AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final Weather Update: ಸೌತಾಂಪ್ಟನ್‌ನಲ್ಲಿ ಮಳೆಯ ಆರ್ಭಟ! ಟಾಸ್ ವಿಳಂಬ.. ಮಳೆಯಿಂದಾಗಿ ಮೊದಲ ಸೆಷನ್ ರದ್ದು

WTC Final Weather Update: ಫೈನಲ್‌ನ ಮೊದಲ ದಿನದಂದು ಮಳೆಯಿಂದಾಗಿ ಟಾಸ್ ನಡೆಸಲು ಸಾಧ್ಯವಾಗಲಿಲ್ಲ ಮತ್ತು ಪಂದ್ಯದ ಅಧಿಕಾರಿಗಳು ಮೊದಲ ಅಧಿವೇಶನದ ಆಟವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.

WTC Final Weather Update: ಸೌತಾಂಪ್ಟನ್‌ನಲ್ಲಿ ಮಳೆಯ ಆರ್ಭಟ! ಟಾಸ್ ವಿಳಂಬ.. ಮಳೆಯಿಂದಾಗಿ ಮೊದಲ ಸೆಷನ್ ರದ್ದು
ಪೃಥ್ವಿಶಂಕರ
|

Updated on:Jun 18, 2021 | 3:11 PM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಉತ್ತಮ ಆರಂಭ ಸಿಕ್ಕಿಲ್ಲ. ಅಭಿಮಾನಿಗಳಿಗೆ ಯಾವುದು ಹೆಚ್ಚು ಕಾಡುತ್ತಿತ್ತೋ ಅದು ನಿಜವಾದೆ. ಇಂಗ್ಲೆಂಡ್‌ನ ಹವಾಮಾನವು ಈಗ ಕ್ರಿಕೆಟ್ ಸ್ನೇಹಿಯಾಗಿಲ್ಲ. ಏಕೆಂದರೆ ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯು ಫೈನಲ್ ಪ್ರಾರಂಭವಾಗುವ ಮೊದಲೇ ಪಂದ್ಯಕ್ಕೆ ಅಡ್ಡಿಯುಂಟು ಮಾಡಿದೆ. ಫೈನಲ್‌ನ ಮೊದಲ ದಿನದಂದು ಟಾಸ್ ನಡೆಸಲು ಸಾಧ್ಯವಾಗಲಿಲ್ಲ ಮತ್ತು ಪಂದ್ಯದ ಅಧಿಕಾರಿಗಳು ಮೊದಲ ಅಧಿವೇಶನದ ಆಟವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಸೌತಾಂಪ್ಟನ್‌ನಲ್ಲಿ ದಿನವಿಡೀ ಮಳೆ ಬೀಳುವ ನಿರೀಕ್ಷೆಯಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಇಂದು ಆಟ ನಡೆಯುವ ಸಾಧ್ಯತೆಗಳು ತೀರಾ ಕಡಿಮೆ.

ಕಳೆದ ಕೆಲವು ದಿನಗಳಿಂದ ಸೌತಾಂಪ್ಟನ್‌ನಲ್ಲಿನ ಹವಾಮಾನವು ತುಂಬಾ ಉತ್ತಮ ಮತ್ತು ಬಿಸಿಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಹವಾಮಾನ ಬದಲಾಗಿದೆ ಮತ್ತು ಮಳೆಯಿಂದ ಆಟವನ್ನು ಪ್ರಾರಂಭಿಸಲು ಕಷ್ಟವಾಗುತ್ತಿದೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪಂದ್ಯದ ಮೊದಲು ಟ್ವೀಟ್ ಮಾಡುವ ಮೂಲಕ, ಮೊದಲ ಅಧಿವೇಶನದ ಆಟವು ಮಳೆಯಿಂದಾಗಿ ರದ್ದಾಗಿದೆ ಎಂದು ಮಾಹಿತಿ ನೀಡಿದೆ. ಮಾಹಿತಿಯ ಪ್ರಕಾರ, ಸೌತಾಂಪ್ಟನ್‌ನಲ್ಲಿ ಇನ್ನೂ ಮಳೆ ನಿಂತಿಲ್ಲ ಮತ್ತು ಮುಂದಿನ ಕೆಲವು ಗಂಟೆಗಳವರೆಗೆ ಮಳೆ ಮುಂದುವರಿಯುತ್ತದೆ.

ದಿನವಿಡೀ ಮಳೆ ಮುನ್ಸೂಚನೆ ಹವಾಮಾನ ಇಲಾಖೆಯ ಪ್ರಕಾರ, ಇಂದು ಸೌತಾಂಪ್ಟನ್ನಲ್ಲಿ, ಇಡೀ ದಿನ ಭಾರೀ ಮತ್ತು ಕೆಲವೊಮ್ಮೆ ಲಘು ಮಳೆಯಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಮೊದಲ ದಿನ ಒಂದೇ ಒಂದು ಚೆಂಡನ್ನು ಸಹ ಬೌಲ್ ಮಾಡಲು ಸಾಧ್ಯವಿಲ್ಲ. ಪ್ರಸ್ತುತ, ಕೇವಲ ಒಂದು ಸೆಷನ್‌ನ ಆಟವನ್ನು ರದ್ದುಪಡಿಸಲಾಗಿದೆ ಮತ್ತು ಆಟಗಾರರು ಮತ್ತು ಅಭಿಮಾನಿಗಳು ಮೊದಲ ದಿನ ಕೆಲವು ಸಮಯ ಆಟವನ್ನು ನೋಡುತ್ತಾರೆ ಎಂದು ಭಾವಿಸಲಾಗಿದೆ.

Published On - 3:05 pm, Fri, 18 June 21

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ