AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ನಲ್ಲಿ ರಾಜಸ್ತಾನ ರಾಯಲ್ಸ್ ಆಟಗಾರರ ಮೇಲೆ TV9 ಭಾರತ​ವರ್ಷ್ ಜೆರ್ಸಿ!

ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತ​ವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ. ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತ​ವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಮಹಾ ಕ್ರಿಕೆಟ್ ಮೇಳ […]

ಐಪಿಎಲ್​ನಲ್ಲಿ ರಾಜಸ್ತಾನ ರಾಯಲ್ಸ್ ಆಟಗಾರರ ಮೇಲೆ TV9 ಭಾರತ​ವರ್ಷ್ ಜೆರ್ಸಿ!
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 09, 2020 | 9:38 PM

Share

ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತ​ವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ.

ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತ​ವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಹಾ ಕ್ರಿಕೆಟ್ ಮೇಳ ಸೆಪ್ಟಂಬರ್​ವರೆಗೆ ಮುಂದೂಡಲ್ಪಟ್ಟಿದೆ.

TV9 ನೆಟ್​ವರ್ಕ್ ಮತ್ತು ರಾಜಸ್ತಾನ ರಾಯಲ್ಸ್ ಹೆಚ್ಚಿನದನ್ನು ಸಾಧಿಸುವ ಬಗ್ಗೆ ಹೆಮ್ಮೆಪಡುತ್ತಿವೆ, ಆದರೆ ಅದು ಈ ಎರಡೂ ಗುಂಪುಗಳು ತಮ್ಮ ತಮ್ಮ ವಹಿವಾಟಿನಲ್ಲಿ ಅವಿಷ್ಕಾರ ಮಾಡುವುದನ್ನು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ರಾಯಲ್ಸ್ ತಂಡವು ಮುಂಬರುವ ಸೀಸನ್​ನಲ್ಲಿ ತನ್ನಲ್ಲಿರುವ ಅಪ್ರತಿಮ ಕ್ರಿಕೆಟ್ ಕಂಟೆಂಟನ್ನು TV9 ನ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಹಂಚಿಕೊಳ್ಳುವುದಕ್ಕೆ ಎದುರು ನೋಡುತ್ತಿದೆ, ಎಂದು ತಂಡದ ಪ್ರಕಟಣೆ ತಿಳಿಸಿದೆ.

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ TV9 ನೆಟ್​ವರ್ಕ್​ನ ಸಿಈಒ, ಬರುನ್ ದಾಸ್, ‘‘ಭಾರತದಲ್ಲೀಗ ಕ್ರಿಕೆಟ್​ ಕೇವಲ ಕ್ರೀಡೆ ಮಾತ್ರವಾಗಿರದೆ, ಒಂದು ಧರ್ಮವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲೇ ಭಾರತದ ಅತಿ ದೊಡ್ಡ ಸುದ್ದ್ದಿ ಜಾಲವಾಗಿರುವ TV9 ನೆಟ್​ವರ್ಕ್, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ತಾನ ರಾಯಲ್ಸ್ ತಂಡದೊಂದಿಗೆ ಪಾಲುದಾರಿಕೆ ಹೊಂದಿದೆ.’’ ಎಂದು ಹೇಳಿದರು.

‘‘ನಮ್ಮ ರಾಷ್ಟ್ರೀಯ ಹಿಂದಿ ನ್ಯೂಸ್ ಚ್ಯಾನೆಲ್ TV9 ಭಾರತ​ವರ್ಷ್ ದೇಶದ ಚ್ಯಾನೆಲ್ ಎರಡನೇ ಅತಿ ಜನಪ್ರಿಯ ಚ್ಯಾನೆಲ್ ಎನಿಸಿಕೊಳ್ಳುವಲ್ಲಿ ತೋರಿರುವ ಅಸಾಧಾರಣ ಪ್ರಗತಿಯು, ವೀಕ್ಷಕರು ನೈಜ್ಯ ಸುದ್ದಿ ಮಾತ್ರವಲ್ಲದೆ ಸುದ್ದಿ ಒದಗಿಸುವ ವಿಧಾನದಲ್ಲೂ ಹೊಸ ಅವಿಷ್ಕಾರಗಳನ್ನು ಬಯಸುತ್ತಾರೆ ಎಂದು ನಿರೂಪಿಸುತ್ತದೆ, ಎಂದು ದಾಸ್ ಹೇಳಿದರು.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?