ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಬೆಂಗಳೂರಿನಲ್ಲೂ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ. ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ.

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

Updated on: Apr 25, 2023 | 9:35 AM

ಕಾರ್ಟ್ ರೇಸಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಕಾರ್ಟಿಂಗ್ ರೇಸ್ ನಡೆಯುತ್ತಿದೆ. ಈ ಮೂಲಕ ಭಾರತದ ಮುಂದಿನ ಕಾರ್ಟಿಂಗ್ (Karting) ಚಾಂಪಿಯನ್​ನ ಹುಡುಕಲು ತಯಾರಿ ನಡೆದಿದೆ. ಈ ವಾರದಿಂದಲೇ ಸ್ಪರ್ಧೆ ಆರಂಭ ಆಗಲಿದೆ. ಇದನ್ನು ಆರಂಭಿಸಿದ ಆರ್​ಪಿಪಿಎಲ್​ (ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್) ಈ ಬಗ್ಗೆ ಸೋಮವಾರ (ಏಪ್ರಿಲ್ 24) ಅಧಿಕೃತ ಘೋಷಣೆ ಮಾಡಿದೆ. ಇದಕ್ಕೆ ಕಾರ್ಟಿಂಗ್ ಸೂಪರ್ ಸೀರಿಸ್ ಎಂದು ಹೆಸರು ಇಡಲಾಗಿದೆ. ಮೋಟಾರ್​ಸ್ಪೋರ್ಟ್​​ನ ವೃತ್ತಿ ಆಗಿ ತೆಗೆದುಕೊಳ್ಳಬೇಕು ಎಂದು ಆಲೋಚಿಸಿದವರಿಗೆ ಆರ್​ಪಿಪಿಎಲ್ ರೇಸ್ ಸಹಕಾರಿ ಆಗಲಿದೆ.

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಚೆನ್ನೈನ ನಗರದಲ್ಲಿ ಮೊದಲು ಈ ರೇಸ್ ನಡೆಯಲಿದೆ. ಜೂನ್​ 4ರಂದು ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ. ಚೆನ್ನೈನಲ್ಲಿ ಏಪ್ರಿಲ್ 20-30ರವರೆಗೆ ರೇಸ್ ಇರಲಿದೆ. ಬಳಿಕ ಬೆಂಗಳೂರು, ತ್ರಿಶೂರ್, ಮುಂಬೈ, ದೆಹಲಿ ಹಾಗೂ ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ ಮೆಕೋ ಕಾರ್ಟೋಪಿಯಾದಲ್ಲಿ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ.

ಇಲ್ಲಿ ಸ್ಪರ್ಧಿಸುವವರ ವಯಸ್ಸು 15 ದಾಟಿರಬೇಕು. ಫಿನಾಲೆಯಲ್ಲಿ ಗೆದ್ದವರು ಜುಲೈನಲ್ಲಿ ಪ್ರಾರಂಭವಾಗುವ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ 1.5-2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ಪಡೆಯುತ್ತಾರೆ. ಸ್ಕಾಲರ್​ಶಿಪ್ ಹೊಸ ಕಾರ್ಟ್​ ಸಿದ್ಧಪಡಿಸುವುದು ಸೇರಿ ಅನೇಕ ತರಬೇತಿಗಳನ್ನು ಒಳಗೊಂಡಿದೆ.

ವಿವಿಧ ನಗರಗಳಿಂದ 36 ರೇಸರ್​ಗಳ ಆಯ್ಕೆ ಮಾಡಲಾಗುತ್ತದೆ. ಹೈದರಾಬಾದ್​ನಲ್ಲಿ ನಡೆಯುವ ಫಿನಾಲೆಯಲ್ಲಿ ಇವರು ಭಾಗಿ ಆಗಲಿದ್ದಾರೆ. ಪ್ರತಿ ಬ್ಯಾಚ್​ನಲ್ಲಿ 9 ಮಂದಿ ಇರುತ್ತಾರೆ. ಅಭ್ಯಾಸ ಹಾಗೂ ಅರ್ಹತಾ ಸುತ್ತು ಇರಲಿದೆ. ಪ್ರತಿ ನಗರದಲ್ಲಿ ಆಯ್ಕೆ ಆದ ಟಾಪ್ 3 ರೇಸರ್​ಗಳಿಗೆ ಟ್ರೋಫಿ ಸಿಗಲಿದೆ. ಇನ್ನು ಫಿನಾಲೆಯಲ್ಲಿ ಟಾಪ್ 6 ಡ್ರೈವರ್​ಗಳಿಗೆ ಎಫ್​ಎಂಎಸ್​ಸಿಐನಿಂದ ಸ್ಕಾಲರ್​ಶಿಪ್ ಸಿಗಲಿದೆ.  (Source)

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು

ಆರ್​ಪಿಪಿಎಲ್​ನ ಮುಖ್ಯಸ್ಥ ಹಾಗೂ ಎಂಡಿ ಅಖಿಲ್ ರೆಡ್ಡಿ ಮಾತನಾಡಿ, ‘ಈ ಹೊಸ ಕಾರ್ಟಿಂಗ್ ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ನಮಗೆ ಖುಷಿ ಇದೆ. ಯುವ ರೇಸರ್​​ಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಮೋಟಾರ್‌ಸ್ಪೋರ್ಟ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತೇವೆ. ಭಾರತದಲ್ಲಿ ಕ್ರೀಡೆಯನ್ನು ಬೆಳೆಸಲು ನಾವು ಒತ್ತು ನೀಡುತ್ತಿದ್ದೇವೆ. ಇದರ ಭಾಗವಾಗಿ ಈ ರೇಸ್​ನಲ್ಲಿ ಗೆದ್ದವರಿಗೆ ಸ್ಕಾಲರ್​ಶಿಪ್ ನೀಡುತ್ತಿದ್ದೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 9:34 am, Tue, 25 April 23

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us