AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ; ಕೊಂಡಾಡಿದ ಶಿವಲಾಲ್​ ಯಾದವ್​ ಸಹೋದರಿ

Virat Kohli donates: ತಾರಾ ದಂಪತಿಯಾದ ವಿರಾಟ್​ ಕೊಹ್ಲಿ - ಅನುಷ್ಕಾ ಅವರು ಈ ಆಂದೋಲನದ ಮುಖಾಂತರ ಅಂದಾಜು 11 ಕೋಟಿ ರೂಪಾಯಿಗೂ ಹೆಚ್ಚು ಧನ ಸಂಗ್ರಹಿಸಿದರು. ಕೋವಿಡ್​ ಸೋಂಕಿತರಿಗೆ ನೆರವಾಗಲೆಂದು ಖುದ್ದಾಗಿ ವಿರಾಟ್​ ಕೊಹ್ಲಿ ದಂಪತಿ ಸಹ ಕೋಟಿ ರೂ ದೇಣಿಗೆ ನೀಡಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ; ಕೊಂಡಾಡಿದ ಶಿವಲಾಲ್​ ಯಾದವ್​ ಸಹೋದರಿ
ವಿರಾಟ್​ ಕೊಹ್ಲಿ
ಸಾಧು ಶ್ರೀನಾಥ್​
|

Updated on: May 20, 2021 | 12:16 PM

Share

ಶ್ರಾವಂತಿ ನಾಯ್ಡು ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ. ಅವರ ತಾಯಿ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಅದೇ ವೇಳೆಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅವರು ಮುಂದೂಡಲ್ಪಟ್ಟಿರುವ IPL 2021 ಟೂರ್ನಿಯಿಂದಾಗ ಮನೆ ಸೇರಿಕೊಂಡರು. ಸರಿಯಾಗಿ ಆ ವೇಳೆಯಲ್ಲೇ ಅವರ ತಾರಾ ಪತ್ನಿ ಅನುಷ್ಕಾ ಶರ್ಮಾ ಅವರು ಕೊವೀಡ್​ ಸೋಂಕಿತರಿಗೆ ನೆರವಾಗಬೇಕೆಂದು ತಮ್ಮ ನಿಧಿ ಸಂಗ್ರಹ ಕಾರ್ಯಕ್ಕೆ ಮುಂದಾದರು. ತಾರಾ ದಂಪತಿಯಾದ ವಿರಾಟ್​ ಕೊಹ್ಲಿ – ಅನುಷ್ಕಾ ಅವರು ಈ ಆಂದೋಲನದ ಮುಖಾಂತರ ಅಂದಾಜು 11 ಕೋಟಿ ರೂಪಾಯಿಗೂ ಹೆಚ್ಚು ಧನ ಸಂಗ್ರಹಿಸಿದರು. ಕೋವಿಡ್​ ಸೋಂಕಿತರಿಗೆ ನೆರವಾಗಲೆಂದು ಖುದ್ದಾಗಿ ವಿರಾಟ್​ ಕೊಹ್ಲಿ ದಂಪತಿ ಸಹ ಕೋಟಿ ರೂ ದೇಣಿಗೆ ನೀಡಿದ್ದಾರೆ.

ಈ ಮಧ್ಯೆ ನಿನ್ನೆ ಬುಧವಾರ ಕ್ಯಾಪ್ಟನ್ ವಿರಾಟ್​ ಕೊಹ್ಲಿ ತಮ್ಮ ಸಹೋದ್ಯೋಗಿ ಆಟಗಾರ್ತಿಗೆ ಆರ್ಥಿಕ ನೆರವು ನೀಡಿ, ಸತ್ಕಾರ್ಯ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿ ಎಸ್​ ಕೆ ಸುಮನ್​ ಅವರ ಚಿಕಿತ್ಸೆಗೆಂದು ₹6.77 ಲಕ್ಷ ಆರ್ಥಿಕ ದೇಣಿಗೆ ನೀಡಿದ್ದಾರೆ.

ಮಾಜಿ ಸ್ಪಿನ್​ ಬೌಲರ್​ ಶಿವಲಾಲ್​ ಯಾದವ್​ ಅವರ ಸಹೋದರಿ, ಬಿಸಿಸಿಐ ದಕ್ಷಿಣ ವಲಯ ಸಂಯೋಜಕಿ ಎನ್​ ವಿದ್ಯಾ ಯಾದವ್​ ಅವರು ಶ್ರಾವಂತಿ ನಾಯ್ಡು ಅವರ ತಾಯಿಗೆ ಆರ್ಥಕ ನೆರವಿನ ಅಗತ್ಯವಿದೆ ಎಂದು ಟ್ವಿಟ್ಟರ್​ನಲ್ಲಿ ಗಮನ ಸೆಳೆದಿದ್ದರು. ಮತ್ತು ಆಟ ಟ್ವೀಟ್​ ಅನ್ನು ವಿರಾಟ್​ ಕೊಹ್ಲಿಗೆ ಟ್ಯಾಗ್​ ಮಾಡಿದ್ದರು. ಸುಮನ್​ ಅವರ ಕೋವಿಡ್ ಚಿಕಿತ್ಸೆಗೆಂದು ಅದಾಗಲೇ 16 ಲಕ್ಷ ರೂಪಾಯಿ ಖರ್ಚು ಮಡಲಾಗಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಇದನ್ನು ಕಂಡು ಕರಗಿದ ವಿರಾಟ್​ ಕೊಹ್ಲಿ ದಂಪತಿ ತಕ್ಷಣ ಶ್ರಾವಂತಿ ನಾಯ್ಡು ಅವರತ್ತ ನೆರವಿನಹಸ್ತ ಚಾಚಿದ್ದಾರೆ. ಈ ಸಕಾಲಿಕ, ಅಮೂಲ್ಯ ನೆರವನ್ನು ಕಂಡು ವಿರಾಟ್​ ಕೊಹ್ಲಿ ದಂಪತಿಯನ್ನು ವಿದ್ಯಾ ಯಾದವ್​ ಕೊಂಡಾಡಿದ್ದಾರೆ.

(Virat Kohli donates rs 6.77 lakh for covid 19 treatment of former women cricketer Sravanthi Naidu mother SK Suman)

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ