AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಎರಡನೇ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಆರಂಭ: ಐಸಿಸಿ

ಟೆಸ್ಟ್​ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್​ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್​ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್​ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್​ಗಳಲ್ಲಿ ಭಾಗವಹಿಸಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಎರಡನೇ ಆವೃತ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಆರಂಭ: ಐಸಿಸಿ
ಜೋ ರೂಟ್​ ಮತ್ತು ವಿರಾಟ್​ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Jun 30, 2021 | 8:06 PM

Share

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಮೊದಲ ಆವೃತ್ತಿಯು ನ್ಯೂಜಿಲೆಂಡ್​ ಪಟ್ಟ ಧರಿಸುವುದರೊಂದಿಗೆ ಕೊನೆಗೊಂಡಿದೆ. ಎರಡನೇ ಆವೃತ್ತಿ ಅಂದರೆ ದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಆವೃತ್ತಿಯ ಸೈಕಲನ್ನು ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ಐಸಿಸಿ) ಇಷ್ಟರಲ್ಲೇ ಪ್ರಕಟಿಸುವುದು ಎಂದು ಈ ಹಿಂದೆ ನಾವು ಚರ್ಚಿಸಿದ್ದು ಓದುಗರಿಗೆ ನೆನಪಿರಬಹುದು. ಅದರಂತೆ ಆಗಸ್ಟ್​ ತಿಂಗಳಲ್ಲಿ ಅರಂಭಗೊಳ್ಳುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್ ಸರಣಿಯೊಂದಿಗೆ ವರಡನೇ ಡಬ್ಲ್ಯೂಟಿಸಿ ಸೈಕಲ್ ಶುರುವಾಗಲಿದೆಯೆಂದು ಐಸಿಸಿ ಬುಧವಾರ ತಿಳಿಸಿದೆ. ಮೂಲಗಳ ಪ್ರಕಾರ ಆಗಸ್ಟ್​ 2021 ರಿಂದ ಆರಂಭಗೊಂಡು ಜೂನ್ 2023ರವರಗೆ ನಡೆಯುವ ಎರಡನೇ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಕೇವಲ ಎರಡು ಮಾತ್ರ 5-ಪಂದ್ಯಗಳ ಟೆಸ್ಟ್ ಸರಣಿಗಳಾಗಿವೆ. ಮೊದಲನೆಯದ್ದು ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್​ನಲ್ಲಿ ಶುರುವಾಗುವ ಸರಣಿಯಾದರೆ ವರ್ಷಾಂತ್ಯದಲ್ಲಿ ನಡೆಯುವ ಌಶಸ್ ಎರಡನೇಯದ್ದು. ಹಾಗೆಯೇ, 2022 ರಲ್ಲಿ ಭಾರತ ಪ್ರವಾಸ ಮಾಡಲಿರುವ ಆಸ್ಟ್ರೇಲಿಯ 4-ಪಂದ್ಯಗಳ ಸರಣಿಯನ್ನಾಡಲಿದ್ದು, ಸದರಿ ಸರಣಿಯು ಎರಡನೇ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಆಯೋಜಿಸಲ್ಪಡುವ ಏಕಮಾತ್ರ 4-ಪಂದ್ಯಗಳ ಸರಣಿ ಆಗಲಿದೆ.

ಇವಲ್ಲದೆ, ಈ ಸೈಕಲ್​ನಲ್ಲಿ 3 ಪಂದ್ಯಗಳ 7 ಸರಣಿಗಳು ಮತ್ತು 2-ಪಂದ್ಯಗಳ 13 ಸರಣಿಗಳು ನಡೆಯಲಿವೆ. ಮೊದಲ ಸೈಕಲ್​ನಂತೆ ಡಬ್ಲ್ಯೂಟಿಸಿಯಲ್ಲಿ ಪಾಲ್ಗೊಳ್ಳುವ 9 ತಂಡಗಳು ಒಟ್ಟು 6 ಸರಣಿಗಳನ್ನು-3 ಸ್ವದೇಶದಲ್ಲಿ ಮತ್ತು 3 ವಿದೇಶಗಳಲ್ಲಿ ಆಡುವುದು ಮುಂದುವರಿಸಲಿವೆ.

ಆದರೆ ಟೆಸ್ಟ್​ಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇಂಗ್ಲೆಂಡ್ ಉಳಿದೆಲ್ಲ ದೇಶಗಳಿಗಿಂತ ಜಾಸ್ತಿ ಅಂದರೆ 21 ಟೆಸ್ಟ್​ಗಳನ್ನಾಡಲಿದೆ. ಎರಡನೇ ಸ್ಥಾನದಲ್ಲಿದಿರುವ ಭಾರತ 19 ಟೆಸ್ಟ್​ಗಳನ್ನಾಡಲಿದೆ. ಆಸ್ಟ್ರೇಲಿಯ 18 ಟೆಸ್ಟ್​ಗಳನ್ನಾಡಲಿದ್ದರೆ, ದಕ್ಷಿಣ ಆಫ್ರಿಕ 15 ಟೆಸ್ಟ್​ಗಳಲ್ಲಿ ಭಾಗವಹಿಸಲಿದೆ.

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಕೇವಲ 13 ಟೆಸ್ಟ್​ಗಳನ್ನಾಡಲಿದೆ. ಪಾಕಿಸ್ತಾನ ಕಿವಿಗಳಿಗಿಂತ ಒಂದು ಟೆಸ್ಟ್ ಕಡಿಮೆ ಆಡಲಿದ್ದರೆ, ವೆಸ್ಟ್​ ಇಂಡೀಸ್ ಮತ್ತು ಶ್ರೀಲಂಕಾ ಸಹ ತಲಾ 13 ಟೆಸ್ಟ್​ಗಳನ್ನಾಡಲಿವೆ.

ಡಬ್ಲ್ಯೂಟಿಸಿ 2ಕ್ಕೆ ಹೊಸ ಪಾಯಿಂಟ್ಸ್ ಪದ್ಧತಿ

ಐಸಿಸಿ ಎಲ್ಲ ಟೆಸ್ಟ್​ ಪಂದ್ಯಗಳಿಗೆ ಒಂದೇ ತೆರನಾದ ಪಾಯಿಂಟ್ಸ್​ ನೀಡುವ ನಿರ್ಧಾರ ತೆಗೆದುಕೊಂಡಿದೆ. ಟೆಸ್ಟ್​ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ 12 ಅಂಕಗಳು ಸಿಗಲಿವೆ. ಪಂದ್ಯ ಡ್ರಾ ಆದರೆ ಎರಢೂ ತಂಡಗಳಿಗೆ ತಲಾ 4 ಪಾಯಿಂಟ್ಸ್​ಗಳನ್ನು ಹಂಚಲಾಗುವುದು. ಒಂದು ಪಕ್ಷ ಪಂದ್ಯ ಟೈನಲ್ಲಿ ಅಂತ್ಯ ಕಂಡರೆ ಟೀಮುಗಳು ತಲಾ 6 ಅಂಕಗಳನ್ನು ಹಂಚಿಕೊಳ್ಳಲಿವೆ.

ಹಾಗೆಯೇ, ನಿಧಾನ ಗತಿಯ ಓವರ್​ ರೇಟ್​​ಗಳಿಗೆ ಪೆನಾಲ್ಟಿ ವಿಧಿಸುವ ನಿರ್ಧಾರವನ್ನು ಐಸಿಸಿ ತೆಗೆದುಕೊಂಡಿದೆ. ನಿಗದಿತ ಓವರ್ ರೇಟ್​ ಕಾಯ್ದುಕೊಳ್ಳದ ತಂಡಕ್ಕೆ ಅದರ ಪಾಯಿಂಟ್ಸ್ ಟ್ಯಾಲಿಯಿಂದ 1 ಅಂಕವನ್ನು ಕಡಿತಗೊಳಿಸಲಾಗುವುದು. ಶೆಡ್ಯೂಲ್ ಮತ್ತು ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಐಸಿಸಿ ಹೇಳಿದೆ.

ಮೊದಲ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಸರಣಗಳಿಗೆ ಏಕರೂಪದ ಅಂಕಗಳನ್ನು ನೀಡಲಾಗಿತ್ತು, ಟೆಸ್ಟ್​ಗಳಿಗಲ್ಲ. ‘ಹಾಗೆ ಮಾಡಿದ ಹಿಂದಿನ ಉದ್ದೇಶ, ತಂಡಗಳು ಬೇರೆ ಬೇರೆ ಸಂಖ್ಯೆಯ ಸರಣಿ ಮತ್ತು ಟೆಸ್ಟ್ ಪಂದ್ಯಗಳನ್ನಾಡಿದ್ದರೂ. ಸೈಕಲ್​ನ ಯಾವುದೇ ಹಂತದಲ್ಲಿ ಟೀಮುಗಳ ಪಾಯಿಂಟ್ಸ್ ಟ್ಯಾಲಿಯನ್ನು ಹೋಲಿಸುವುದಕ್ಕೆ ಸಾಧ್ಯವಾಗುವ ಹಾಗೆ ಸರಳೀಕರಿಸುವ ಪ್ರಯತ್ನ ಮಾಡಲಾಗಿತ್ತು,’ ಎಂದು ಐಸಿಸಿಯ ಹಂಗಾಮಿ ಮುಖ್ಯ ಕಾರ್ಯ ನಿರ್ವವಹಣಾಧಿಕಾರಿ ಜೆಫ್ ಅಲ್ಲರ್​ಡೈಸ್ ಹೇಳಿದರೆಂದು ಕ್ರೀಡಾ ವೆಬ್​ಸೈಟ್​ ವರದಿ ಮಾಡಿದೆ.

ಇದನ್ನೂ ಓದಿ: WTC Final: ಜಡೇಜಾ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್

Published On - 4:41 pm, Wed, 30 June 21

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ