AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಐಸಿಸಿ ಟ್ರೋಫಿ ಬಗ್ಗೆ ಮಾತಾಡ್ತೀರಿ, ಆದ್ರೆ ಕೊಹ್ಲಿ ಇನ್ನೂ IPL ಟ್ರೋಫಿಯನ್ನೇ ಗೆದ್ದಿಲ್ಲ’

ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಭಾರತ ತಂಡ ಕೂದಲೆಳೆಯಲ್ಲಿ ಮೂರು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿದೆ. ಚಾಂಪಿಯನ್​ಟ್ರೋಫಿ 2017, 2019 ವಿಶ್ವಕಪ್ ಮತ್ತು ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್.

'ನೀವು ಐಸಿಸಿ ಟ್ರೋಫಿ ಬಗ್ಗೆ ಮಾತಾಡ್ತೀರಿ, ಆದ್ರೆ ಕೊಹ್ಲಿ ಇನ್ನೂ IPL ಟ್ರೋಫಿಯನ್ನೇ ಗೆದ್ದಿಲ್ಲ'
Virat Kohli
Follow us
TV9 Web
| Updated By: Vinay Bhat

Updated on: Jul 12, 2021 | 11:46 AM

ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ನಲ್ಲಿ ಸೋಲುಕಂಡ ಬಳಿಕ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕಳೆದ ಕೆಲವು ಸಮಯದಿಂದ ಕೊಹ್ಲಿ ಬ್ಯಾಟ್​ನಿಂದ ಶತಕವೂ ಬಂದಿಲ್ಲ, ಹೇಳಿಕೊಳ್ಳುವಂತಹ ಇನ್ನಿಂಗ್ಸ್​ ಕೂಡ ಆಡಿಲ್ಲ. ಇದರ ನಡುವೆ ಸೋಲಿನ ಹೊಡೆತದಿಂದಾಗಿ ಕೊಹ್ಲಿ ನಾಯಕತ್ವದ ಬಗ್ಗೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ.

ಹೀಗಿರುವಾಗ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರು ಕೊಹ್ಲಿ ಮತ್ತು ಅವರ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ನನಗನಿಸುವ ಪ್ರಕಾರ ವಿರಾಟ್ ಕೊಹ್ಲಿ ನಂಬರ್ ಒನ್ ನಾಯಕ. ಅವರ ದಾಖಲಗಳೇ ಅವರ ಬಗ್ಗೆ ಹೇಳುತ್ತವೆ. ವಿಶ್ವದಲ್ಲಿ ನಂಬರ್ 1 ಬ್ಯಾಟ್ಸ್​ಮನ್ ಎಂದರೆ ಅದು ಕೊಹ್ಲಿ. ಎಲ್ಲರು ಐಸಿಸಿ ಟ್ರೋಫಿ ಸೋತ ಬಗ್ಗೆ ಮಾತನಾಡುತ್ತಾರೆ. ಆದರೆ ಕೊಹ್ಲಿ ಇನ್ನೂ ಐಪಿಎಲ್ ಟ್ರೋಫಿಯನ್ನೇ ಗೆದ್ದಿಲ್ಲ. ಇದಕ್ಕೆ ಒಂದಿಷ್ಟು ಸಮಯ ಬೇಕು. ಮುಂದಿನ ದಿನಗಳಲ್ಲಿ ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಬರಲಿದೆ. ಫೈನಲ್​ಗೆ ತಲುಪುವುದು ಅಷ್ಟೊಂದು ಸುಲಭವಲ್ಲ. ಕೆಲವು ಬಾರಿ ತಪ್ಪುಗಳಾಗುತ್ತದೆ” ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಭಾರತ ತಂಡ ಕೂದಲೆಳೆಯಲ್ಲಿ ಮೂರು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿದೆ. ಚಾಂಪಿಯನ್​ಟ್ರೋಫಿ 2017, 2019 ವಿಶ್ವಕಪ್ ಮತ್ತು ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್. ಈ ಮೂರರಲ್ಲೂ ಭಾರತ ಗೆಲುವು ಸಾಧಿಸಿಬಹುದಿತ್ತು. ಆದರೆ, ಅಂತಿಮ ಹಂತದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಟ್ರೋಫಿ ಕೈಚೆಲ್ಲಿತು.

ಇನ್ನೂ ಐಪಿಎಲ್ ವಿಚಾರವಾಗಿಯೂ ಮಾತನಾಡಿರುವ ರೈನಾ, ಧೋನಿ ಐಪಿಎಲ್ 2022 ರಲ್ಲಿ ಕಣಕ್ಕಿಳಿಯುವುದಿಲ್ಲ ಎಂದಾದರೆ ನಾನುಕೂಡ ಆಡುವುದಿಲ್ಲ ಎಂದು ಹೇಳಿದ್ದಾರೆ.

“ನನ್ನಲ್ಲಿ ಕ್ರಿಕೆಟ್ ಆಡುವ ಶಕ್ತಿ ಇನ್ನೂ 4-5 ವರ್ಷಗಳಿವೆ. ಈ ವರ್ಷ ಐಪಿಎಲ್ ಆದ ಬಳಿಕ ಮುಂದಿನ ವರ್ಷ ಇನ್ನೆರಡು ತಂಡಗಳು ಸೇರ್ಪಡೆ ಆಗಲಿದೆ. ನಾನು ಐಪಿಎಲ್ ಆಡಿದರೆ ಅದು ಸಿಎಸ್​ಕೆ ತಂಡಕ್ಕಾಗಿ ಮಾತ್ರ. ಧೋನಿ ಮುಂದಿನ ಸೀಸನ್​ನಲ್ಲಿ ಆಡಲ್ಲ ಎಂದಾದರೆ ನಾನುಕೂಡ ಕಣಕ್ಕಿಳಿಯುವುದಿಲ್ಲ. 2008 ರಿಂದ ಸಿಎಸ್​ಕೆ ತಂಡದಲ್ಲಿ ನಾವಿಬ್ಬರು ಒಟ್ಟಿಗೆ ಆಡುತ್ತಿದ್ದೇವೆ. ಈ ವರ್ಷ ನಾವು ಕಪ್ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಗೆದ್ದರೆ ಮುಂದಿನ ವರ್ಷಕೂಡ ಧೋನಿಯನ್ನು ಆಡಲು ಮನವೊಲಿಸುತ್ತೇನೆ” ಎಂದು ರೈನಾ ಹೇಳಿದ್ದಾರೆ.

(VIDEO) IND vs SL: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಆಟ: ಟೀಮ್ ಇಂಡಿಯಾಕ್ಕೆ ಹೊಸ ಓಪನರ್ ಫಿಕ್ಸ್

EURO 2020 Final: ರೋಚಕ ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು 53 ವರ್ಷಗಳ ಬಳಿಕ ಯುರೋ ಕಪ್ ಗೆದ್ದ ಇಟಲಿ

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ