AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್19 ಕಾರಣದಿಂದ ಚೀನಾದಲ್ಲಿ ನಡೆಯಬೇಕಿದ್ದ ಫುಟ್​ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ದುಬೈಗೆ ಸ್ಥಳಾಂತರ

ಈವರೆಗಿನ ಪಂದ್ಯಗಳ ಅನುಸಾರ ಅಂಕಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಸಿರಿಯಾ ತಂಡ ಮೊದಲ ಸ್ಥಾನದಲ್ಲಿದೆ. ಫುಟ್​ಬಾಲ್ ವಿಶ್ವಕಪ್ ಕನಸು ನನಸಾಗಿಸಲು ಉಭಯ ತಂಡಗಳು ಬಿರುಸಿನ ಕಾದಾಟದಲ್ಲಿ ತೊಡಗಿವೆ.

ಕೊವಿಡ್19 ಕಾರಣದಿಂದ ಚೀನಾದಲ್ಲಿ ನಡೆಯಬೇಕಿದ್ದ ಫುಟ್​ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ದುಬೈಗೆ ಸ್ಥಳಾಂತರ
ಫುಟ್​ಬಾಲ್
TV9 Web
| Edited By: |

Updated on:Aug 14, 2021 | 1:01 PM

Share

ಚೀನಾದಲ್ಲಿ ನಡೆಯಬೇಕಾಗಿದ್ದ ಫುಟ್​ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ಕೊರೊನಾ ಸೋಂಕಿನ ಕಾರಣದಿಂದ ದುಬೈಗೆ ಸ್ಥಳಾಂತರಗೊಂಡಿವೆ. ಸಿರಿಯಾ ಹಾಗೂ ಮಾಲ್ಡೀವ್ಸ್ ತಂಡಗಳಲ್ಲಿ ಕೊವಿಡ್-19 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿಯೂ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಇಂದು (ಮೇ 31) ಚೈನೀಸ್ ಫುಟ್​ಬಾಲ್ ಅಸೋಸಿಯೇಷನ್ ಹೇಳಿಕೆ ನೀಡಿದೆ.

ಗ್ರೂಪ್ ಎ ಫಿಕ್ಸ್​ಚರ್ಸ್​ನ ಚೀನಾ, ಸಿರಿಯಾ, ಮಾಲ್ಡೀವ್ಸ್, ಫಿಲಿಫೈನ್ಸ್ ಹಾಗೂ ಗುಆಮ್ ತಂಡಗಳು ಕೊರೊನಾ ಸೋಂಕಿನ ಪರಿಣಾಮಕ್ಕೆ ಒಳಪಟ್ಟಿವೆ. ಮಾಲ್ಡೀವ್ಸ್ ಹಾಗೂ ಸಿರಿಯಾ ರಾಷ್ಟ್ರೀಯ ಫುಟ್​ಬಾಲ್ ತಂಡದಲ್ಲಿ ಕೊವಿಡ್ ಪ್ರಕರಣಗಳು ಕಂಡುಬಂದ ಕಾರಣ ತಂಡದ ಆಟಗಾರರು ಕಠಿಣ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ಹಾಗೂ ಈಗಿನ ಶೆಡ್ಯೂಲ್ ಪ್ರಕಾರ ಆಟ ನಡೆಯಲು ಸಾಧ್ಯವಿಲ್ಲ ಎಂದು ಚೀನಾ ಫುಟ್​ಬಾಲ್ ಅಸೋಸಿಯೇಷನ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಏಷಿಯನ್ ಫುಟ್​ಬಾಲ್ ಕಾನ್ಫೆಡರೇಷನ್ ಸಲಹೆಯಂತೆ, ಚೈನೀಸ್ ಫುಟ್​ಬಾಲ್ ಅಸೋಸಿಯೇಷನ್ ಇನ್ನುಳಿದ ಪಂದ್ಯಗಳನ್ನು ಚೀನಾದ ಬದಲಾಗಿ ದುಬೈನಲ್ಲಿ ನಡೆಸಲು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಎಲ್ಲಾ ಅಂದುಕೊಂಡಂತೆ, ಈ ಮೊದಲು ನಿಗದಿಯಾದಂತೆ ಆಗುತ್ತಿದ್ದರೆ ಚೀನಾದ ನಗರ ಸುಜೋವುನಲ್ಲಿ ಮುಂದಿನ ಪಂದ್ಯ ನಡೆಯಬೇಕಿತ್ತು.

ಇದೀಗ ಕೊರೊನಾ ಸೋಂಕಿನ ಕಾರಣದಿಂದ ಮುಂದಿನ ಪಂದ್ಯಗಳು ದುಬೈನಲ್ಲಿ ನಡೆಯುವುದು ಖಚಿತವಾಗಿದ್ದು, ಪಂದ್ಯ ನಡೆಯುವ ಸ್ಥಳದ ಬಗ್ಗೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಈ ಮೊದಲು ಮಾಲ್ಡೀವ್ಸ್ ತಂಡದ ಸ್ಟ್ರೈಕರ್ ಅಲಿ ಅಶ್ಫಕ್ ಟ್ವೀಟ್ ಮಾಡಿ, ತಾನು ಕೊವಿಡ್ ಪಾಸಿಟಿವ್ ಆಗಿರುವುದನ್ನು ತಿಳಿಸಿದ್ದರು. ಜೊತೆಗೆ, ಕ್ವಾಲಿಫೈಯರ್ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂಬುದನ್ನೂ ಖಚಿತಪಡಿಸಿದ್ದರು.

ಭಾನುವಾರ ನಡೆದ ಪಂದ್ಯದಲ್ಲಿ ಚೀನಾ ತಂಡ ಗುಆಮ್ ತಂಡವನ್ನು 7-0 ಅಂತರದಿಂದ ಸೋಲಿಸಿತ್ತು. ಹಾಗೂ ಚೀನಾ ತಂಡವು ಗುರುವಾರ ಮಾಲ್ಡೀವ್ಸ್ ತಂಡದ ವಿರುದ್ಧ ಆಡಬೇಕಿತ್ತು. ಸಿರಿಯಾ ಮತ್ತು ಮಾಲ್ಡೀವ್ಸ್ ತಂಡಗಳು ಜೂನ್ 7ರಂದು ಎದುರಾಗಬೇಕಿತ್ತು.

ಈವರೆಗಿನ ಪಂದ್ಯಗಳ ಅನುಸಾರ ಅಂಕಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಸಿರಿಯಾ ತಂಡ ಮೊದಲ ಸ್ಥಾನದಲ್ಲಿದೆ. ಫುಟ್​ಬಾಲ್ ವಿಶ್ವಕಪ್ ಕನಸು ನನಸಾಗಿಸಲು ಉಭಯ ತಂಡಗಳು ಬಿರುಸಿನ ಕಾದಾಟದಲ್ಲಿ ತೊಡಗಿವೆ.

ಇದನ್ನೂ ಓದಿ: ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ

KL Rahul: ರಾಹುಲ್ ಫಿಟ್ನೆಸ್​ಗೆ ಅಥಿಯಾ ಶೆಟ್ಟಿ ಫಿದಾ; ಪ್ರಣಯ ಪಕ್ಷಿಗಳ ಪ್ರೀತಿಗೆ ಮತ್ತೊಂದು ಸಾಕ್ಷಿ

Published On - 11:29 pm, Mon, 31 May 21

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?