AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಡ್ರಾಯ್ಡ್​ನಲ್ಲಿ ಸುಲಭವಾಗಿ ಲಾಕ್ ಹ್ಯಾಕ್ ಮಾಡಬಹುದು: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಸದ್ಯ ಹೊರಬಿದ್ದಿರುವ ಮಾಹಿತಿಯೊಂದು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ನೀವು ನಿಮ್ಮ ಸ್ಮಾರ್ಟ್​ಫೋನ್​ಗೆ ಯಾವುದೇ ರೀತಿಯ ಲಾಕ್ ಹಾಕಿದ್ದರೂ ಕ್ಷಣಾರ್ಧದಲ್ಲಿ ಅದನ್ನು ಅನ್​ಲಾಕ್ ಮಾಡಬಹುದಾಗಿದೆ.

ಆಂಡ್ರಾಯ್ಡ್​ನಲ್ಲಿ ಸುಲಭವಾಗಿ ಲಾಕ್ ಹ್ಯಾಕ್ ಮಾಡಬಹುದು: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ
Phone Lock
TV9 Web
| Edited By: |

Updated on:Nov 15, 2022 | 12:24 PM

Share

ಸಾಮಾನ್ಯವಾಗಿ ಸ್ಮಾರ್ಟ್​ಫೋನಿನಲ್ಲಿ (Smartphone) ನಮ್ಮ ವೈಯಕ್ತಿಕ ಡಾಟಾ ಪ್ರೊಟೆಕ್ಟ್ ಮಾಡಿಕೊಳ್ಳುವ ಉದ್ದೇಶದಿಂದ ಯಾವಾಗಲೂ ಪಿನ್, ಪಾಸ್ ವರ್ಡ್ ಇಲ್ಲವೇ ಸ್ಕ್ರೀನ್ ಲಾಕ್ ಪ್ಯಾಟರ್ನ್ ಅನ್ನು ಬಳಕೆ ಮಾಡುವುದು ವಾಡಿಕೆ. ಪ್ರತಿಯೊಬ್ಬರೂ ಕೂಡ ತಮ್ಮ ಫೋನಿಗೆ ಇದನ್ನು ಬಳಸಿಯೇ ಬಳಸುತ್ತಾರೆ. ಮೊಬೈಲ್ (Mobile) ಯಾರದ್ದೋ ಕೈ ಸೇರಿದಾಗ ಯಾವುದೇ ಅಚಾತುರ್ಯಗಳು ನಡೆಯಬಾರದು ಎಂಬುದು ಇದರ ಹಿಂದಿನ ಉದ್ದೇಶ. ಆದರೆ, ಸದ್ಯ ಹೊರಬಿದ್ದಿರುವ ಮಾಹಿತಿಯೊಂದು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ನೀವು ನಿಮ್ಮ ಸ್ಮಾರ್ಟ್​ಫೋನ್​ಗೆ ಯಾವುದೇ ರೀತಿಯ ಲಾಕ್ (Lock) ಹಾಕಿದ್ದರೂ ಕ್ಷಣಾರ್ಧದಲ್ಲಿ ಅದನ್ನು ಅನ್​ಲಾಕ್ ಮಾಡಬಹುದಾಗಿದೆ.

ಈರೀತಿಯ ಲೋಪವೊಂದು ಗೂಗಲ್ ಪಿಕ್ಸೆಲ್ ಸ್ಮಾರ್ಟ್​ಫೋನ್​ನಲ್ಲಿ ಕಂಡುಬಂದಿದೆ. ಡೇವಿಡ್ ಶುಟ್ಜ್ ಎಂಬವರು ಈ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದಾರೆ. ಅವರು ಲಾಕ್ ಆಗಿರುವ ಡಿಸ್ ಪ್ಲೇಯನ್ನು ಬಳಸಿಕೊಂಡು ಫೋನ್ ಅನ್ನು ಹೇಗೆ ಅನ್‌ಲಾಕ್ ಮಾಡಬಹುದು ಮತ್ತು ಇದು ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈಗ ನಿಮ್ಮ ಫೋನ್ ಲಾಕ್ ಆಗಿದ್ದು ತಪ್ಪು ಪಾಸ್​ವರ್ಡ್ ಹಾಕಿ ಓಪನ್ ಆಗದೆ ಇದ್ದಾಗ ಪಾಸ್​ವರ್ಡ್ ಹಾಕಿರುವ ಸಿಮ್‌ ಅನ್ನು ಸಿಮ್ ಸ್ಲಾಟ್ ಒಳಗಡೆ ಹಾಕಬೇಕು. ನಂತರ ಅನ್​ಲಾಕ್ ಮಾಡಲು ಪ್ರಯತ್ನಿಸಿ ತಪ್ಪಾದ ಕೋಡ್ ಅನ್ನು ಮೂರು ಬಾರಿ ಒತ್ತಬೇಕು. ಆಗ ಸಿಮ್ ಕಾರ್ಡ್‌ನಲ್ಲಿ ಲಭ್ಯವಿರುವ PUK ಕೋಡ್ ಕೇಳುತುತ್ತದೆ. ಪಿಯುಕೆ ಕೋಡ್ ಅನ್ನು ನಮೂದಿಸಿದ ತಕ್ಷಣ ಅಟೋಮೆಟಿಕ್ ಆಗಿ ನಿಮ್ಮ ಸ್ಮಾರ್ಟ್​ಫೋನ್ ಲಾಕ್ ತೆರೆದುಕೊಳ್ಳುತ್ತಿದೆ. ಈ ಸಮಸ್ಯೆಯನ್ನು ತೋರಿಸಲು ಡೇವಿಡ್ ಶುಟ್ಜ್ ವಿಡಿಯೋವನ್ನು ಕೂಡ ಮಾಡಿದ್ದಾರೆ.

ಇದನ್ನೂ ಓದಿ
Image
Lava Blaze 5G: ಭಾರತದ ಅತಿ ಅಗ್ಗದ 5ಜಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್‌ ಇಂದಿನಿಂದ ಖರೀಗೆ ಲಭ್ಯ
Image
Cyber Crime: ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?: ಇಲ್ಲಿದೆ ಫುಲ್ ಡಿಟೇಲ್ಸ್
Image
Tech Tips: ಎಚ್ಚರ: ಮನೆಯೊಳಗೆ ತಪ್ಪಿಯೂ ಈ ಅಪಾಯಕಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ
Image
WhatsApp Update: ಎರಡು ಮೊಬೈಲ್​ಗಳಲ್ಲಿ ಒಂದೇ ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್

ಈ ಟ್ರಿಕ್ ಹ್ಯಾಕರ್​​ಗಳಿಗೆ ತಿಳಿದರೆ ಮುಗಿಯಿತು. ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್​ಫೋನನ್ನು ಈರೀತಿಯಾಗಿ ಮಾಡಿ ಸುಲಭವಾಗಿ ಅನ್​ಲಾಕ್ ಮಾಡಬಹುದು. ಸದ್ಯ ಗೂಗಲ್ ಈ ಸಮಸ್ಯೆಯನ್ನು ಸಾಫ್ಟ್‌ವೇರ್ ಅಪ್ಡೇಟ್ ಮಾಡುವ ಮೂಲಕ ಸರಿಪಡಿಸಿದೆ. ಬಗ್ ಬೌಂಟಿ ಕಾರ್ಯಕ್ರಮದ ಭಾಗವಾಗಿ ಡೇವಿಡ್ ಈ ಸಮಸ್ಯೆಯನ್ನು ಗೂಗಲ್​ಗೆ ವರದಿ ಮಾಡಿದರು. ಇದಕ್ಕಾಗಿ ಗೂಗಲ್ ಇವರಿಗೆ $70,000 (ಅಂದಾಜು ರೂ. 5,60,000) ಬಹುಮಾನವನ್ನು ನೀಡಲಾಯಿತು.

ನಿಮ್ಮ ಸ್ಮಾರ್ಟ್​ಫೋನ್ ಲಾಕ್ ಆಗಿದ್ದರೆ ಫ್ಯಾಕ್ಟರಿ ರೀಸೆಟ್‌ ಮಾಡುವ ಮೂಲಕ ಪ್ಯಾಟರ್ನ್‌ ಲಾಕ್‌ ಅನ್‌ಲಾಕ್‌ ಮಾಡಬಹುದು. ಈ ಟ್ರಿಕ್ ಬಳಸಿದಲ್ಲಿ, ನಿಮ್ಮ ಫೋನ್‌ನಲ್ಲಿ ಸೇವ್‌ ಆಗಿರುವ ಎಲ್ಲಾ ಡಾಟಾ ಡಿಲೀಟ್ ಆಗುತ್ತದೆ. ಈ ಟ್ರಿಕ್‌ ಬಳಸಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.

  • ನಿಮ್ಮ ಆಂಡ್ರಾಯ್ಡ್ ಸ್ವಿಚ್‌ ಆಫ್‌ ಮಾಡಿ, ಸ್ವಲ್ಪ ಸಮಯ ಕಾಯಿರಿ.
  • ನಂತರ ‘+’ ಸೌಂಡ್‌ ಬಟನ್ ಮತ್ತು ಪವರ್‌ ಬಟನ್‌ ಅನ್ನು ಒಂದೇ ಸಮಯದಲ್ಲಿ ಪ್ರೆಸ್ ಮಾಡಿ.
  • ಮೇಲಿನಂತೆ ಮಾಡಿದಲ್ಲಿ, ನಿಮ್ಮ ಆಂಡ್ರಾಯ್ಡ್ ಡಿವೈಸ್‌ ರಿಕವರಿ ಮೋಡ್‌ನಲ್ಲಿ ಓಪನ್ ಆಗುತ್ತದೆ. ಈ ಫ್ಯಾಕ್ಟರಿ ರೀಸೆಟ್ ಬಟನ್ ಅನ್ನು ಮೆನುವಿನಲ್ಲಿ ಆಯ್ಕೆ ಮಾಡಿ.
  • ಹಲವು ಆಪ್ಶನ್‌ಗಳ ಲೀಸ್ಟ್ ಪಡೆದ ನಂತರ, ‘Wipe Cache Partition To Clean Data’ ಎಂಬಲ್ಲಿ ಟ್ಯಾಪ್‌ ಮಾಡಿ.
  • ನಂತರ ಆಂಡ್ರಾಯ್ಡ್ ಡಿವೈಸ್‌ ಸ್ವಿಚ್‌ ಆನ್‌ ಮಾಡಿ.

Published On - 12:24 pm, Tue, 15 November 22

Follow Us
Web contact
Web contact

TV9 Kannada

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?