AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandan Nilekani: ವಾಟ್ಸಾಪ್​ ಬೇರೆ ಸೋಷಿಯಲ್ ಮೀಡಿಯಾ ಆ್ಯಪ್​ ಬಳಸದ ನಂದನ್​ ನಿಲೇಕಣಿ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್

ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ತಮ್ಮ ಮೊಬೈಲ್​ ಫೋನ್​ನಲ್ಲಿ ಬಳಸುವ ಸಾಮಾಜಿಕ ಮಾಧ್ಯಮ ಆ್ಯಪ್​ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

TV9 Web
| Updated By: Srinivas Mata|

Updated on:Feb 16, 2022 | 2:01 PM

Share
ನಿಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ, ಅಂದರೆ ಯಾವ್ಯಾವ ಆ್ಯಪ್​ಗಳಿವೆ? ನಾವೇನಾದರೂ ಈ ಪ್ರಶ್ನೆಯನ್ನು ಕೇಳಿದರೆ ಇವರಿಗ್ಯಾಕೆ ಇಲ್ಲದ ಉಸಾಬರಿ ಅಂದುಕೊಳ್ತೀರಿ ಅಲ್ಲವಾ? ಇನ್ಫೋಸಿಸ್​ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್​ ನಿಲೇಕಣಿ ಮಂಗಳವಾರ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ವಾಟ್ಸಾಪ್​ ಅಥವಾ ಇನ್ಯಾವುದೇ ಸಾಮಾಜಿಕ ಮಾಧ್ಯಮ ಆ್ಯಪ್​ಗಳಿಲ್ಲ. iSPIRT ಫೌಂಡೇಷನ್​ನ ತನುಜ್​ ಭೋಜ್​ವಾನಿ ಜತೆಗೂಡಿ ದ ಆರ್ಟ್​ ಆಫ್ ಬಿಟ್​ಫುಲ್​ನೆಸ್​ ಎಂಬ ಪುಸ್ತಕದ ಸಹ ಲೇಖಕರಾಗಿದ್ದಾರೆ ನಿಲೇಕಣಿ. ಪದೇಪದೇ "ತಂತ್ರಜ್ಞಾನದ ಜತೆಗಿನ ನಂಜಿನ ಸಂಬಂಧ"ದ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ, ಅಂದರೆ ಯಾವ್ಯಾವ ಆ್ಯಪ್​ಗಳಿವೆ? ನಾವೇನಾದರೂ ಈ ಪ್ರಶ್ನೆಯನ್ನು ಕೇಳಿದರೆ ಇವರಿಗ್ಯಾಕೆ ಇಲ್ಲದ ಉಸಾಬರಿ ಅಂದುಕೊಳ್ತೀರಿ ಅಲ್ಲವಾ? ಇನ್ಫೋಸಿಸ್​ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್​ ನಿಲೇಕಣಿ ಮಂಗಳವಾರ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನಲ್ಲಿ ಏನೇನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ವಾಟ್ಸಾಪ್​ ಅಥವಾ ಇನ್ಯಾವುದೇ ಸಾಮಾಜಿಕ ಮಾಧ್ಯಮ ಆ್ಯಪ್​ಗಳಿಲ್ಲ. iSPIRT ಫೌಂಡೇಷನ್​ನ ತನುಜ್​ ಭೋಜ್​ವಾನಿ ಜತೆಗೂಡಿ ದ ಆರ್ಟ್​ ಆಫ್ ಬಿಟ್​ಫುಲ್​ನೆಸ್​ ಎಂಬ ಪುಸ್ತಕದ ಸಹ ಲೇಖಕರಾಗಿದ್ದಾರೆ ನಿಲೇಕಣಿ. ಪದೇಪದೇ "ತಂತ್ರಜ್ಞಾನದ ಜತೆಗಿನ ನಂಜಿನ ಸಂಬಂಧ"ದ ಬಗ್ಗೆ ಮಾತನಾಡಿದ್ದಾರೆ.

1 / 5
ಆಧಾರ್​ನ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ತಂತ್ರಜ್ಞಾನ ಪರವಾಗಿ ನಂದನ್ ನಿಲೇಕಣಿ ಅವರ ಆಲೋಚನೆಯದು ದೊಡ್ಡ ಪಾಲಿದೆ. ಮಂಗಳವಾರದಂದು ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು, ತಮ್ಮ ಡಿಜಿಟಲ್​ ಜೀವನವನ್ನು ವಿವಿಧ ಸಾಧನಗಳು (ಡಿವೈಸ್​ಗಳ) ಮೂಲಕ ನಿರ್ವಹಿಸಲು ಬಯಸುವುದಾಗಿ ಹೇಳಿದ್ದಾರೆ. "ವಾಟ್ಸಾಪ್ ಇಲ್ಲ. ನೋಟಿಫಿಕೇಷನ್ ಬ್ಯಾಡ್ಜಸ್ ಇಲ್ಲ. ಕೇವಲ ಅಗತ್ಯ ಅಪ್ಲಿಕೇಷನ್​ಗಳು ಮಾತ್ರ," ಎಂದು ಟ್ವೀಟ್ ಮಾಡಿದ್ದಾರೆ.

ಆಧಾರ್​ನ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ತಂತ್ರಜ್ಞಾನ ಪರವಾಗಿ ನಂದನ್ ನಿಲೇಕಣಿ ಅವರ ಆಲೋಚನೆಯದು ದೊಡ್ಡ ಪಾಲಿದೆ. ಮಂಗಳವಾರದಂದು ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು, ತಮ್ಮ ಡಿಜಿಟಲ್​ ಜೀವನವನ್ನು ವಿವಿಧ ಸಾಧನಗಳು (ಡಿವೈಸ್​ಗಳ) ಮೂಲಕ ನಿರ್ವಹಿಸಲು ಬಯಸುವುದಾಗಿ ಹೇಳಿದ್ದಾರೆ. "ವಾಟ್ಸಾಪ್ ಇಲ್ಲ. ನೋಟಿಫಿಕೇಷನ್ ಬ್ಯಾಡ್ಜಸ್ ಇಲ್ಲ. ಕೇವಲ ಅಗತ್ಯ ಅಪ್ಲಿಕೇಷನ್​ಗಳು ಮಾತ್ರ," ಎಂದು ಟ್ವೀಟ್ ಮಾಡಿದ್ದಾರೆ.

2 / 5
ಉಬರ್, ಆಪಲ್​ಟಿವಿ ಮತ್ತು ಇನ್ಫೋಸಿಸ್ ಲೆಕ್ಸ್

ನಂದನ್ ನಿಲೇಕಣಿ ಅವರು ಬಳಸುವ ಅಗತ್ಯ ಆ್ಯಪ್​ಗಳು ಅಂದರೆ ಅದರಲ್ಲಿ ಉಬರ್, ಆಪಲ್​ಟಿವಿ ಮತ್ತು ಇನ್ಫೋಸಿಸ್ ಲೆಕ್ಸ್ ಇವೆ. ಇನ್ನು ನೀವು ಸಹ ಹೋಮ್​ ಸ್ಕ್ರೀನ್ ಷೇರ್​ ಮಾಡಿ ಎಂದು ನಂದನ್ ನೀಡಿರುವ ಆಹ್ವಾನಕ್ಕೆ ಅವರ ಟ್ವಿಟರ್​ ಖಾತೆಯ ಫಾಲೋವರ್​ಗಳ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯಿಸಿದ್ದಾರೆ. ತಾವು ಕೂಡ ನೋಟಿಫಿಕೇಷನ್​ ಬ್ಯಾಡ್ಜ್​ಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಯತ್ನಿಸುವುದಾಗಿ ಹೇಳಿದ್ದಾರೆ. ಭೋಜ್​ವಾನಿ ಕೂಡ ತಮ್ಮ ಫೋನ್​ನ ಹೋಮ್​ ಸ್ಕ್ರೀನ್​ನ ಹಂಚಿಕೊಂಡಿದ್ದು, ನಿಲೇಕಣಿ ಅವರಿಗಿಂತ ಹೆಚ್ಚು "ಕ್ರೂರ"ವಾಗಿ ತಾವೇ ನಡೆದುಕೊಂಡಿರುವುದಾಗಿ ಹೇಳಿದ್ದಾರೆ.

3 / 5
ಒಂದೊಂದು ಉದ್ದೇಶಕ್ಕೆ ಒಂದೊಂದು ಡಿವೈಸ್

ನಂದನ್​ ನಿಲೇಕಣಿ ಅವರು ಜನವರಿಯಲ್ಲಿ ಮನಿಕಂಟ್ರೋಲ್ ಜತೆ ಮಾತನಾಡುತ್ತಾ ಹೇಳಿದ್ದರು, ವಿವಿಧ ಸಾಧನಗಳನ್ನು ಬಳಸಿ ಹೇಗೆ ತಮ್ಮ ಡಿಜಿಟಲ್​ ಜೀವನ ಹತೋಟಿ ಮಾಡುವುದಾಗಿ ತಿಳಿಸಿದ್ದರು. "ನನ್ನ ಲ್ಯಾಪ್​ಟಾಪ್​ ಉದ್ಯೋಗಕ್ಕಾಗಿ. ನನ್ನ ಫೋನ್ ಸಂವಹನಕ್ಕೆ. ನನ್ನ ಐಪ್ಯಾಡ್ ಕ್ಯುರೇಟೇಡ್ ಕಂಟೆಂಟ್ ಮತ್ತು ಮನರಂಜನೆಗಾಗಿ," ಎಂದಿದ್ದರು.

4 / 5
ವಾಯ್ಸ್​ಕಾಲ್ ಮತ್ತು ಎಸ್ಸೆಮ್ಮೆಸ್​ಗಷ್ಟೇ ಸೀಮಿತ

ತಂತ್ರಜ್ಞಾನ ಜತೆಗೆ ಆರೋಗ್ಯಕರ ಸಂಬಂಧ ಕುರಿತು ಮಾತನಾಡಿರುವ ನಂದನ್ ನಿಲೇಕಣಿ, ನಾನು ವಾಯ್ಸ್​ ಕಾಲ್​ ಮತ್ತು ಎಸ್ಸೆಮ್ಮೆಸ್​ಗಷ್ಟೇ ಸೀಮಿತವಾಗಬೇಕು ಅಂದುಕೊಂಡಿದ್ದೆ. ಟ್ವಿಟರ್​ವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾಜಿಕ ಮಾಧ್ಯಮ ಬಳಸುವುದಿಲ್ಲ. ಏಕೆಂದರೆ ನಾನು ಅದನ್ನು ಫಾಲೋವರ್​ಗಳ ಪ್ರಚಾರದ ಸಾಧನವಾಗಿ ಬಳಸುತ್ತೇನೆ. ಜತೆಗೆ ಝೀರೋ ಇನ್​ಬಾಕ್ಸ್ ನೀತಿ ಅನುಸರಿಸುತ್ತೇನೆ.

5 / 5

Published On - 2:00 pm, Wed, 16 February 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!