AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಲಿಂಗ್ ಸ್ಪರ್ಧೆ: ಟೋಕಿಯೋ ಒಲಂಪಿಕ್ಸ್​ನಲ್ಲಿ ಬಾಗವಹಿಸುವ ಅವಕಾಶ ಗಿಟ್ಟಿಸಿದ ಬೆಂಗಳೂರು ಎಂ​ಇಜಿಯ ಸುಬೇದಾರ್ ವಿಷ್ಣು ಸರವಣನ್

ಎಂ​ಇಜಿಯಲ್ಲಿ ಹೆಸರನ್ನು ನೋಂದಾಯಿಸಿದ ನಂತರ ವಿಷ್ಣು ಸುಬೇದಾರ್ 2018ರಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್​ಸಿಪ್​ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಅದಾದ ನಂತರವೇ ಅವರು ಹಲವಾರು ಅಂತರರಾಷ್ಟ್ರೀಯ ಈವೆಂಟ್​ಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಸೇಲಿಂಗ್ ಸ್ಪರ್ಧೆ: ಟೋಕಿಯೋ ಒಲಂಪಿಕ್ಸ್​ನಲ್ಲಿ ಬಾಗವಹಿಸುವ ಅವಕಾಶ ಗಿಟ್ಟಿಸಿದ ಬೆಂಗಳೂರು ಎಂ​ಇಜಿಯ ಸುಬೇದಾರ್ ವಿಷ್ಣು ಸರವಣನ್
ಸುಬೇದಾರ್ ವಿಷ್ಣು ಸರವಣನ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Apr 09, 2021 | 10:56 PM

Share

ಬೆಂಗಳೂರು: ಭಾರತೀಯ ಸೇನೆಯ ಭಾಗವಾಗಿರುವ ಬೆಂಗಳೂರು ನೆಲೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್​ನಲ್ಲಿ ಅಧಿಕಾರಿಯಾಗಿರುವ ಸುಬೇದಾರ್ ವಿಷ್ಣು ಸರವಣನ್ ಅವರು ಟೊಕಿಯೊ ಒಲಂಪಿಕ್ಸ್​ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿರುವ ನಾಲ್ವರು ಭಾರತೀಯ ಸೇಲರ್​ಗಳಲ್ಲಿ ಒಬ್ಬರಾಗಿದ್ದಾರೆ.ಭಾರತೀಯ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಇತ್ತೀಚಿಗೆ ಓಮನ್​ನಲ್ಲಿ ನಡೆದ ಏಷ್ಯನ್​ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಷ್ಣು ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದಾರೆ. 2015ರಲ್ಲಿ ಸರವಣನ್ ಎಂ​ಇಜಿ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಸೇರಿದ ನಂತರ ಅವರ ಪ್ರದರ್ಶನದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎಂದು ಪಿಆರ್​ಒ ಹೇಳಿಕೆ ತಿಳಿಸಯತ್ತದೆ.

‘ಸುಬೇದಾರ್ ವಿಷ್ಣು ಸರವಣನ್ ಅವರು 2015ರಲ್ಲಿ ಎಮ್​ಇಜಿಯ ಬಾಯ್ಸ್ ಸ್ಪೋರ್ಟ್ಸ್​ ಕಂಪನಿಯಲ್ಲಿ ಬಾಯ್ಸ್ ಸ್ಪೋರ್ಟ್ಸ್ ಕೆಡೆಟ್ ಆಗಿ ತಮ್ಮ ಹೆಸರನ್ನು ನೋಂದಾಯಿಸಿದರು. ಅವರ ತಂದೆ ಸುಬೇದಾರ್ ಸರವಣನ್ ಅವರು ಮದ್ರಾಸ್ ಸ್ಯಾಪರ್ಸ್​ನಲ್ಲಿ ಸೇಲರ್ ಅಗಿದ್ದರು. ಎಮ್​ಇಜಿಯ ಬಾಯ್ಸ್ ಸ್ಪೋರ್ಟ್ಸ್​ ಕಂಪನಿ ಸೇರಿದ ಅಲ್ಪಾವಧಿಯಲ್ಲೇ ವಿಷ್ಣು ಸರವಣನ್ ಅವರು ಅಪಾರ ಬದ್ಧತೆ ಮತ್ತು ಎಮ್​ಇಜಿಯ ಸಹಕಾರದೊಂದಿಗೆ ರಾಷ್ಟ್ರೀಯ ಜ್ಯೂನಿಯರ್ ಮತ್ತು ಯುವ ನ್ಯಾಷನಲ್ ಚಾಂಪಿಯನ್​ಶಿಪ್​ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಇಲ್ಲಿಯವರೆಗೆ 30 ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಾಗವಹಿಸಿರುವ ಅವರು ಹದಿಮೂರು ಸಲ ಟಾಪ್​ ಮೂವರಲ್ಲಿ ಒಬ್ಬರಾಗಿದ್ದಾರೆ,’ ಎಂದು ಎಮ್​ಇಜಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸುತ್ತದೆ.

ಎಮ್​ಇಜಿಯಲ್ಲಿ ಹೆಸರನ್ನು ನೋಂದಾಯಿಸಿದ ನಂತರ ವಿಷ್ಣು ಸುಬೇದಾರ್ 2018ರಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್​ಸಿಪ್​ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಅದಾದ ನಂತರವೇ ಅವರು ಹಲವಾರು ಅಂತರರಾಷ್ಟ್ರೀಯ ಈವೆಂಟ್​ಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಯುರೋಪಿನ ಕ್ರೊವೇಶಿಯಾದಲ್ಲಿ 2019ರಲ್ಲಿ ನಡೆದ ಲೇಸರ್ ಅಂಡರ್-21 ವಿಶ್ವ ಸೇಲಿಂಗ್ ಚಾಂಪಿಯನ್​ಶಿಪ್​ನಲ್ಲಿ ವಿಷ್ಣು ಬಾಗವಹಿಸಿ ಕಂಚಿನ ಪದಕ ಗೆದ್ದರು. ಈ ಚಾಂಪಿಯನ್​ಶಿಪ್​ನಲ್ಲಿ 41 ರಾಷ್ಟ್ರಗಳ 144 ಸ್ಪರ್ಧಿಗಳು ಭಾಗವಹಿಸಿದ್ದರು. ಏತನ್ಮಧ್ಯೆ, ನೆಹ್ರಾ ಕುಮಾನನ್ ಅವರು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ, ಗಣಪತಿ ಚೆಂಗಪ್ಪ ಮತ್ತು ವರುಣ ಠಕ್ಕರ್ ಅವರ ಜೋಡಿಯು ಒಲಂಪಿಕ್ಸ್​ನ ಸೇಲಿಂಗ್ಈವೆಂಟ್​ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದೆ.

ಇದನ್ನೂ ಓದಿ: Tokyo Olympics: ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಭವಾನಿ ದೇವಿ!

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ