AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ನಲ್ಲಿ ರಾಜಸ್ತಾನ ರಾಯಲ್ಸ್ ಆಟಗಾರರ ಮೇಲೆ TV9 ಭಾರತ​ವರ್ಷ್ ಜೆರ್ಸಿ!

ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತ​ವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ. ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತ​ವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಮಹಾ ಕ್ರಿಕೆಟ್ ಮೇಳ […]

ಐಪಿಎಲ್​ನಲ್ಲಿ ರಾಜಸ್ತಾನ ರಾಯಲ್ಸ್ ಆಟಗಾರರ ಮೇಲೆ TV9 ಭಾರತ​ವರ್ಷ್ ಜೆರ್ಸಿ!
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 09, 2020 | 9:38 PM

Share

ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತ​ವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ.

ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತ​ವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಹಾ ಕ್ರಿಕೆಟ್ ಮೇಳ ಸೆಪ್ಟಂಬರ್​ವರೆಗೆ ಮುಂದೂಡಲ್ಪಟ್ಟಿದೆ.

TV9 ನೆಟ್​ವರ್ಕ್ ಮತ್ತು ರಾಜಸ್ತಾನ ರಾಯಲ್ಸ್ ಹೆಚ್ಚಿನದನ್ನು ಸಾಧಿಸುವ ಬಗ್ಗೆ ಹೆಮ್ಮೆಪಡುತ್ತಿವೆ, ಆದರೆ ಅದು ಈ ಎರಡೂ ಗುಂಪುಗಳು ತಮ್ಮ ತಮ್ಮ ವಹಿವಾಟಿನಲ್ಲಿ ಅವಿಷ್ಕಾರ ಮಾಡುವುದನ್ನು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ರಾಯಲ್ಸ್ ತಂಡವು ಮುಂಬರುವ ಸೀಸನ್​ನಲ್ಲಿ ತನ್ನಲ್ಲಿರುವ ಅಪ್ರತಿಮ ಕ್ರಿಕೆಟ್ ಕಂಟೆಂಟನ್ನು TV9 ನ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಹಂಚಿಕೊಳ್ಳುವುದಕ್ಕೆ ಎದುರು ನೋಡುತ್ತಿದೆ, ಎಂದು ತಂಡದ ಪ್ರಕಟಣೆ ತಿಳಿಸಿದೆ.

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ TV9 ನೆಟ್​ವರ್ಕ್​ನ ಸಿಈಒ, ಬರುನ್ ದಾಸ್, ‘‘ಭಾರತದಲ್ಲೀಗ ಕ್ರಿಕೆಟ್​ ಕೇವಲ ಕ್ರೀಡೆ ಮಾತ್ರವಾಗಿರದೆ, ಒಂದು ಧರ್ಮವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲೇ ಭಾರತದ ಅತಿ ದೊಡ್ಡ ಸುದ್ದ್ದಿ ಜಾಲವಾಗಿರುವ TV9 ನೆಟ್​ವರ್ಕ್, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ತಾನ ರಾಯಲ್ಸ್ ತಂಡದೊಂದಿಗೆ ಪಾಲುದಾರಿಕೆ ಹೊಂದಿದೆ.’’ ಎಂದು ಹೇಳಿದರು.

‘‘ನಮ್ಮ ರಾಷ್ಟ್ರೀಯ ಹಿಂದಿ ನ್ಯೂಸ್ ಚ್ಯಾನೆಲ್ TV9 ಭಾರತ​ವರ್ಷ್ ದೇಶದ ಚ್ಯಾನೆಲ್ ಎರಡನೇ ಅತಿ ಜನಪ್ರಿಯ ಚ್ಯಾನೆಲ್ ಎನಿಸಿಕೊಳ್ಳುವಲ್ಲಿ ತೋರಿರುವ ಅಸಾಧಾರಣ ಪ್ರಗತಿಯು, ವೀಕ್ಷಕರು ನೈಜ್ಯ ಸುದ್ದಿ ಮಾತ್ರವಲ್ಲದೆ ಸುದ್ದಿ ಒದಗಿಸುವ ವಿಧಾನದಲ್ಲೂ ಹೊಸ ಅವಿಷ್ಕಾರಗಳನ್ನು ಬಯಸುತ್ತಾರೆ ಎಂದು ನಿರೂಪಿಸುತ್ತದೆ, ಎಂದು ದಾಸ್ ಹೇಳಿದರು.

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು