AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Mobile Bonanza sale: ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಮೊಬೈಲ್ ಬೊನಾಂಜಾ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್

Flipkart Mobile Bonanza sale 2023: ಪ್ರಸಿದ್ಧ ಇ ಕಾಮರ್ಸ್ ತಾಣದ ಫ್ಲಿಪ್‌ಕಾರ್ಟ್​ನಲ್ಲಿ ಮೊಬೈಲ್ ಬೊನಾಂಜಾ ಸೇಲ್ ಲೈವ್ ಆಗಿದೆ. ಇದು ಡಿಸೆಂಬರ್ 6 ರವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಪೋಕೋ X5 ಪ್ರೊ, ಭಾರಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಇದು ರೂ. 18,999 ಕ್ಕೆ ಸೇಲ್ ಆಗುತ್ತಿದೆ. ರೂ. 4,000 ರಿಯಾಯಿತಿಯನ್ನು ನೀಡುತ್ತಿದೆ.

Flipkart Mobile Bonanza sale: ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಮೊಬೈಲ್ ಬೊನಾಂಜಾ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್
Flipkart Mobile Bonanza sale 2023
Follow us
Vinay Bhat
|

Updated on: Dec 02, 2023 | 6:55 AM

ಕಳೆದ ತಿಂಗಳು ಅತಿ ದೊಡ್ಡ ದೀಪಾವಳಿ ಸೇಲ್ ಅನ್ನು ಆಯೋಜಿಸಿ ಯಶಸ್ವಿಯಾಗಿದ್ದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಕೆಲವು ವಾರಗಳ ನಂತರ ಇದೀಗ ಮತ್ತೊಂದು ಮಾರಾಟ ಶುರುಮಾಡಿದೆ. ಫ್ಲಿಪ್‌ಕಾರ್ಟ್​ನಲ್ಲಿ ಇದೀಗ ಮೊಬೈಲ್ ಬೊನಾಂಜಾ ಸೇಲ್ ಲೈವ್ (Flipkart Mobile Bonanza sale) ಆಗಿದೆ ಮತ್ತು ಡಿಸೆಂಬರ್ 6 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್‌ನ 2023 ದೀಪಾವಳಿ ಮಾರಾಟದ ಸಮಯದಲ್ಲಿ ನೋಡಿದಂತೆ ಈ ಸೇಲ್​ನಲ್ಲೂ ಫೋನ್‌ಗಳಿಗೆ ಆಕರ್ಷಕವಾದ ರಿಯಾಯಿತಿಗಳನ್ನು ನೀಡಲಾಗಿದೆ. ನಥಿಂಗ್ ಫೋನ್ (2), ಸ್ಯಾಮ್​ಸಂಗ್ ಗ್ಯಾಲಕ್ಸಿ M14, ಪೋಕೋ X5 ಪ್ರೊ ಸೇರಿದಂತೆ ಅನೇಕ ಫೋನುಗಳ ಮೇಲೆ ಡಿಸ್ಕೌಂಟ್ ಇದೆ.

ಭಾರತದಲ್ಲಿ ಮೂಲತಃ 22,999 ರೂ. ಬೆಲೆಗೆ ಬಿಡುಗಡೆಯಾದ ಪೋಕೋ X5 ಪ್ರೊ, ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಮಾರಾಟದ ಸಮಯದಲ್ಲಿ ಭಾರಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಇದು ರೂ. 18,999 ಕ್ಕೆ ಸೇಲ್ ಆಗುತ್ತಿದೆ. ಅಂದರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ರೂ. 4,000 ರಿಯಾಯಿತಿಯನ್ನು ನೀಡುತ್ತಿದೆ. ಇದು ಪ್ರಸ್ತುತ ರೂ. 20,000 ಕ್ಕಿಂತ ಕಡಿಮೆ ಇರುವ ಅತ್ಯುತ್ತಮ 5G ಫೋನ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಉನ್ನತ-ಮಟ್ಟದ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ನೀಡಲಾಗಿದೆ.

ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್: ಬೆಲೆ 3 ಸಾವಿರಕ್ಕಿಂತ ಕಡಿಮೆ

ಇದನ್ನೂ ಓದಿ
Image
ವಿವೋದಿಂದ ಬಜೆಟ್ ಬೆಲೆಗೆ ಮತ್ತೊಂದು ​ಫೋನ್ ಬಿಡುಗಡೆ: ಏನಿದೆ ಫೀಚರ್ಸ್
Image
10 ಲಕ್ಷ ದಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ
Image
22000mAh ಬ್ಯಾಟರಿ: ಈ ರೀತಿಯ ಫೋನ್ ನೀವು ಹಿಂದೆಂದೂ ನೋಡಿರಲ್ಲ
Image
ಮಾರುಕಟ್ಟೆಗೆ ಬಂತು ರೆಡ್ಮಿ K70 ಸರಣಿ: ಧೂಳೆಬ್ಬಿಸುವುದು ಖಚಿತ-ಬೆಲೆ ಎಷ್ಟು?

ನಥಿಂಗ್ ಫೋನ್ (2) ಅನ್ನು ಫ್ಲಿಪ್‌ಕಾರ್ಟ್ ಮೂಲಕ ರೂ. 39,999 ಗೆ ಖರೀದಿಸಬಹುದು. 5G ಫೋನ್ ಈ ವರ್ಷದ ಆರಂಭದಲ್ಲಿ ರೂ. 44,999 ಕ್ಕೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಮೇಲೆ ರೂ. 5,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು. ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯೂ ಇದೆ.

ಅದೇ ರೀತಿ, ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಮಾರಾಟದ ಸಮಯದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ M14 ಕಡಿಮೆ ಬೆಲೆಗೆ ಲಭ್ಯವಿದೆ. ಇದು 4GB RAM + 128GB ಸ್ಟೋರೇಜ್ ಮಾದರಿಗಾಗಿ 13,399 ರೂ. ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಈ ಸ್ಯಾಮ್‌ಸಂಗ್ ಫೋನ್‌ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದೆ. ಅಲ್ಲದೆ, ನಿಮ್ಮ ಬಜೆಟ್ 15,000 ರೂ. ಗಿಂತ ಕಡಿಮೆಯಿದ್ದರೆ ಇದು ಪ್ರಸ್ತುತ ಅತ್ಯುತ್ತಮ ಫೋನ್ ಡೀಲ್‌ಗಳಲ್ಲಿ ಒಂದಾಗಿದೆ.

ಮೊಟೊರೊಲಾ ಎಡ್ಜ್ 40, ಇದು 30,000 ಕ್ಕಿಂತ ಕಡಿಮೆ 5G ಫೋನ್‌ಗಳಲ್ಲಿ ಒಂದಾಗಿದೆ. 29,999 ರೂ. ವಿನ ಈ ಫೋನನ್ನು ಗ್ರಾಹಕರು 26,999 ರೂ. ಗೆ ಖರೀದಿಸಬಹುದು. ಉತ್ತಮ ಕಾರ್ಯಕ್ಷಮತೆಯೊಂದಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಬಯಸುವ ಜನರು ಈ ಮೊಟೊರೊಲಾ ಫೋನ್ ಅನ್ನು ಖರೀದಿಸಬಹುದು. ಪ್ರೀಮಿಯಂ ಲೆದರ್ ಬ್ಯಾಕ್ ಪ್ಯಾನೆಲ್ ಅನ್ನು ಸಹ ಹೊಂದಿದೆ. ಅಂತೆಯೆ ರೆಡ್ಮಿ 12C 6,799 ಕಡಿಮೆ ಬೆಲೆಯಲ್ಲಿ ಪಟ್ಟಿಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ