AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Open: ಅರ್ಹತಾ ಪಂದ್ಯಗಳಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ; ಮೊದಲ ಸುತ್ತಿನಲ್ಲಿಯೇ ಸೋತ ಸ್ಟಾರ್ ಆಟಗಾರರು

US Open: ಭಾರತದ ಸುಮಿತ್ ನಾಗಲ್ ಮತ್ತು ರಾಮಕುಮಾರ್ ರಾಮನಾಥನ್ ಇಬ್ಬರೂ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಹೊರಬಿದ್ದರು. ಈ ರೀತಿಯಾಗಿ, ಗ್ರ್ಯಾಂಡ್ ಸ್ಲಾಮ್ ಸ್ಪರ್ಧೆಗಳಲ್ಲಿ ಭಾರತೀಯ ಟೆನಿಸ್ ಆಟಗಾರರ ಹೋರಾಟವೂ ಮುಂದುವರಿಯಿತು.

US Open: ಅರ್ಹತಾ ಪಂದ್ಯಗಳಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ; ಮೊದಲ ಸುತ್ತಿನಲ್ಲಿಯೇ ಸೋತ ಸ್ಟಾರ್ ಆಟಗಾರರು
ಸುಮಿತ್ ನಾಗಲ್
TV9 Web
| Edited By: |

Updated on: Aug 25, 2021 | 5:43 PM

Share

ಆಗಸ್ಟ್ 30 ರಿಂದ ಯುಎಸ್ ಓಪನ್‌ಗೆ ಅರ್ಹತಾ ಪಂದ್ಯಗಳು ಆರಂಭವಾಗಿವೆ. ಆದರೆ ಮೂವರು ಭಾರತೀಯ ಆಟಗಾರರು ಮೊದಲ ಸುತ್ತಿನಲ್ಲಿ ಸೋತು ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ. ಭಾರತದ ಸುಮಿತ್ ನಾಗಲ್ ಮತ್ತು ರಾಮಕುಮಾರ್ ರಾಮನಾಥನ್ ಇಬ್ಬರೂ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಹೊರಬಿದ್ದರು. ಈ ರೀತಿಯಾಗಿ, ಗ್ರ್ಯಾಂಡ್ ಸ್ಲಾಮ್ ಸ್ಪರ್ಧೆಗಳಲ್ಲಿ ಭಾರತೀಯ ಟೆನಿಸ್ ಆಟಗಾರರ ಹೋರಾಟವೂ ಮುಂದುವರಿಯಿತು.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಗಲ್ 5-7, 6-4, 3-6ರಲ್ಲಿ ಅರ್ಜೆಂಟೀನಾದ ಜುವಾನ್ ಪ್ಯಾಬ್ಲೊ ಫಿಕೊವಿಚ್ ವಿರುದ್ಧ ಸೋತರು. ಈ ಪಂದ್ಯವು ಎರಡು ಗಂಟೆ 22 ನಿಮಿಷಗಳ ಕಾಲ ನಡೆಯಿತು. ನಾಗಲ್ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ನ ಮುಖ್ಯ ಡ್ರಾದಲ್ಲಿ ಭಾಗವಹಿಸಿದ್ದರು ಆದರೆ ಮೊದಲ ಸುತ್ತಿನಲ್ಲಿ ಸೋತರು. ಅವರು ಫ್ರೆಂಚ್ ಓಪನ್‌ಗೆ ಅರ್ಹತೆ ಪಡೆಯಲಿಲ್ಲ. ಜೊತೆಗೆ ಗಾಯದಿಂದಾಗಿ ವಿಂಬಲ್ಡನ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲಿಲ್ಲ.

ಮೊದಲ ಸುತ್ತಿನಲ್ಲಿ ಭಾರತದ ಅಗ್ರ ಆಟಗಾರರು ಔಟ್ ಮೊದಲ ಸೆಟ್ ಗೆದ್ದರೂ, ಎರಡು ಗಂಟೆ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ರಾಮಕುಮಾರ್ 6-4, 6-7 (1), 4-6 ರಲ್ಲಿ ರಷ್ಯಾದ ಎವ್ಗೆನಿ ಡಾನ್ಸ್ಕೊಯ್ ವಿರುದ್ಧ ಸೋತರು. 2014 ರಿಂದ ಗ್ರ್ಯಾಂಡ್ ಸ್ಲಾಮ್ ನ ಮುಖ್ಯ ಸುತ್ತಿಗೆ ಪ್ರವೇಶಿಸಲು ಇದು ರಾಮಕುಮಾರ್ ಅವರ 21 ನೇ ಪ್ರಯತ್ನವಾಗಿದೆ. ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ, ಭಾರತೀಯರು ಈಗ ಕೆನಡಾದ ಬ್ರೈಡನ್ ಶಾನರ್ ವಿರುದ್ಧ ಸೆಣಸಲಿರುವ ಪ್ರಜ್ನೇಶ್ ಗುನ್ನೇಶ್ವರನ್ ಮೇಲೆ ಕಣ್ಣಿಟ್ಟಿದ್ದಾರೆ. ಅಂಕಿತಾ ರೈನಾ ಮೊದಲ ಸುತ್ತಿನಲ್ಲಿ ಅಮೆರಿಕದ ಜೇಮಿ ಲೋಬ್ ವಿರುದ್ಧ ಸೋತ ನಂತರ ಮಹಿಳೆಯರ ಸಿಂಗಲ್ಸ್ ಅರ್ಹತಾ ಸುತ್ತಿನಿಂದ ಹೊರಬಿದ್ದರು.

ಯುಎಸ್ ಓಪನ್ ಆಗಸ್ಟ್ 30 ರಿಂದ ಆರಂಭವಾಗಲಿದೆ ಟೆನಿಸ್ ಪ್ರೇಮಿಗಳು ಈಗ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ, ಈ ತಿಂಗಳಿನಿಂದ ಆರಂಭವಾಗುವ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಇದು. ಯುಎಸ್ ಓಪನ್ ಆಗಸ್ಟ್ 30 ರಂದು ಆರಂಭವಾಗುತ್ತದೆ ಮತ್ತು ಅದರ ಶೀರ್ಷಿಕೆ ಪಂದ್ಯವು ಸೆಪ್ಟೆಂಬರ್ 12 ರಂದು ನಡೆಯಲಿದೆ. ಈ ಬಾರಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳ ವಿಜೇತರು 2019 ಕ್ಕಿಂತ 35 % ಕಡಿಮೆ ಬಹುಮಾನವನ್ನು ಪಡೆಯುತ್ತಾರೆ. ವರ್ಷದ ಅಂತಿಮ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಾಗಿ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಅನುಮತಿಸಲಾಗುವುದು. ಆದರೆ ಅರ್ಹತಾ ಸುತ್ತಿನ ಜೊತೆಗೆ ಮುಖ್ಯ ಡ್ರಾ ಮೊದಲ 3 ಸುತ್ತಿನ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ.

Follow Us
Web contact
Web contact

TV9 Kannada

Read More
ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ
ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ