ಟೆಸ್ಟ್​ ಕ್ರಿಕೆಟ್ 4 ದಿನಕ್ಕೇ ಸೀಮಿತ, ಐಸಿಸಿ ನಿರ್ಧಾರಕ್ಕೆ ‘ಕ್ರಿಕೆಟ್​ ಗಾಡ್​’ ವಿರೋಧ

ಟೆಸ್ಟ್ ಕ್ರಿಕೆಟ್​ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಮಾನಕ್ಕೆ ಕೊಹ್ಲಿ ಫಿದಾ ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ […]

ಟೆಸ್ಟ್​ ಕ್ರಿಕೆಟ್ 4 ದಿನಕ್ಕೇ ಸೀಮಿತ, ಐಸಿಸಿ ನಿರ್ಧಾರಕ್ಕೆ ‘ಕ್ರಿಕೆಟ್​ ಗಾಡ್​’ ವಿರೋಧ
ಸಾಧು ಶ್ರೀನಾಥ್​

Updated on: Jan 06, 2020 | 7:00 PM

ಟೆಸ್ಟ್ ಕ್ರಿಕೆಟ್​ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭಿಮಾನಕ್ಕೆ ಕೊಹ್ಲಿ ಫಿದಾ
ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಅಭಿಮಾನಿಯೊಬ್ಬ, ವಿಶೇಷ ಕಲಾಕೃತಿಯ ಗಿಫ್ಟ್​ನ್ನ ನೀಡಿದ್ದಾನೆ. ಕೊಹ್ಲಿ ಅಪ್ಪಟ ಅಭಿಮಾನಿ ಆಗಿರೋ ರಾಹುಲ್ ಪಾರೆಕ್, ಹಳೆಯ ಮೊಬೈಲ್ ಫೋನ್​ಗಳ ಬಿಡಿಭಾಗಗಳನ್ನ ಬಳಕೆ ಮಾಡಿ, ಕೊಹ್ಲಿಯ ಕಲಾಕೃತಿಯನ್ನ ನಿರ್ಮಿಸಿದ್ದಾನೆ. ಅಭಿಮಾನಿ ಕುಂಚದಲ್ಲಿ ಅರಳಿದ ಕಲಾಕೃತಿ ಕಂಡು ನಿಬ್ಬೆರಗಾದ ಕೊಹ್ಲಿ, ತಮ್ಮ ಹಷ್ತಾಕ್ಷರದೊಂದಿಗೆ ಫ್ಯಾನ್​ಗೆ ಶುಭಕೋರಿದ್ರು. ಈ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.

ಆಸಿಸ್ ಕ್ಲೀನ್ ಸ್ವೀಪ್
ನ್ಯೂಜಿಲೆಂಡ್ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸಿಸ್ 279ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. 416ರನ್​ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ನ್ಯೂಜಿಲೆಂಡ್, 136ರನ್​ಗೆ ಆಲೌಟ್ ಆಯ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಡೇವಿಡ್ ವಾರ್ನರ್ ಶತಕ ಬಾರಿಸಿದ್ರೆ, ಮಾರ್ನಸ್ ಲಾಬುಚಾನ್ ಅರ್ಧಶತಕ ಸಿಡಿಸಿದ್ರು. ಕಿವೀಸ್ ಪರ ಗ್ರ್ಯಾಂಡ್​ಹೋಮ್ 52ರನ್ ಗಳಿಸಿದ್ರೆ, ನಾಥನ್ ಲಿಯಾನ್ 5ವಿಕೆಟ್ ಪಡೆದ್ರು. ಇದ್ರೊಂದಿಗೆ ಆಸಿಸ್ 3-0ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡ್ತು.

ಪುತ್ರಿಯೊಂದಿಗೆ ಧೋನಿ ಎಂಜಾಯ್
ಟೀಂ ಇಂಡಿಯಾದಿಂದ ದೂರವಾಗಿರೋ ಮಹೇಂದ್ರ ಸಿಂಗ್ ಧೋನಿ, ಇದೀಗ ಮಗಳು ಝೀವಾಳೊಂದಿಗೆ ಸಖತ್ ಎಂಜಯ್ ಮಾಡ್ತಿದ್ದಾರೆ. ಇತ್ತೀಚೆಗೆ ಕುಟುಂಬದೊಂದಿಗೆ ಡೆಹ್ರಾಡೂನ್ ಪ್ರವಾಸವನ್ನ ಕೈಗೊಂಡಿದ್ರು. ಈ ವೇಳೆ ಮಾಹಿ ಪುತ್ರಿಯೊಂದಿಗೆ ಹಿಮಭರಿತ ಬೆಟ್ಟಗಳಲ್ಲಿ ಆಟವಾಡಿ, ಎಂಜಾಯ್ ಮಾಡಿದ್ರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

Published On - 6:39 pm, Mon, 6 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us