AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಭಜಿತ ನಾಯಕತ್ವವೇ ಮುಂದಿನ ದಾರಿ! ಟಿ-20 ವಿಶ್ವಕಪ್ ಮೇಲೆ ಕೊಹ್ಲಿಯ ನಾಯಕನ ಪಟ್ಟ ನಿಂತಿದೆ; ಸಬಾ ಕರೀಮ್‌

ಪ್ರತಿ ಸ್ವರೂಪಕ್ಕೂ ವಿಭಿನ್ನ ಶೈಲಿಗಳು ಮತ್ತು ಆಲೋಚನೆಗಳು ಅಗತ್ಯವಿರುವುದರಿಂದ ವಿಭಜಿತ ನಾಯಕತ್ವ ಅಗತ್ಯ ಎಂದು ಮಾಜಿ ವಿಕೆಟ್‌ಕೀಪರ್ ಹೇಳಿದ್ದಾರೆ.

ವಿಭಜಿತ ನಾಯಕತ್ವವೇ ಮುಂದಿನ ದಾರಿ! ಟಿ-20 ವಿಶ್ವಕಪ್ ಮೇಲೆ ಕೊಹ್ಲಿಯ ನಾಯಕನ ಪಟ್ಟ ನಿಂತಿದೆ; ಸಬಾ ಕರೀಮ್‌
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Jul 02, 2021 | 6:22 PM

Share

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡದ ಸೋಲಿನ ನಂತರ ಈ ವಿಷಯ ಮತ್ತೆ ಬಿಸಿಯಾಗಿದೆ. ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಬೆಂಕೆಂಬ ಒತ್ತಡ ತೀವ್ರಗೊಳ್ಳುತ್ತಿದೆ. ಅವರ ಸ್ಥಾನದಲ್ಲಿ ಈ ಜವಾಬ್ದಾರಿಗಳನ್ನು ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಅವರಿಗೆ ನೀಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಈಗ ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್‌, ಟ್ರೋಫಿ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಗೆಲ್ಲಲು ತಮ್ಮ ಮೇಲೆ ಸಾಕಷ್ಟು ಒತ್ತಡವಿದೆ ಎಂದು ಕೊಹ್ಲಿಗೆ ತಿಳಿದಿದೆ ಎಂದು ಹೇಳಿದ್ದಾರೆ. ಜೊತೆಗೆ ಟಿ20 ವಿಶ್ವಕಪ್ ಗೆಲುವಿನ ಮೇಲೆ​ ಕೊಹ್ಲಿಯ ನಾಯಕತ್ವ ನಿಂತಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿ 2015 ರಿಂದ ಭಾರತೀಯ ಟೆಸ್ಟ್ ತಂಡದ ನಿಯಮಿತ ನಾಯಕರಾಗಿದ್ದಾರೆ. ಅದೇ ಸಮಯದಲ್ಲಿ, 2017 ರಿಂದ ಅವರು ಏಕದಿನ ಮತ್ತು ಟಿ 20 ತಂಡಗಳ ನಾಯಕತ್ವವನ್ನು ಸಹ ಸಂಪೂರ್ಣವಾಗಿ ವಹಿಸಿಕೊಂಡರು. ಅವರ ನಾಯಕತ್ವದ ದಾಖಲೆ ಎಲ್ಲಾ ಮೂರು ಸ್ವರೂಪಗಳಲ್ಲಿ ಅತ್ಯುತ್ತಮವಾಗಿದೆ. ಆದರೆ ಅವರು ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. 2017 ರ ಚಾಂಪಿಯನ್ಸ್ ಟ್ರೋಫಿ ಮತ್ತು 2021 ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಫೈನಲ್‌ನಲ್ಲಿ ಸೋತರೆ, 2019 ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತೀಯ ತಂಡ ಸೋತಿದೆ. ಈ ಕಾರಣದಿಂದಾಗಿ, ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಲು ಧ್ವನಿ ಎತ್ತಲಾಗುತ್ತಿದೆ.

ಕೊಹ್ಲಿ ನಾಯಕತ್ವಕ್ಕೆ ಟಿ20 ವಿಶ್ವಕಪ್ ನಿರ್ಧಾರಕ ಈ ವಿಷಯದಲ್ಲಿ ಭಾರತದ ಮಾಜಿ ವಿಕೆಟ್‌ಕೀಪರ್ ಮತ್ತು ಬಿಸಿಸಿಐನ ಕ್ರಿಕೆಟ್ ಕಾರ್ಯಾಚರಣೆಗಳ ಜನರಲ್ ಮ್ಯಾನೇಜರ್ ಸಬಾ ಕರೀಮ್ ಅವರು ಕೊಹ್ಲಿಯ ಮೇಲಿನ ಒತ್ತಡ ತುಂಬಾ ಹೆಚ್ಚಾಗಿದೆ ಮತ್ತು ಈಗ ಸಮಯ ಕೂಡ ಕಡಿಮೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇಂಡಿಯಾ ನ್ಯೂಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕರೀಮ್, ಈ ವರ್ಷದ ಕೊನೆಯಲ್ಲಿ ಆಡಲಿರುವ ಟಿ 20 ವಿಶ್ವಕಪ್ ವಿರಾಟ್ ಕೊಹ್ಲಿ ಅವರ ನಾಯಕತ್ವ ವೃತ್ತಿಜೀವನಕ್ಕೆ ಬಹಳ ಮಹತ್ವದ್ದಾಗಿದೆ ಎಂದು ಸಾಬೀತುಪಡಿಸುತ್ತದೆ. ವಿರಾಟ್ ಮೇಲೆ ಒತ್ತಡ ಹೆಚ್ಚುತ್ತಿದೆ, ಅವರು ಇದುವರೆಗೂ ಒಂದೇ ಒಂದು ಐಸಿಸಿ ಟ್ರೋಪಿ ಗೆದ್ದಿಲ್ಲ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಈ ಟಿ 20 ವಿಶ್ವಕಪ್ ಅನ್ನು ಭಾರತಕ್ಕಾಗಿ ಗೆಲ್ಲುವುದು ಅವರ ಗುರಿಯಾಗಿದೆ.

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದರೆ ಅದು ವಿರಾಟ್ ಕೊಹ್ಲಿಗೆ ಸ್ವಲ್ಪ ಸಮಯವನ್ನು ನೀಡುತ್ತದೆ ಮತ್ತು ನಂತರ ಅವರು ಎಷ್ಟು ಸಮಯದವರೆಗೆ ನಾಯಕನಾಗಿರುತ್ತಾರೆ ಎಂಬುದನ್ನು ಸ್ವತಃ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಸಬಾ ಕರೀಮ್ ಹೇಳಿದ್ದಾರೆ.

ವಿಭಜಿತ ನಾಯಕತ್ವವೇ ಮುಂದಿನ ದಾರಿ ಮೂರು ಸ್ವರೂಪಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ, ಪ್ರತಿ ಸ್ವರೂಪಕ್ಕೂ ವಿಭಿನ್ನ ಶೈಲಿಗಳು ಮತ್ತು ಆಲೋಚನೆಗಳು ಅಗತ್ಯವಿರುವುದರಿಂದ ವಿಭಜಿತ ನಾಯಕತ್ವ ಅಗತ್ಯ ಎಂದು ಮಾಜಿ ವಿಕೆಟ್‌ಕೀಪರ್ ಹೇಳಿದ್ದಾರೆ. ಎಲ್ಲಾ ಸ್ವರೂಪಕ್ಕೂ ಒಬ್ಬ ಕ್ಯಾಪ್ಟನ್ ಮಾತ್ರ ಇದ್ದರೆ, ಅದು ಅವನ ಮೇಲೆ ಹೆಚ್ಚು ಹೊರೆಯಾಗುತ್ತದೆ. ಪ್ರತಿ ಸ್ವರೂಪಕ್ಕೂ ನಿಮಗೆ ಹೊಸ ಮತ್ತು ನವೀನ ಆಲೋಚನೆಗಳು ಬೇಕಾಗುತ್ತವೆ ಮತ್ತು ಅದಕ್ಕಾಗಿಯೇ ವಿಭಜಿತ ನಾಯಕತ್ವದ ಅವಶ್ಯಕವಿದೆ ಎಂದು ಸಬಾ ಕರೀಮ್ ಹೇಳಿದ್ದಾರೆ.

Follow Us
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!