AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದಿದ್ದ ಬೌಲರ್​ಗೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​​ ಬಾರಿಸಿದ ಕೀರನ್ ಪೊಲಾರ್ಡ್!

West Indies vs Sri Lanka: ಶ್ರೀಲಂಕಾ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್​ಗೆ ಇಳಿದಿತ್ತು. 20 ಓವರ್​ಗಳಲ್ಲಿ 131ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.

ಹಿಂದಿನ ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದಿದ್ದ ಬೌಲರ್​ಗೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​​ ಬಾರಿಸಿದ ಕೀರನ್ ಪೊಲಾರ್ಡ್!
ರಾಜೇಶ್ ದುಗ್ಗುಮನೆ
|

Updated on:Mar 04, 2021 | 10:59 AM

Share

ಜೀವನವೇ ಹಾಗೆ. ಸುಖ-ದುಖಃ ಯಾವಾಗ ಬರುತ್ತದೆಯೋ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲೊಬ್ಬ ಬೌಲರ್​, ಕ್ರಿಕೆಟ್​ ಆಟದಲ್ಲಿ ಅತ್ಯಪರೂಪ ಎನಿಸುವಂತೆ ಒಂದು ಓವರ್​ನಲ್ಲಿ ಹ್ಯಾಟ್ರಿಕ್​ ತೆಗೆದು ಸಾಧನೆ ಮಾಡಿದ್ದಾರೆ. ಆದರೆ, ಅದರ ಸಂಭ್ರಮದ ಕ್ಷಣಗಳು ಮರು ಓವರ್​ನಲ್ಲಿಯೇ ಇಲ್ಲವಾಗಿದೆ. ಏಕೆಂದರೆ, ಅವರ ಮುಂದಿನ ಓವರ್​ನಲ್ಲೇ ಬ್ಯಾಟ್ಸ್​​ಮನ್​ ಆರು ಬಾಲ್​ಗೆ ಆರು ಸಿಕ್ಸ್​ ಬಾರಿಸಿದ್ದಾರೆ.  ವೆಸ್ಟ್​ ಇಂಡೀಸ್​ ಸೀಮಿತ ಓವರ್​ಗಳ ನಾಯಕ ಕೀರನ್​ ಪೊಲಾರ್ಡ್​ ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದಾರೆ. ಆರು ಬಾಲ್​ಗೆ ಆರು ಸಿಕ್ಸ್​ ಹೊಡೆಯುವ ಮೂಲಕ ವೆಸ್ಟ್​ ಇಂಡೀಸ್​​ ತಂಡವನ್ನು ಗೆಲುವಿನ ದಡ ಹತ್ತಿಸಿದ್ದಾರೆ. ಹ್ಯಾಟ್ರಿಕ್​ ತೆಗೆದ ಬಾಲರ್​ಗೆ ಕೀರನ್​ ಸಿಕ್ಸ್​ ಬಾರಿಸಿದ್ದು ವಿಶೇಷ. ಶ್ರೀಲಂಕಾ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿದೆ. ಇಂದು ನಡೆದ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಮೊದಲ ಬ್ಯಾಟಿಂಗ್​ಗೆ ಇಳಿದಿತ್ತು. 20 ಓವರ್​ಗಳಲ್ಲಿ 131ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆತ್ಮ ವಿಶ್ವಾಸದೊಂದಿಗೆ ವೆಸ್ಟ್​ ಇಂಡೀಸ್​ ಆಟಗಾರರು ಬ್ಯಾಟಿಂಗ್​ಗೆ ಇಳಿದಿದ್ದರು. ವೆಸ್ಟ್​​ ಇಂಡೀಸ್​ ತಂಡ 52 ರನ್​ಗೆ ಒಂದು ವಿಕೆಟ್​ ಕಳೆದುಕೊಂಡು ಆಡುತ್ತಿರುವಾಗ ಅಖಿಲ ಧನಂಜಯ್​ ಬೌಲಿಂಗ್​ಗೆ ಇಳಿದಿದ್ದರು. ತಮ್ಮ ಸ್ಪಿನ್​ ಮಾಂತ್ರಿಕತೆಯಿಂದ ಹ್ಯಾಟ್ರಿಕ್​ ತೆಗೆದರು. ಈ ಮೂಲಕ ವೆಸ್ಟ್​ ಇಂಡೀಸ್​ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆಗ ಬ್ಯಾಟಿಂಗ್​ಗೆ ಇಳಿದಿದ್ದರು ಪೊಲಾರ್ಡ್​.

ಒಂದು ಓವರ್ ಬಳಿಕೆ ಮತ್ತೆ ಅಖಿಲ ಧನಂಜಯ್​ ಬೌಲಿಂಗ್​ಗೆ ಇಳಿದರು. ಕಳೆದ ಓವರ್​ನಲ್ಲಿದ್ದ ವಿಶ್ವಾಸ ಈ ಬಾರಿ ದ್ವಿಗುಣಗೊಂಡಿತ್ತು. ಆದರೆ, ಪೊಲಾರ್ಡ್​ ಆಟದ ಗತಿಯನ್ನೇ ಬದಲಾಯಿಸಿಬಿಟ್ಟರು. ಅಖಿಲ ಬೌಲಿಂಗ್​ನಲ್ಲಿ ಆರು ಬಾಲ್​ಗೆ ಆರು ಸಿಕ್ಸ್​ ಬಾರಿಸಿ ಅವರು ಭೇಷ್​ ಎನಿಸಿಕೊಂಡರು.

ವೆಸ್ಟ್​ ಇಂಡೀಸ್​​ ತಂಡ ಈ ದೈತ್ಯ ದೇಹಿ ಸಿಕ್ಸರ್​​​ಗಳನ್ನು ಬಾರಿಸುವುದರೊಂದಿಗೆ ಇನ್ನಿಂಗ್ಸ್​​ ಆರಂಭಿಸಬೇಕು ಎಂಬಂತೆ ಸ್ಕ್ರೀಸ್​ಗೆ ಬಂದು ಬ್ಯಾಟ್​ ಬೀಸಿದ್ದಾರೆ. ಮೊದಲ ನಾಲ್ಕು ಸಿಕ್ಸರ್​​ಗಳನ್ನು ತುಸು ಶ್ರಮ ಹಾಕಿ ಬಾರಿಸಿದ್ದ ಪೊಲ್ಲಾರ್ಡ್​​, ಬಾರಿಸಿರುವ 5 ನೆಯ ಸಿಕ್ಸರ್​​ ನೋಡಿದರೆ ಅಬ್ಬಬ್ಬಾ ಅಂತೀರಿ! ಪೊಲಾಡ್ಸ್​ ಬ್ಯಾಟ್​​ನಿಂದ ಆಕಾಶಕ್ಕೆ ಚಿಮ್ಮಿದ ಬಾಲ್​ ನೋಡುವುದೇ ನಿಜಕ್ಕೂ ಸೊಗಸು, ಸೊಗಸು. ಮುಂದೆ ಕೊನೆಯ ಸಿಕ್ಸರ್​​ ಅನ್ನು ಈ ಪೊಲಾರ್ಡ್ ಹೇಗೆ ಎತ್ತಿದ್ದಾರೆ ಅಂದ್ರೆ ನಾಲ್ಕೈದು ಸಿಕ್ಸರ್​​ ಬಾರಿಸಿದ ಬಳಿಕ ಅದು ತನಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಮತ್ತೊಂದು ಸೊಗಸಾದ ಸಿಕ್ಸರ್​ ಅನ್ನು ಸ್ಕ್ವೇರ್​ ಡ್ರೈವ್​ ಮೂಲಕ ಮೈದಾನದಿಂದ ಹೊರಕ್ಕೆ ಎತ್ತಿದ್ದಾರೆ. ಈ ಮಧ್ಯೆ ಆ ಬೌಲರ್​ ಮುಖದಲ್ಲಿ ಎಷ್ಟು ಬೇಸರ ಅಸಹಾಯಕತೆ ಮನೆಮಾಡಿತ್ತು ಅಂದ್ರೆ ಮೂರನೆಯ ಸಿಕ್ಸರ್​ ಹೊಡೆಸಿಕೊಂಡಾಗಲೇ ಕಸಿವಿಸಿಗೊಂಡಿದ್ದರು. ಮತ್ತೆ ಮತ್ತೆ ಸಿಕ್ಸರ್​ ಹೊಡೆಯುವುದನ್ನು ನೋಡಿ ಅಸಹಾಯಕತೆಯಂದ ಕೈಚೆಲ್ಲಿ ನೋಡತೊಡಗಿದ್ದರು. ಅಂತಿಮವಾಗಿ 13.1 ಓವರ್​​ನಲ್ಲಿ 6 ವಿಕೆಟ್​ ಕಳೆದುಕೊಂಡು ವೆಸ್ಟ್​ ಇಂಡೀಸ್ ಗೆಲುವಿನ ದಡ ಸೇರಿತು.

ಇದನ್ನೂ ಓದಿ: ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!

Published On - 9:48 am, Thu, 4 March 21

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ