AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್

ಆಫ್ ಸ್ಪಿನ್ನರ್ ಮೊಯೀನ್ ಅಲಿ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಮತ್ತು ಫಕರ್ ಜಮಾನ್​ರನ್ನು ಕಡಿಮೆ ಸ್ಕೋರ್​ಗಳಿಗೆ ಔಟ್​ ಮಾಡಿದಾಗ ಪಾಕಿಸ್ತಾನ 95 ರ ಮೊತ್ತಕ್ಕೆ ಅರ್ಧ ಆಟಗಾರರನ್ನು ಕಳೆದುಕೊಂಡು ಚೇತರಿಸಿಕೊಳ್ಳದ ಸ್ಥಿತಿಗೆ ಸಿಲುಕಿತು.

ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್
ಅದಿಲ್ ರಶೀದ್ ಮತ್ತು ಮೊಯೀನ್ ಅಲಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 19, 2021 | 1:29 AM

Share

ಇಂಗ್ಲೆಂಡ್ ಟೀಮಿನ ಸ್ಟ್ಯಾಂಡ್-ಇನ್ ನಾಯಕ ಜೋಸ್ ಬಟ್ಲರ್ ಅವರ ಅರ್ಧ ಶತಕ (59) ಮತ್ತು ಸ್ಪಿನ್ನರ್​ಗಳು ತೋರಿದ ಆದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಹೆಡಿಂಗ್ಲೇ, ಲೀಡ್ಸ್​ನಲ್ಲಿ ರವಿವಾರದಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು 45 ರನ್​ಗಳಿಂದ ಸುಲಭವಾಗಿ ಸೋಲಿಸಿದ ಅತಿಥೇಯರು ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮ ಮಾಡಿಕೊಂಡಿದ್ದಾರೆ.

ಪಾಕಿಸ್ತಾನ ಇನ್ನಿಂಗ್ಸ್​ ಮಧ್ಯಬಾಗದಲ್ಲಿ ತಮ್ಮ ಎರಡನೇ ಸ್ಪೆಲ್​ನಲ್ಲಿ ದಾಳಿಗಿಳಿದ ಇಂಗ್ಲೆಂಡ್​ ಲೆಗ್​ ಸ್ಪಿನ್ನರ್ ಆದಿಲ್ ರಶೀದ್ ಅವರು ಮೊಹಮ್ಮದ್ ರಿಜ್ವಾನ್ ಮತ್ತು ಸೊಹೇಬ್ ಮಕ್ಸೂದ್​ ಅವರನ್ನು ಔಟ್​ ಮಾಡಿದ ನಂತರ ಪಂದ್ಯದ ಮೇಲೆ ಆಂಗ್ಲರ ಹಿಡಿತ ಬಿಗಿಯಾಯಿತು.

ಆಫ್ ಸ್ಪಿನ್ನರ್ ಮೊಯೀನ್ ಅಲಿ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಮತ್ತು ಫಕರ್ ಜಮಾನ್​ರನ್ನು ಕಡಿಮೆ ಸ್ಕೋರ್​ಗಳಿಗೆ ಔಟ್​ ಮಾಡಿದಾಗ ಪಾಕಿಸ್ತಾನ 95 ರ ಮೊತ್ತಕ್ಕೆ ಅರ್ಧ ಆಟಗಾರರನ್ನು ಕಳೆದುಕೊಂಡು ಚೇತರಿಸಿಕೊಳ್ಳದ ಸ್ಥಿತಿಗೆ ಸಿಲುಕಿತು.

ಮ್ಯಾಟ್​ ಪಾರ್ಕಿನ್ಸನ್ ಅವರ ಲೆಗ್ ಬ್ರೇಕ್ ಎಸೆತ ಆಜಂ ಖಾನ್ ಅವರನ್ನು ವಂಚಿಸಿ ಸ್ಟಂಪ್ಡ್ ಆದ ನಂತರ ವೇಗದ ಬೌಲರ್ ಸಾದಿಕ್ ಮಹಮೂದ್ ಪಾಕಿಸ್ತಾನದ ಬಾಲ ಯಾವುದೇ ಪ್ರತಿರೋಧ ತೋರದಂತೆ ಮಾಡಿದರು. ಪ್ರವಾಸಿರು 20 ಓವರ್​ಗಳಲ್ಲಿ 155/9 ಮೊತ್ತವನ್ನಷ್ಟೇ ಕಲೆಹಾಕಿದರು.

ಇದಕ್ಕೆ ಮೊದಲು ರಾಷ್ಟ್ರೀಯ ತಂಡಕ್ಕೆ ತಮ್ಮ ವಾಪಸ್ಸಾತಿಯನ್ನು ಬಟ್ಲರ್ ಟಿ20ಐ ಗಳಲ್ಲಿ ತನ್ನ 14ನೇ ಅರ್ಧ ಬಾರಿಸುವ ಮೂಲಕ ಸಂಭ್ರಮಿಸಿದರು. ಇಂಗ್ಲೆಂಡ್ 20 ನೇ ಓವರ್ ಕೊನೆ ಎಸೆತ ಬಾಕಿಯಿರುವಾಗ 200 ರನ್​ ಮೊತ್ತಕ್ಕೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು.

ಹಿಮ್ಮಡಿ ನೋವಿಗೊಳಗಾಗಿದ್ದ ಬಟ್ಲರ್ ಫಿಟ್​ ಆಗಿದ್ದಾರೆಂದು ಫಿಸಿಯೋ ಘೋಷಿಸಿದ ನಂತರ ರೆಗ್ಯುಲರ್ ನಾಯಕ ಅಯಾನ್ ಮೊರ್ಗನ್, ಟಿ20 ವಿಶ್ವಕಪ್​ಗೆ ಮೊದಲು ತಮ್ಮ ತಂಡದ ಆಟಗಾರರನ್ನು ರೊಟೇಟ್ ಮಾಡುವ ಉದ್ದೇಶದಿಂದ ರೆಸ್ಟ್ ಮಾಡುವ ನಿರ್ಧಾರವನ್ನು ಪ್ರಕಟಿಸಿದ ಮೇಲೆ ಬಟ್ಲರ್​ಗೆ ನಾಯಕತ್ವ ಜವಾಬ್ದಾರಿ ನೀಡಲಾಯಿತು.

ಮೊದಲ ಮೂರು ಓವರ್​ಗಳ ಆಟದಲ್ಲಿ ಜೇಸನ್ ರಾಯ್ ಮತ್ತು ದಾವಿದ ಮಲಾನ್ ಅವರನ್ನು ಕಳೆದುಕೊಂಡ ಇಂಗ್ಲೆಂಡ್​ ತಂಡಕ್ಕೆ ಬಟ್ಲರ್ ಮತ್ತು ಮೊಯೀನ್ 67 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಳ್ಳುವ ಮೂಲಕ ಆಸರೆಯಾದರು.

ಮೊಯೀನ್ 36 ರನ್ ಗಳಿಸಿ ವೇಗದ ಬೌಲರ್ ಮೊಹಮ್ಮದ್ ಹಸ್ನೇನ್​ಗೆ ವಿಕೆಟ್ ಒಪ್ಪಿಸಿದರು ಆದರೆ, ಬಟ್ಲರ್ ಹಿಂದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಲಿಯಾಮ್ ಲಿವಿಂಗ್​ಸ್ಟೋನ್ ಜೊತೆ ರನ್ ಗಳಿಕೆಯ ವೇಗವನ್ನು ವೃದ್ಧಿಸಿದರು.

ಬಟ್ಲರ್ ಅವರು ಹಸ್ನೇನ್​ಗೆ ಎರಡನೇ ಆಹುತಿಯಾದರೂ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಪರ ಅತಿ ವೇಗದ ಶತಕ ದಾಖಲಿಸಿದ ಫಾರ್ಮನ್ನೇ ಇಲ್ಲೂ ಮುಂದುವರೆಸಿದ ಲಿವಿಂಗ್​ಸ್ಟೋನ್ ಮತ್ತೊಂದು ರೋಮಾಂಚಕ ಇನ್ನಿಂಗ್ಸ್ ಆಡಿದರು. ಹ್ಯಾರಿಸ್ ರೌಫ್​ ಅವರ ಎಸೆತವೊಂದನ್ನು ಹೊಸದಾಗಿ ನಿರ್ಮಿಸಲಾಗಿರುವ ಫುಟ್​ಬಾಲ್​ ಸ್ಟೇಡಿಯಂ ಮೇಲಿಂದ ಸಿಕ್ಸರ್​ಗೆ ಎತ್ತಿ ದಿನದ ಬಿಗ್​ ಹಿಟ್​ ಸಹ ಅವರೇ ಬಾರಿಸಿದರು.

ಲಿವಿಂಗ್​ಸ್ಟೋನ್ 28 ಎಸೆತಗಳಲ್ಲಿ 38ರನ್ ಬಾರಿಸಿ ಔಟಾದ ನಂತರ ಕೆಳ ಕ್ರಮಾಂಕದ ಆಟಗಾರರು ಕೊನೆಯ 4 ಓವರ್​ಗಳಲ್ಲಿ 35 ರನ್ ಗಳಿಸಿ ತಂಡದ ಮೊತ್ತ ಸತತವಾಗಿ ಎರಡನೇ ಬಾರಿ 200 ಮುಟ್ಟುವಂತೆ ಮಾಡಿದರು.

ಮೊಯೀನ್ ಅಲಿ ತಮ್ಮ ಅಲ್​ರೌಂಡ್ ಆಟದ ಪ್ರದರ್ಶನಕ್ಕೆ ಪಂದ್ಯದ ವ್ಯಕ್ತಿ ಪ್ರಶಸ್ತಿ ಪಡೆದರು.

ಎರಡು ತಂಡಗಳ ನಡುವೆ ಮೂರನೇ ಮತ್ತು ನಿರ್ಣಾಯಕ ಪಂದ್ಯ ಮಂಗಳವಾರ ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: Photos: ರಜೆ ಮುಗಿಸಿ ನೆಟ್‌ ಸೆಷನ್‌ ಆರಂಭಿಸಿದ ಕೊಹ್ಲಿ ಬಳಗ; ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಬೆವರಿಳಿಸಿದ್ದು ಹೀಗೆ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು