AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್​ಗಳ ಅವಶ್ಯಕತೆಯಿದೆ: ಶೇನ್ ವಾರ್ನ್

ಹಾರ್ದಿಕ್ ಪಾಂಡ್ಯ ಅಭಿಮಾನಿ ವೃಂದಕ್ಕೆ ಲೇಟೆಸ್ಟ್ ಎಂಟ್ರಿಯೆಂದರೆ ಅಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್.

ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್​ಗಳ ಅವಶ್ಯಕತೆಯಿದೆ: ಶೇನ್ ವಾರ್ನ್
ಹಾರ್ದಿಕ್ ಪಾಂಡ್ಯ
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 09, 2020 | 10:41 PM

Share

ಭಾರತದ ಸವ್ಯಸಾಚಿ ಆಟಗಾರ ಹಾರ್ದಿಕ್ ಪಾಂಡ್ಯ ಸೂಪರ್​ ಸ್ಟಾರ್ ಪಟ್ಟಕ್ಕೇರುತ್ತಿದ್ದಂತೆ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆ ಅಭಿಮಾನಿ ವೃಂದಕ್ಕೆ ಲೇಟೆಸ್ಟ್ ಎಂಟ್ರಿಯೆಂದರೆ ಅಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್.

ಪದೇಪದೆ ಮರುಕಳಿಸುತ್ತಿರುವ ಬೆನ್ನುನೋವಿನಿಂದಾಗಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಿರುವ ಪಾಂಡ್ಯ ಸೀಮಿತ ಓವರ್​ಗಳ ಪಂದ್ಯಗಳಿಗೆ ಟೀಮ್ ಇಂಡಿಯಾದಲ್ಲಿ ಈಗ ಪರಿಣಿತ ಬ್ಯಾಟ್ಸ್​ಮನ್ ಆಗಿ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅಪಾರ ಪ್ರತಿಭಾವಂತ ಮತ್ತು ಅಪ್ಪಟ ಬ್ಯಾಟ್ಸ್​ಮನ್​ಗಳು ಈ ಸ್ಥಾನಕ್ಕಾಗಿ ಲಭ್ಯರಿದ್ದರೂ ಬಿಸಿಸಿಐ ಮತ್ತು ನಾಯಕ ವಿರಾಟ್​ ಕೊಹ್ಲಿ, ಪಾಂಡ್ಯ ಅವರೇ ಸೂಕ್ತ ಎಂದು ಪರಿಗಣಿಸಿ ಆಡಿಸುತ್ತಿರುವುದು ಅವರಲ್ಲಿರುವ ಬ್ಯಾಟಿಂಗ್ ಪ್ರತಿಭೆಗೆ ಸಾಕ್ಷಿಯಾಗಿದೆ.

ಆಸ್ಟ್ರೇಲಿಯಾದ ವಿರುದ್ಧ ಮಂಗಳವಾರದಂದು ಕೊನೆಗೊಂಡ 3 ಪಂದ್ಯಗಳ ಟಿ20ಐ ಸರಣಿ ಮತ್ತು ಅದಕ್ಕೆ ಮೊದಲು ನಡೆದ ಮೂರು-50 ಒವರ್​ ಪಂದ್ಯಗಳ ಸರಣಿಯಲ್ಲಿ ಪಾಂಡ್ಯ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಂದು ದಿನದ ಪಂದ್ಯಗಳಲ್ಲಿ 210 ರನ್ ಬಾರಿಸಿದರೆ, ಟಿ20 ಪಂದ್ಯಗಳಲ್ಲಿ 78 ರನ್ ಚಚ್ಚಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ಟೆಸ್ಟ್ ಪಂದ್ಯಗಳನ್ನಾಡುವ ತಂಡದಲ್ಲಿ ಇಲ್ಲದಿರುವುದರಿಂದ ಭಾರತಕ್ಕೆ ವಾಪಸ್ಸಾಗುವ ಸಿದ್ಧತೆಯಲ್ಲಿದ್ದಾರೆ.

ಶೇನ್ ವಾರ್ನ್

ಪಾಂಡ್ಯ ಟೆಸ್ಟ್​ ಟೀಮ್​ಗೆ ಆಯ್ಕೆಯಾಗದಿರುವುದು ವಾರ್ನ್​ಗೆ ಸೋಜಿಗವನ್ನುಂಟು ಮಾಡಿದೆ. ಪಾಂಡ್ಯರನ್ನು ಭಾರತ ತಂಡದ ಕೋಲ್ಮಿಂಚು ಎಂದಿರುವ ವಾರ್ನ್, ತಮ್ಮ ಮಿಂಚಿನ ಗತಿಯ ಬ್ಯಾಟಿಂಗ್​ನಿಂದ ಅವರು ಟೀಮ್​ನ ಇತರ ಅಟಗಾರರಲ್ಲಿ ಸ್ಫೂರ್ತಿ ತುಂಬುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

‘ಹಾರ್ದಿಕ್ ಪಾಂಡ್ಯ ಅವರನ್ನು ಇಂಡಿಯಾದ ಟೆಸ್ಟ್ ಟೀಮಿನಲ್ಲಿ ಸೇರಿಸಲೇಬೇಕು. ಜೊತೆ ಆಟಗಾರರಲ್ಲಿ ಸ್ಥೈರ್ಯ ತುಂಬುವ ಜತೆಗೆ ಇಡೀ ತಂಡವನ್ನು ಮೇಲೆತ್ತುವ ವಿಶಿಷ್ಟವಾದ ಸಾಮರ್ಥ್ಯ ಅವರಲ್ಲಿದೆ. ಅವರಂಥ ಸೂಪರ್ ಸ್ಟಾರ್​ಗಳ ಅವಶ್ಯಕತೆ ಕ್ರಿಕೆಟ್​ಗಿದೆ! ಇದು ಅಕ್ಷರಶಃ ಸತ್ಯ’ ಎಂದು ವಾರ್ನ್ ಹೇಳಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಭಾರತದ ಮಾಜಿ ಆಟಗಾರ ಮಹ್ಮದ್ ಕೈಫ್ ಸಹ ಪಾಂಡ್ಯರನ್ನು ಸ್ವದೇಶಕ್ಕೆ ಕಳಿಸದೆ ಅಲ್ಲೇ ಉಳಿಸಿಕೊಂಡು ಟೆಸ್ಟ್​ ಪಂದ್ಯಗಳಲ್ಲಿ ಆಡಿಸಬೇಕೆಂದು ಹೇಳಿದ್ದಾರೆ.

ಟಿ20 ಕ್ರಿಕೆಟ್ ನನ್ನ ಬ್ಯಾಟಿಂಗ್ ಮೇಲೆ ದೊಡ್ಡ ಪ್ರಭಾವ ಬೀರಿದೆ: ಸ್ಟೀವ್ ಸ್ಮಿತ್

Published On - 10:23 pm, Wed, 9 December 20

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ