AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandan Nilekani: ವಾಟ್ಸಾಪ್​ ಬೇರೆ ಸೋಷಿಯಲ್ ಮೀಡಿಯಾ ಆ್ಯಪ್​ ಬಳಸದ ನಂದನ್​ ನಿಲೇಕಣಿ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ತಮ್ಮ ಮೊಬೈಲ್​ ಫೋನ್​ನಲ್ಲಿ ಬಳಸುವ ಸಾಮಾಜಿಕ ಮಾಧ್ಯಮ ಆ್ಯಪ್​ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

TV9 Web
| Edited By: |

Updated on:Feb 16, 2022 | 2:01 PM

Share
ನಿಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ, ಅಂದರೆ ಯಾವ್ಯಾವ ಆ್ಯಪ್​ಗಳಿವೆ? ನಾವೇನಾದರೂ ಈ ಪ್ರಶ್ನೆಯನ್ನು ಕೇಳಿದರೆ ಇವರಿಗ್ಯಾಕೆ ಇಲ್ಲದ ಉಸಾಬರಿ ಅಂದುಕೊಳ್ತೀರಿ ಅಲ್ಲವಾ? ಇನ್ಫೋಸಿಸ್​ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್​ ನಿಲೇಕಣಿ ಮಂಗಳವಾರ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ವಾಟ್ಸಾಪ್​ ಅಥವಾ ಇನ್ಯಾವುದೇ ಸಾಮಾಜಿಕ ಮಾಧ್ಯಮ ಆ್ಯಪ್​ಗಳಿಲ್ಲ. iSPIRT ಫೌಂಡೇಷನ್​ನ ತನುಜ್​ ಭೋಜ್​ವಾನಿ ಜತೆಗೂಡಿ ದ ಆರ್ಟ್​ ಆಫ್ ಬಿಟ್​ಫುಲ್​ನೆಸ್​ ಎಂಬ ಪುಸ್ತಕದ ಸಹ ಲೇಖಕರಾಗಿದ್ದಾರೆ ನಿಲೇಕಣಿ. ಪದೇಪದೇ "ತಂತ್ರಜ್ಞಾನದ ಜತೆಗಿನ ನಂಜಿನ ಸಂಬಂಧ"ದ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ, ಅಂದರೆ ಯಾವ್ಯಾವ ಆ್ಯಪ್​ಗಳಿವೆ? ನಾವೇನಾದರೂ ಈ ಪ್ರಶ್ನೆಯನ್ನು ಕೇಳಿದರೆ ಇವರಿಗ್ಯಾಕೆ ಇಲ್ಲದ ಉಸಾಬರಿ ಅಂದುಕೊಳ್ತೀರಿ ಅಲ್ಲವಾ? ಇನ್ಫೋಸಿಸ್​ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್​ ನಿಲೇಕಣಿ ಮಂಗಳವಾರ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ವಾಟ್ಸಾಪ್​ ಅಥವಾ ಇನ್ಯಾವುದೇ ಸಾಮಾಜಿಕ ಮಾಧ್ಯಮ ಆ್ಯಪ್​ಗಳಿಲ್ಲ. iSPIRT ಫೌಂಡೇಷನ್​ನ ತನುಜ್​ ಭೋಜ್​ವಾನಿ ಜತೆಗೂಡಿ ದ ಆರ್ಟ್​ ಆಫ್ ಬಿಟ್​ಫುಲ್​ನೆಸ್​ ಎಂಬ ಪುಸ್ತಕದ ಸಹ ಲೇಖಕರಾಗಿದ್ದಾರೆ ನಿಲೇಕಣಿ. ಪದೇಪದೇ "ತಂತ್ರಜ್ಞಾನದ ಜತೆಗಿನ ನಂಜಿನ ಸಂಬಂಧ"ದ ಬಗ್ಗೆ ಮಾತನಾಡಿದ್ದಾರೆ.

1 / 5
ಆಧಾರ್​ನ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ತಂತ್ರಜ್ಞಾನ ಪರವಾಗಿ ನಂದನ್ ನಿಲೇಕಣಿ ಅವರ ಆಲೋಚನೆಯದು ದೊಡ್ಡ ಪಾಲಿದೆ. ಮಂಗಳವಾರದಂದು ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು, ತಮ್ಮ ಡಿಜಿಟಲ್​ ಜೀವನವನ್ನು ವಿವಿಧ ಸಾಧನಗಳು (ಡಿವೈಸ್​ಗಳ) ಮೂಲಕ ನಿರ್ವಹಿಸಲು ಬಯಸುವುದಾಗಿ ಹೇಳಿದ್ದಾರೆ. "ವಾಟ್ಸಾಪ್ ಇಲ್ಲ. ನೋಟಿಫಿಕೇಷನ್ ಬ್ಯಾಡ್ಜಸ್ ಇಲ್ಲ. ಕೇವಲ ಅಗತ್ಯ ಅಪ್ಲಿಕೇಷನ್​ಗಳು ಮಾತ್ರ," ಎಂದು ಟ್ವೀಟ್ ಮಾಡಿದ್ದಾರೆ.

ಆಧಾರ್​ನ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ತಂತ್ರಜ್ಞಾನ ಪರವಾಗಿ ನಂದನ್ ನಿಲೇಕಣಿ ಅವರ ಆಲೋಚನೆಯದು ದೊಡ್ಡ ಪಾಲಿದೆ. ಮಂಗಳವಾರದಂದು ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು, ತಮ್ಮ ಡಿಜಿಟಲ್​ ಜೀವನವನ್ನು ವಿವಿಧ ಸಾಧನಗಳು (ಡಿವೈಸ್​ಗಳ) ಮೂಲಕ ನಿರ್ವಹಿಸಲು ಬಯಸುವುದಾಗಿ ಹೇಳಿದ್ದಾರೆ. "ವಾಟ್ಸಾಪ್ ಇಲ್ಲ. ನೋಟಿಫಿಕೇಷನ್ ಬ್ಯಾಡ್ಜಸ್ ಇಲ್ಲ. ಕೇವಲ ಅಗತ್ಯ ಅಪ್ಲಿಕೇಷನ್​ಗಳು ಮಾತ್ರ," ಎಂದು ಟ್ವೀಟ್ ಮಾಡಿದ್ದಾರೆ.

2 / 5
ಉಬರ್, ಆಪಲ್​ಟಿವಿ ಮತ್ತು ಇನ್ಫೋಸಿಸ್ ಲೆಕ್ಸ್

ನಂದನ್ ನಿಲೇಕಣಿ ಅವರು ಬಳಸುವ ಅಗತ್ಯ ಆ್ಯಪ್​ಗಳು ಅಂದರೆ ಅದರಲ್ಲಿ ಉಬರ್, ಆಪಲ್​ಟಿವಿ ಮತ್ತು ಇನ್ಫೋಸಿಸ್ ಲೆಕ್ಸ್ ಇವೆ. ಇನ್ನು ನೀವು ಸಹ ಹೋಮ್​ ಸ್ಕ್ರೀನ್ ಷೇರ್​ ಮಾಡಿ ಎಂದು ನಂದನ್ ನೀಡಿರುವ ಆಹ್ವಾನಕ್ಕೆ ಅವರ ಟ್ವಿಟರ್​ ಖಾತೆಯ ಫಾಲೋವರ್​ಗಳ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯಿಸಿದ್ದಾರೆ. ತಾವು ಕೂಡ ನೋಟಿಫಿಕೇಷನ್​ ಬ್ಯಾಡ್ಜ್​ಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಯತ್ನಿಸುವುದಾಗಿ ಹೇಳಿದ್ದಾರೆ. ಭೋಜ್​ವಾನಿ ಕೂಡ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನ ಹಂಚಿಕೊಂಡಿದ್ದು, ನಿಲೇಕಣಿ ಅವರಿಗಿಂತ ಹೆಚ್ಚು "ಕ್ರೂರ"ವಾಗಿ ತಾವೇ ನಡೆದುಕೊಂಡಿರುವುದಾಗಿ ಹೇಳಿದ್ದಾರೆ.

3 / 5
ಒಂದೊಂದು ಉದ್ದೇಶಕ್ಕೆ ಒಂದೊಂದು ಡಿವೈಸ್

ನಂದನ್​ ನಿಲೇಕಣಿ ಅವರು ಜನವರಿಯಲ್ಲಿ ಮನಿಕಂಟ್ರೋಲ್ ಜತೆ ಮಾತನಾಡುತ್ತಾ ಹೇಳಿದ್ದರು, ವಿವಿಧ ಸಾಧನಗಳನ್ನು ಬಳಸಿ ಹೇಗೆ ತಮ್ಮ ಡಿಜಿಟಲ್​ ಜೀವನ ಹತೋಟಿ ಮಾಡುವುದಾಗಿ ತಿಳಿಸಿದ್ದರು. "ನನ್ನ ಲ್ಯಾಪ್​ಟಾಪ್​ ಉದ್ಯೋಗಕ್ಕಾಗಿ. ನನ್ನ ಫೋನ್ ಸಂವಹನಕ್ಕೆ. ನನ್ನ ಐಪ್ಯಾಡ್ ಕ್ಯುರೇಟೇಡ್ ಕಂಟೆಂಟ್ ಮತ್ತು ಮನರಂಜನೆಗಾಗಿ," ಎಂದಿದ್ದರು.

4 / 5
ವಾಯ್ಸ್​ಕಾಲ್ ಮತ್ತು ಎಸ್ಸೆಮ್ಮೆಸ್​ಗಷ್ಟೇ ಸೀಮಿತ

ತಂತ್ರಜ್ಞಾನ ಜತೆಗೆ ಆರೋಗ್ಯಕರ ಸಂಬಂಧ ಕುರಿತು ಮಾತನಾಡಿರುವ ನಂದನ್ ನಿಲೇಕಣಿ, ನಾನು ವಾಯ್ಸ್​ ಕಾಲ್​ ಮತ್ತು ಎಸ್ಸೆಮ್ಮೆಸ್​ಗಷ್ಟೇ ಸೀಮಿತವಾಗಬೇಕು ಅಂದುಕೊಂಡಿದ್ದೆ. ಟ್ವಿಟರ್​ವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾಜಿಕ ಮಾಧ್ಯಮ ಬಳಸುವುದಿಲ್ಲ. ಏಕೆಂದರೆ ನಾನು ಅದನ್ನು ಫಾಲೋವರ್​ಗಳ ಪ್ರಚಾರದ ಸಾಧನವಾಗಿ ಬಳಸುತ್ತೇನೆ. ಜತೆಗೆ ಝೀರೋ ಇನ್​ಬಾಕ್ಸ್ ನೀತಿ ಅನುಸರಿಸುತ್ತೇನೆ.

5 / 5

Published On - 2:00 pm, Wed, 16 February 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್