AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chess: ಎದುರಾಳಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ ಅಮಾನತು, ವಿಡಿಯೋ

ಆಟಗಳಲ್ಲಿ ನಿಜವಾದ ಸಾಮರ್ಥ್ಯದಿಂದ ಆಟವಾಡಿ ಎದುರಾಳಿಗಳನ್ನು ಸೋಲಿಸಿ ಸಂಭ್ರಮಿಸಬೇಕು. ಅವರನ್ನು ದೈಹಿಕವಾಗಿ ಹಾನಿ ಮಾಡುವ ಮೂಲಕವಾದರೆ ಅದು ಗೆಲುವೇ ಅಲ್ಲ. ಆದರೆ ಕೆಲವರು ತಮಗೆ ಸಾಮರ್ಥ್ಯವಿಲ್ಲದಿರುವಾಗ ಅಡ್ಡ ದಾರಿಯ ಮೂಲಕ ಹೋಗಲು ನಿರ್ಧರಿಸುತ್ತಾರೆ. ಅಂಥದ್ದೇ ಒಂದು ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ದಗೆಸ್ತಾನ್ ಗಣರಾಜ್ಯದ 40 ವರ್ಷದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಪ್ರತಿಸ್ಪರ್ಧಿಗೆ ವಿಷ ಹಾಕಲು ಯತ್ನಿಸಿದ್ದರು.

Chess: ಎದುರಾಳಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ ಅಮಾನತು, ವಿಡಿಯೋ
ಚೆಸ್​
ನಯನಾ ರಾಜೀವ್
|

Updated on: Aug 09, 2024 | 8:25 AM

Share

ಸಾಮರ್ಥ್ಯದಿಂದ ಆಟವನ್ನು ಗೆಲ್ಲುವ ಬದಲು ಬೇರೆಯವರ ಜೀವಕ್ಕೆ ಕುತ್ತು ತಂದಿಟ್ಟು ಆಟವಾಡಲು ಮುಂದಾಗಿದ್ದ ರಷ್ಯಾದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಅಷ್ಟೇ ಅಲ್ಲ ರಷ್ಯಾದ ಚೆಸ್ ಫೆಡರೇಷನ್ ಆಕೆಯನ್ನು ಅಮಾನತುಗೊಳಿಸಿದೆ. ಪಂದ್ಯದ ವೇಳೆ ಪ್ರತಿಸ್ಪರ್ಧಿಯನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಆಟಗಾರ್ತಿಯನ್ನು ಚೆಸ್ ಪಂದ್ಯಾವಳಿಯಿಂದ ಆಜೀವ ಪರ್ಯಂತ ದೂರವಿಡುವ ಕುರಿತು ಚಿಂತನೆ ನಡೆಯುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 40 ವರ್ಷದ ಅಮಿನಾ ಅಬಕರೋವಾ ತನ್ನ ಎದುರಾಳಿ ಉಮೈಗಾನತ್ ಒಸ್ಮನೋವಾಗೆ ವಿಷ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಬಳಿಕ ಅಬಕರೋವಾರನ್ನು ಬಂಧಿಸಲಾಯಿತು. ನನಗೆ ಮೊದಲೇ ಉಸಿರಾಟದ ತೊಂದರೆ ಇತ್ತು, ಮತ್ತೊಬ್ಬ ಆಟಗಾರರು ಕೂಡ ಅಸ್ವಸ್ಥರಾಗಿದ್ದರು. ಬಾಯಲ್ಲಿ ಕಬ್ಬಿಣದ ರುಚಿ ಇತ್ತು.

ಸಿಸಿಟಿವಿ ದೃಶ್ಯಾವಳಿಯಲ್ಲಿ ಘಟನೆ ನಡೆದಿದೆ. ಇದರಲ್ಲಿ ಅಬಕರೋವಾ ಪಂದ್ಯಕ್ಕೆ ಕೇವಲ 20 ನಿಮಿಷಗಳ ಮೊದಲು ಚೆಸ್​ ಬೋರ್ಡ್‌ ಬಳಿ ಹೋದರು. ಕ್ಯಾಮೆರಾಗಳು ಆನ್ ಆಗಿವೆಯೇ ಎಂದು ಅವರು ಮೊದಲು ಕೇಳಿದ್ದರು. ಆದರೆ ಅದು ಸರಿ ಇಲ್ಲ ಎಂದು ಹೇಳಲಾಗಿತ್ತು. ನಂತರ ಚೆಸ್​ ಬೋರ್ಡ್​ ಮೇಲೆ ಮರ್ಕ್ಯೂರಿ ರೀತಿಯ ವಿಷಯವನ್ನು ಲೇಪಿಸಿದ್ದರು. ಆದರೆ ಆಕೆಯ ದುರಾದೃಷ್ಟ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಮತ್ತಷ್ಟು ಓದಿ: ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿ: ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್, ನಗದು ಬಹುಮಾನ ಸಿಕ್ಕಿದ್ದೆಷ್ಟು ಗೊತ್ತಾ?

ಆರೋಪಿ ಅಮಿನಾ ಅಬಕರೋವಾ ಅವರನ್ನು ಈಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಆಕೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೊವ್ ಅವರು ಘಟನೆಯ ತನಿಖೆಗಾಗಿ ಅಬಕರೋವಾ ಅವರನ್ನು ರಷ್ಯಾದ ಚೆಸ್ ಸ್ಪರ್ಧೆಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರು ಆಜೀವ ನಿಷೇಧವನ್ನು ಎದುರಿಸಬೇಕಾಗಬಹುದು.

ವಿಚಾರಣೆಯ ಬಳಿಕ ಒಸ್ಮಾನೋವಾ ಬಗ್ಗೆ ವೈಯಕ್ತಿಕ ಹಗೆತನದಿಂದಾಗಿ ವಿಷ ಹಾಕಿದ್ದೇನೆ ಎಂದು ಅಬಕರೋವಾ ಒಪ್ಪಿಕೊಂಡಿದ್ದಾರೆ. ತನ್ನ ಉದ್ದೇಶ ಉಸ್ಮಾನೋವಾ ಕೊಲೆ ಮಾಡುವುದು ಮಾಡುವುದು ಅಲ್ಲ ಆಕೆಯನ್ನು ಹೆದರಿಸುವುದು ಎಂದು ಅವಳು ಹೇಳಿಕೊಂಡಿದ್ದಾಳೆ.

ಅಬಕರೋವಾ ಅವರ ಕ್ರಮಗಳ ಬಗ್ಗೆ ದಗೆಸ್ತಾನದ ಕ್ರೀಡಾ ಸಚಿವ ಸಾಜಿದಾ ಸಾಜಿಡೋವಾ ಆಘಾತ ವ್ಯಕ್ತಪಡಿಸಿದರು. ಅದು ಹಾಜರಿದ್ದ ಎಲ್ಲರ ಜೀವಕ್ಕೆ ಕುತ್ತು ತರುವ ಆಲೋಚನೆ ಎಂದಿದ್ದಾರೆ.

ಕ್ರೀಡೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್