AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾದು ಕಾದು ಸುಸ್ತಾದ ಪಾರ್ಥೀವ್ ಕೊನೆಗೆ ವಿದಾಯ ಹೇಳಿಬಿಟ್ಟರು!

ಪ್ರತಿಭಾವಂತ ವಿಕೆಟ್​ಕೀಪರ್ ಮತ್ತು ಉತ್ತಮ ಬ್ಯಾಟ್ಸ್​ಮನ್ ಆಗಿದ್ದ ಪಾರ್ಥೀವ್ ಪಟೇಲ್ ಕ್ರಿಕೆಟ್​ನ ಎಲ್ಲ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. ಮಹೇಂದ್ರಸಿಂಗ್ ಧೋನಿ ಟೀಮಿಗೆ ಕಾಲಿಟ್ಟ ನಂತರ ಪಾರ್ಥೀವ್ ಸೇರಿದಂತೆ ಹಲವಾರು ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು ತೆರೆಮರೆಗೆ ಸರಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ಪಾರ್ಥೀವ್ ಅದೃಷ್ಟಹೀನರೆಂದೇ ಹೇಳಬೇಕು.

ಕಾದು ಕಾದು ಸುಸ್ತಾದ ಪಾರ್ಥೀವ್ ಕೊನೆಗೆ ವಿದಾಯ ಹೇಳಿಬಿಟ್ಟರು!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 09, 2020 | 4:46 PM

Share

ಪಾರ್ಥೀವ್ ಪಟೇಲ್

ಹದಿನೇಳನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ 18 ವರ್ಷಗಳ ಕಾಲ ಅ ಮಟ್ಟದಲ್ಲಿ ಅಡಿದ ಭಾರತದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್ ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಿಗೆ ವಿದಾಯ ಹೇಳಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಅವರು ವಿದಾಯ ಘೋಷಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲವಾದರೂ ಅವರ ಅಂತರಾಳದಲ್ಲಿ ನೋವಿರುವುದು ಮಾತ್ರ ಸತ್ಯ.

ನೋವು ಯಾಕಿದೆ ಅನ್ನುವುದು ಸ್ಪಷ್ಟ. 18 ವರ್ಷಗಳ ಕಾಲ ಅವರು ರಾಷ್ಟ್ರೀಯ ತಂಡಕ್ಕೆ ವಿವಿಧ ಹಂತಗಳಲ್ಲಿ ಅಲ್ಪ-ಅಲ್ಪ ಅವಧಿಯ ಸೇವೆ ಸಲ್ಲಿಸಿದರೂ ಕೇವಲ 25 ಟೆಸ್ಟ್, 38 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಮತ್ತು 2 ಟಿ20ಐ ಪಂದ್ಯಗಳಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸಿದರು. ಇಂಡಿಯನ್ ಪ್ರಿಮೀಯರ್​ ಲೀಗ್​ 2020 ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದ ಪಾರ್ಥೀವ್ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಪ್ರಾಯಶಃ ಅಗಲೇ ಅವರು ಕ್ರಿಕೆಟ್​ಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿರಬಹುದು.

ಸಭ್ಯರ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಕೆಲವು ಆಟಗಾರರಿಗೆ ಕ್ರೂರಿ ಎಂದೆನಿಸಿದ್ದರೆ ಆಶ್ಚರ್ಯವಿಲ್ಲ.

ಎಮ್ ಎಸ್ ಧೋನಿಯೊಂದಿಗೆ ಪಾರ್ಥೀವ್ ಪಟೇಲ್

ಪಾರ್ಥೀವ್ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗ ಅವರಿಗಿನ್ನೂ ಮತ ಚಲಾಯಿಸುವ ಹಕ್ಕು ಸಹ ಸಿಕ್ಕಿರಲಿಲ್ಲ. ಹೌದು, ಅವರು 17ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಭಾರತದ ಪರ ಅತಿ ಕಡಿಮೆ ವಯಸ್ಸಿನಲ್ಲಿ ಟೆಸ್ಟ್ ಆಡಿದ ವಿಕೆಟ್​ಕೀಪರ್ ಎನಿಸಿಕೊಂಡರು. ಅವರ ಸಮಕಾಲೀನ್ ವಿಕೆಟ್​​ಕೀಪರ್​ಗಳಾದ ದಿನೇಶ್ ಕಾರ್ತೀಕ್ 19ನೇ ವಯಸ್ಸಿನಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದರೆ, ಅಜಯ್ ರಾತ್ರಾ 20ನೇ ವಯಸ್ಸಿನಲ್ಲಿ ಡೆಬ್ಯು ಮಾಡಿದರು.

ಎಡಗೈ ಬ್ಯಾಟ್ಸ್​ಮನ್ ಮತ್ತು ಉತ್ತಮ ವಿಕೆಟ್​ಕೀಪರ್ ಆಗಿದ್ದ ಪಾರ್ಥೀವ್ 2002ರಲ್ಲಿ, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನಾಡಿದರು. ತಾವಾಡಿದ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆಗೆ ಔಟಾದರೂ ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 19 ರನ್ ಬಾರಿಸಿದರು. ಅದೇ ವರ್ಷ ನ್ಯೂಜಿಲೆಂಡ್ ವಿರುದ್ಧ ಅವರು ಒಡಿಐ ಕ್ರಿಕೆಟ್​ಗೂ ಕಾಲಿಟ್ಟರು. ನಂತರದ ಎರಡು ವರ್ಷಗಳ ಕಾಲ 2 ಪಾರ್ಥೀವ್ ಭಾರತವನ್ನು ಎರಡೂ ಆವೃತ್ತಿಗಳಲ್ಲಿ ಪ್ರತಿನಿಧಿಸಿದರು. ಆದರೆ 2004ರಲ್ಲಿ ಮಹೇಂದ್ರಸಿಂಗ್ ಧೋನಿ ಮುನ್ನೆಲೆಗೆ ಬರುತ್ತಿದ್ದಂತೆಯೇ, ಟೀಮಿನಲ್ಲಿ ಪಾರ್ಥೀವ್ ಅವರ ಪ್ರಾಮುಖ್ಯತೆ ಕಡಿಮೆಯಾಗಲಾರಂಭಿಸಿತು. ಧೋನಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ನಂತರ ಹಿಂತಿರುಗಿ ನೋಡಲೇ ಇಲ್ಲ, ಕ್ರಿಕೆಟ್ ಎಲ್ಲ ಫಾರ್ಮಾಟ್​ಗಳಿಗೆ ಅವರು ಅನಿವಾರ್ಯವಾಗಿಬಿಟ್ಟರು. ಪಾರ್ಥೀವ್ ಎದುರಿಸಿದ ಸ್ಥಿತಿಯನ್ನು ಕಾರ್ತೀಕ್ ಸಹ ಅನುಭವಿಸಬೇಕಾಯಿತು. ನಂತರದ ವರ್ಷಗಳಲ್ಲಿ ಪಾರ್ಥೀವ್ ಆಗೊಮ್ಮೆ ಈಗೊಮ್ಮೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡರು.

ನಿಮಗೆ ಆಶ್ವರ್ಯವಾಗಬಹುದು, ಟೆಸ್ಟ್ ಆಡಿದ 2 ವರ್ಷಗಳ ನಂತರ ಪಾರ್ಥೀವ್ ಗುಜರಾತ್ ಪರ ರಣಜಿ ಟ್ರೋಫಿಯಲ್ಲಿ ಆಡಲಾರಂಭಿಸಿದರು. ಅವರು ಒಟ್ಟು 25ಟೆಸ್ಟ್, 38 ಒಡಿಐ ಮತ್ತು 2 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಶತಕ ದಾಖಲಿಸದೆ ಹೋದರೂ, ಆಡಿದ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ಶತಕಗಳನ್ನು ಬಾರಿಸಿ 43ರನ್ ಸರಾಸರಿಯೊಂದಿಗೆ 11,240 ರನ್ ಕಲೆಹಾಕಿದರು. ವಿಕೆಟ್​ಗಳ ಹಿಂದೆ ಅವರು 486 ಕ್ಯಾಚ್ ಹಿಡಿದು 77 ಸ್ಟಂಪಿಂಗ್​ಗಳನ್ನು ಮಾಡಿದರು.

ಪಾರ್ಥೀವ್ ಪಟೇಲ್ ವಿದಾಯದ ಟ್ವೀಟ್

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್, ಚೆನೈ ಸೂಪರ್ ಕಿಂಗ್ಸ್ ಮತ್ತು ಆರ್​ಸಿಬಿಯನ್ನು ಪ್ರತಿನಿಧಿಸಿದ ಪಾರ್ಥೀವ್ ಆಡಿದ 139 ಪಂದ್ಯಗಳಲ್ಲಿ 13 ಅರ್ಧ ಶತಕಗಳೊಂದಿಗೆ 22.6 ಸರಾಸರಿಯಲ್ಲಿ 2,848 ರನ್ ಗಳಿಸಿದರು. ಹಾಗೆಯೇ ವಿಕೆಟ್ ಹಿಂದೆ 113 ಕ್ಯಾಚ್​ಗಳನ್ನು ಹಿಡಿದು 31 ಸ್ಟಂಪಿಂಗ್​ಗಳನ್ನು ಮಾಡಿದರು.

ತಮ್ಮ ವಿದಾಯದ ಟ್ವೀಟ್​ನಲ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ತಾವು ಆಡಿದ ಟೀಮುಗಳ ಕ್ಯಾಪ್ಟನ್​ಗಳು ಅದರಲ್ಲೂ ವಿಶೇಷವಾಗಿ ಅವರು ಪ್ರೀತಿಯಿಂದ ದಾದಾ ಎಂದು ಸಂಬೋಧಿಸಿರುವ ಸೌರವ್ ಗಂಗೂಲಿ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಜಲಾಹುತಿ
ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಜಲಾಹುತಿ
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು