Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G

ರಿಲಯನ್ಸ್ ಜಿಯೋ ವಿವಿಧ ಆಫರ್ ಮತ್ತು ಡಿಸ್ಕೌಂಟ್ ಪ್ಲ್ಯಾನ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಇತರ ನೆಟ್​ವರ್ಕ್​ಗಳಿಂದ ಹೆಚ್ಚಿನ ಸಂಖ್ಯೆಯ ಬಳಕೆದಾರರು ಜಿಯೋ ನೆಟ್​ವರ್ಕ್ ಸೇರಿಕೊಂಡಿದ್ದಾರೆ. ಈ ಬಾರಿ ರಿಲಯನ್ಸ್ ಜಿಯೋ ಆಕರ್ಷಕ, ವಾರ್ಷಿಕ ಪ್ಲ್ಯಾನ್ ಪರಿಚಯಿಸಿದೆ.

Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G
ರಿಲಯನ್ಸ್ ಜಿಯೋ
Follow us
|

Updated on:Mar 16, 2023 | 7:02 PM

ರಿಲಯನ್ಸ್ ಜಿಯೋ (Reliance Jio), ವಿವಿಧ ಕೊಡುಗೆಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅದರಲ್ಲೂ Jio 5G ಬಂದ ಮೇಲೆ, ಹೆಚ್ಚಿನ ಪ್ರದೇಶಗಳಲ್ಲಿ ಜಿಯೋ ಕವರೇಜ್ ಇದ್ದು, ಆಕರ್ಷಕ ಆಫರ್ ನೀಡುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಅಧಿಕ ಸಂಖ್ಯೆಯ ಬಳಕೆದಾರರನ್ನು ಸೆಳೆಯುತ್ತಿದೆ. ಈ ಬಾರಿ ಜಿಯೋ, ಪ್ರಿಪೇಯ್ಡ್ ಹೊಸ ಪ್ಲ್ಯಾನ್ ಪರಿಚಯಿಸಿದೆ. ಜಿಯೋ ₹2,999 ರೀಚಾರ್ಜ್ ಮಾಡಿದರೆ, 1 ವರ್ಷ ವ್ಯಾಲಿಡಿಟಿ ದೊರೆಯುತ್ತದೆ. ಅಲ್ಲದೆ, ಪ್ರತಿದಿನ 2.5 ಜಿಬಿ Jio 5G ಡೇಟಾ ದೊರೆಯಲಿದೆ. ಆಗಾಗ ರೀಚಾರ್ಜ್ ಮಾಡುವ ಬದಲು, ಒಮ್ಮೆಲೆ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿದರೆ, ಅದರಿಂದ ಉಳಿತಾಯವೂ, ಅನುಕೂಲವೂ ಆಗಲಿದೆ.

ರಿಲಯನ್ಸ್ ಜಿಯೋ ರಿಚಾರ್ಜ್ ಪ್ಲ್ಯಾನ್

ವಾರ್ಷಿಕ ಪ್ಲ್ಯಾನ್ ಬಯಸುವವರನ್ನು ಗಮನದಲ್ಲಿರಿಸಿಕೊಂಡು, ರಿಲಯನ್ಸ್ ಜಿಯೋ ಪರಿಚಯಿಸಿದೆ ಹೊಸ ರಿಚಾರ್ಜ್ ಪ್ಲ್ಯಾನ್. ಭಾರತದಲ್ಲಿನ ಪ್ರಿಪೇಯ್ಡ್ ಗ್ರಾಹಕರು ₹2,999 ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ 1 ವರ್ಷ ವ್ಯಾಲಿಡಿಟಿ ದೊರೆಯಲಿದೆ. ಅಲ್ಲದೆ, ಈ ಪ್ಲ್ಯಾನ್​ನಲ್ಲಿ ಪ್ರತಿದಿನ 2.5 ಜಿಬಿ Jio 5G ಡೇಟಾ ಕೊಡುಗೆ ದೊರೆಯಲಿದೆ. ಅಂದರೆ, ಗ್ರಾಹಕರು ಈ ದೀರ್ಘಾವಧಿಯ ಪ್ಲ್ಯಾನ್ ರಿಚಾರ್ಜ್ ಮಾಡಿದರೆ, ವಾರ್ಷಿಕ 912.5GB ಡೇಟಾ ಅಂದರೆ ದಿನಕ್ಕೆ 2.5GB ಡೇಟಾ ಮಿತಿಯಂತೆ ದೊರೆಯಲಿದೆ.

ಇನ್ನಷ್ಟು ಜಿಯೋ ಕೊಡುಗೆಗಳು

ಜಿಯೋ ₹2,999 ಪ್ಲ್ಯಾನ್ ರಿಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಸಿನಿಮಾ ಕೊಡುಗೆ ದೊರೆಯಲಿದೆ. ಈ ಬಗ್ಗೆ ಕಂಪನಿ ಪೋರ್ಟಲ್​ನಲ್ಲಿ ಹೊಸ ಆಫರ್ ವಿವರವನ್ನು ರಿಲಯನ್ಸ್ ಜಿಯೋ 5G ಪ್ರಕಟಿಸಿದೆ. ರಿಲಯನ್ಸ್ ಜಿಯೋ, ಈಗಾಗಲೇ 335 ನಗರಗಳಲ್ಲಿ ಜಿಯೋ 5G ನೆಟ್​ವರ್ಕ್ ಸ್ಥಾಪಿಸಿದೆ. 2023ರ ಕೊನೆಗೆ ದೇಶದ ಎಲ್ಲ ಪ್ರಮುಖ ನಗರಗಳಿಗೆ ಜಿಯೋ 5G ವಿಸ್ತರಣೆ ಮಾಡುವುದಾಗಿ ಕಂಪನಿ ಹೇಳಿದೆ. ಅಲ್ಲದೆ, ವಾರ್ಷಿಕ ಪ್ಲ್ಯಾನ್ ಬೇಡವಾದರೆ ಇತರ ಕಿರು ಅವಧಿಯ ಪ್ಲ್ಯಾನ್ ಲಭ್ಯವಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್​ಪೇಯ್ಡ್ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 16 March 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ