ಸನ್ನಿವೇಶ ಸೃಷ್ಟಿಯಾಗಿದ್ದು 15ನೇ ಓವರ್​ನಲ್ಲಿ ಮತ್ತು ಅದನ್ನು ಬೌಲ್ ಮಾಡಿದ್ದು ಇಂಗ್ಲೆಂಡ್​ನ ಆಲ್​​ರೌಂಡರ್ ಬೆನ್ ಸ್ಟೋಕ್ಸ್. ಆ ವಿಚಿತ್ರವಾದ ಶಾಟ್​ ಆಡುವುದಕ್ಕಿಂತ ಮೊದಲಿನ ಎಸೆತವನ್ನು ಪಾಂಡ್ಯ ಸಿಕ್ಸರ್​ಗೆ ಎತ್ತಿದ್ದರು. ನಾವು ಚರ್ಚಿಸುತ್ತಿರುವ ನಿರ್ದಿಷ್ಟವಾದ ಎಸೆತವನ್ನು ಸ್ಟೋಕ್ಸ್ ಶಾರ್ಟ್​ ಆಗಿ ಪಿಚ್​ ಮಾಡಿದರು. ಪ್ರಾಯಶಃ ಇದನ್ನು ನಿರೀಕ್ಷಿಸಿದ್ದ ಬಲಗೈ ಬ್ಯಾಟ್ಸ್​ಮನ್ ಪಾಂಡ್ಯ ಚೆಂಡಿನ ಮೇಲಿನ ತಮ್ಮ ದೃಷ್ಟಿಯನ್ನು ಸರಿಸಿ ಡಕ್ ಮಾಡಿದರಾದರೂ ತಮ್ಮ ಬ್ಯಾಟನ್ನು ಮಾತ್ರ ಚೆಂಡಿನ ಲೈನಲ್ಲೇ ಇಟ್ಟರು. ಸ್ಟೋಕ್ಸ್ ಅವರ ಎಸೆತ ಅವರ ಬ್ಯಾಟಿಗೆ ತಾಕಿ ವಿಕೆಟ್ ಕೀಪರ್ ತಲೆ ಮೇಲಿಂದ ಬೌಂಡರಿಗೆ ಚಿಮ್ಮಿತು!

ಹೊಡೆತವನ್ನು ನೋಡಿ ಬೆರಗಾಗಿರುವ ಐಸಿಸಿ, ಈ ಶಾಟ್​ಗೊಂದು ಹೆಸರು ನೀಡಿ ಅಂತ ಟ್ವೀಟ್ ಮಾಡಿದೆ.

ದುರದೃಷ್ಟವಶಾತ್ ಉತ್ತಮ ಫಾರ್ಮ್​ನಲ್ಲಿ ಕಾಣುತ್ತಿದ್ದ ಪಾಂಡ್ಯ ಬಹಳ ಹೊತ್ತು ಕ್ರೀಸಿನಲ್ಲಿ ಉಳಿಯದೆ ಕೇವಲ 19ರನ್​ ಗಳಿಸಿ ವೇಗದ ಬೌಲರ್ ಕ್ರಿಸ್​ ಜೋರ್ಡನ್​ಗೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಶ್ರೇಯಸ್​ ಅಯ್ಯರ್​ (67, 48 ಎಸೆತ 8 ಬೌಂಡರಿ,1 ಸಿಕ್ಸ್) ಮಾತ್ರ ಚೆನ್ನಾಗಿ ಆಡಿದರು.

ಟೆಸ್ಟ್​ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತೀಯ ತಂಡದ ಬ್ಯಾಟ್ಸ್​ಮನ್​ಗಳು ಉಡಾಫೆ ಮನೋಭಾವ ಪ್ರದರ್ಶಿಸಿ ವಿಕೆಟ್​ ಕಳೆದುಕೊಂಡರು. ಇದನ್ನು ಆರಂಭಿಸಿದ್ದು ಖುದ್ದು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತವೊಂದನ್ನು ಆಫ್​ಸೈಡ್​ನಲ್ಲಿ ಎಳೆದು ಬಾರಿಸುವ ಪ್ರಯತ್ನ ಮಾಡಿದ ಕೊಹ್ಲಿ ಮಿಡ್​ ಆಫ್​ನಲ್ಲಿದ್ದ ಕ್ರಿಸ್ ಜೊರ್ಡನ್​​ಗೆ ಸುಲಭ ಕ್ಯಾಚ್​ ನೀಡಿದರು. ಅವರ ಹೊಡೆತ ನೆಟ್ಸ್​ನಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿಸಿದಂತಿತ್ತು.

ಮೊದಲ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್​ಗಳಿಂದ ಸುಲಭವಾಗಿ ಗೆದ್ದಿದೆ. ಎರಡನೇ ಪಂದ್ಯ ಇದೇ ಮೈದಾನದಲ್ಲಿ ರವಿವಾರದಂದು ನಡೆಯಲಿದೆ.

ಇದನ್ನೂ ಓದಿ: India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್​ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್

Published On - 10:57 pm, Fri, 12 March 21

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!