AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೂ ಅದಕ್ಕೂ ಸಂಬಂಧವಿಲ್ಲ; ರಾಯುಡು ತ್ರಿಡಿ ಪ್ಲೇಯರ್ ಟ್ಯಾಗ್ ಬಗ್ಗೆ ವಿಜಯ್ ಶಂಕರ್​ ಹೇಳಿದ್ದೇನು?

ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ತ್ರಿಡಿ ಪ್ಲೇಯರ್ ಎಂಬ ಟ್ಯಾಗ್ ಅನ್ನ ನನ್ನ ಹೆಸರಿಗೆ ತಳುಕು ಹಾಕಿದ್ರು. ನನ್ನ ಮತ್ತು ರಾಯುಡು ನಡುವೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ.

ನನಗೂ ಅದಕ್ಕೂ ಸಂಬಂಧವಿಲ್ಲ; ರಾಯುಡು ತ್ರಿಡಿ ಪ್ಲೇಯರ್ ಟ್ಯಾಗ್ ಬಗ್ಗೆ ವಿಜಯ್ ಶಂಕರ್​ ಹೇಳಿದ್ದೇನು?
ವಿಜಯ್ ಶಂಕರ್, ಅಂಬಟಿ ರಾಯುಡು
ಪೃಥ್ವಿಶಂಕರ
|

Updated on: May 19, 2021 | 5:19 PM

Share

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದು ತ್ರಿಡಿ ಪ್ಲೇಯರ್ ಎಂದು ಟ್ರೋಲ್ ಆಗ್ತಿದ್ದ ವಿಜಯ್ ಶಂಕರ್ ಮೊದಲ ಬಾರಿಗೆ, ತ್ರಿಡಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ತ್ರಿಡಿ ಡೈಮನ್ಷನ್.. 2019ರ ಏಕದಿನ ವಿಶ್ವಕಪ್ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಪದಗಳಿವು. ಅಂಬಟಿ ರಾಯುಡು ಬದಲು.. ವಿಜಯ್ ಶಂಕರ್ನನ್ನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದ ಎಮ್ಎಸ್ಕೆ ಪ್ರಸಾದ್, ಬಾಯಿಂದ ಹೊರಬಿದ್ದ ಅಣಿ ಮುತ್ತುಗಳಿವು.

ಶಂಕರ್ ಮೂರು ಆಯಾಮಗಳಲ್ಲಿ ಆಡುವ ಆಟಗಾರ. ಯಾಕಂದ್ರೆ ಆತ ಬ್ಯಾಟಿಂಗ್ ಬೌಲಿಂಗ್ ಮಾಡ್ತಾನೆ. ಇಂಗ್ಲೆಂಡ್ನ ಕಂಡೀಷನ್ ಕೂಡ ಆತನಿಗೆ ಸೂಕ್ತವಾಗುತ್ತೆ. -ಎಂ.ಎಸ್.ಕೆ ಪ್ರಸಾದ್, ಸೆಲೆಕ್ಷನ್ ಕಮಿಟಿ ಮಾಜಿ ಮುಖ್ಯಸ್ಥ

ಎಮ್ಎಸ್ಕೆ ಪ್ರಸಾದ್ ಹೇಳಿದ ಈ ಮಾತಿಗೆ ಅಂಬಟಿ ರಾಯುಡು ಕೆಂಡಾಮಂಡಲವಾಗಿದ್ರು. ಈ ಬಾರಿಯ ವಿಶ್ವಕಪ್ ಟೂರ್ನಿ ನೋಡಲು 3D ಕನ್ನಡಕ ಬೇಕು ಎಂದು ಟ್ವೀಟ್ ಮಾಡಿ ಆಯ್ಕೆ ಸಮಿತಿ ಕಾಲೆಳೆದಿದ್ದರು. ನಂತರ ವಿಜಯ್ ಶಂಕರ್ ಪ್ಲಾಫ್ ಆದಾಗಲೆಲ್ಲಾ, ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಶಂಕರ್ ತ್ರಿಡಿ ಟ್ಯಾಗ್ ಬಳಸಿ ಟ್ರೋಲ್ ಮಾಡಲು ಶುರುಮಾಡಿದ್ರು.

ಆದ್ರೀಗ ಮೂರು ವರ್ಷಗಳ ಬಳಿಕ ವಿಜಯ್ ಶಂಕರ್ ತ್ರಿಡಿ ಪ್ಲೇಯರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ತ್ರಿಡಿ ಪ್ಲೇಯರ್ ಎಂಬ ಟ್ಯಾಗ್ ಅನ್ನ ನನ್ನ ಹೆಸರಿಗೆ ತಳುಕು ಹಾಕಿದ್ರು. ನನ್ನ ಮತ್ತು ರಾಯುಡು ನಡುವೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ..

ನನಗೂ ಅದಕ್ಕು ಸಂಬಂಧವಿಲ್ಲ. ನನಗೂ ಅದಕ್ಕೂ ಸಂಬಂಧವೇ ಇಲ್ಲ. 3D ಪ್ಲೇಯರ್ ಎಂಬ ಟ್ಯಾಗ್‌ನ್ನು ಸುಮ್ಮನೆ ನನ್ನ ಹೆಸರಿನ ಜೊತೆ ತಳುಕು ಹಾಕಿದರು ಮತ್ತು ಅದನ್ನು ವೈರಲ್ ಮಾಡಿದರು. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಪರ 3 ಪಂದ್ಯಗಳನ್ನಾಡಿ ಒಳ್ಳೆಯ ಪ್ರದರ್ಶನವನ್ನೂ ನೀಡಿದೆ, ನಾನೇನು ಕೆಟ್ಟ ಪ್ರದರ್ಶನವನ್ನು ನೀಡಲಿಲ್ಲ.’’ – ವಿಜಯ್ ಶಂಕರ್, ಟೀಮ್ ಇಂಡಿಯಾ ಆಟಗಾರ

ಇಷ್ಟೇ ಅಲ್ಲ.. ನನ್ನ ಮತ್ತು ರಾಯುಡು ನಡುವೆ ಯಾವುದೇ ವೈಮನಸ್ಸಿಲ್ಲ. ನಾವು ಭೇಟಿಯಾದಾಗ ಚೆನ್ನಾಗಿ ಮಾತನಾಡುತ್ತೇವೆ ಎಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ನನ್ನ ಮತ್ತು ರಾಯುಡು ಬ್ಯಾಟಿಂಗ್ ಕ್ರಮಾಂಕಕ್ಕೂ ತುಂಬಾ ವ್ಯತ್ಯಾಸವಿದೆ. ಅದನ್ನ ಗಮನಿಸದೆ ಮನರಂಜನೆಗೋಸ್ಕರ ತಮಗೆ ಬೇಕಾದ ರೀತಿಯಲ್ಲಿ ಟ್ರೋಲ್ ಮಾಡುತ್ತಾರೆ ಎಂದಿದ್ದಾರೆ.

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..